ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ಹೊನ್ನಾವರ (Honnavar): ತಾಲೂಕಿನ ಚಿಕ್ಕನಕೋಡು ಪಂಚಾಯತ್ ವ್ಯಾಪ್ತಿಯ ಹೊಸಗೋಡು ನಾಗರ ಹೊಳೆ ಹಳ್ಳಕ್ಕೆ ಸೇತುವೆ ನಿರ್ಮಾಣ ಆಗದೇ ಇರುವುದರಿಂದ ನಾಗರಿಕರು ತೊಂದರೆ ಎದುರಿಸುತ್ತಿದ್ದಾರೆ.
ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಅಂದಿನ ಶಾಸಕ ಸುನೀಲ್ ನಾಯ್ಕ ಸೇತುವೆ ಕಾಮಗಾರಿಗೆ ಚಾಲನೆ ನೀಡಿದ್ದಾರೆಂಬ ನಾಮಫಲಕ ಅಳವಡಿಸಲಾಗಿತ್ತು. ಆದರೆ ಇದುವರೆಗೆ ಸೇತುವೆ ಆಗದಿರುವುದರಿಂದ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿದ್ದಾರೆ. ತಮ್ಮೂರಿಗೆ ಸೇತುವೆ ನಿರ್ಮಿಸಿ ಕೊಡಿ ಎಂದು ಈ ಭಾಗದ ನಾಗರಿಕರು ಹಲವು ವರ್ಷಗಳಿಂದ ಸಂಬಂಧಪಟ್ಟ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸುತ್ತಾ ಬಂದಿದ್ದಾರೆ. ಆದರೆ ಇದುವರೆಗೆ ಸೇತುವೆ ಕಾಮಗಾರಿ ಆಗಿಲ್ಲ.
ಆಳುವವರು ಕೇವಲ ಸುಳ್ಳು ಆಶ್ವಾಸನೆ, ಭರವಸೆ ಮೂಲಕ ಇಲ್ಲಿನ ಮುಗ್ದ ಜನರಿಗೆ ಯಾಮಾರಿಸುತ್ತಿರುವುದು ಕಂಡು ಬಂದಿದೆ. ಜನಪ್ರತಿನಿಧಿಗಳು ರಾಜಕಾರಣಿಗಳು ಈ ಸಮಯದಲ್ಲಿ ರಾಜಕಾರಣ ಮಾಡದೇ ನಾಗರಿಕರ ಅಗತ್ಯತೆಗೆ ಸ್ಪಂದಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತ ಮಾಸ್ತಪ್ಪ ನಾಯ್ಕ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹೊಸಗೋಡು ಗ್ರಾಮ ಮೂಲಭೂತ ಸೌಕರ್ಯದಿಂದ ವಂಚಿತವಾಗಿವೆ. ಮೊಬೈಲ್ ನೆಟ್ವರ್ಕ್ ಸಮಸ್ಯೆಯಿಂದ ವಿದ್ಯಾರ್ಥಿಗಳು ಪರದಾಡುತ್ತಿದ್ದೂ, ಇನ್ನೂ ಸೇತುವೆ, ರಸ್ತೆ ಇಲ್ಲದೆ ಜನರ ಸಂಕಷ್ಟ ಕೇಳುವವರೇ ಇಲ್ಲವಾಗಿದೆ. ಹೀಗಾಗಿ ಭಟ್ಕಳ-ಹೊನ್ನಾವರವನ್ನ ಪ್ರತಿನಿಧಿಸುವ ಜನಪ್ರತಿನಿಧಿಗಳು ಮಳೆಗಾಲದ ಮುನ್ನ ಜನರಿಗೆ ಅಗತ್ಯವಿರುವ ಸೇತುವೆ ನಿರ್ಮಿಸಲು ಮುಂದಾಗಬೇಕು. ಇಲ್ಲದಿದ್ದಲ್ಲಿ ಅವರ ಮನೆಯ ಮುಂದೆ ಪ್ರತಿಭಟನೆ ಧರಣಿ ನಡೆಸುವ ಎಚ್ಚರಿಕೆ ನೀಡಿದ್ದಾರೆ.
ಇದನ್ನು ಓದಿ : ಮಲ್ಪೆ ಬಂದರಿನಲ್ಲಿ ಮಹಿಳೆ ಕಟ್ಟಿ ಹಾಕಿ ಹಲ್ಲೆ ಪ್ರಕರಣ. ಮೂವರ ಬಂಧನ
ಕಾರವಾರದಲ್ಲಿ ಇನ್ಮುಂದೆ ರೆವೆಂಟೊ ಮೆಡ್ ಸ್ಕ್ವೇರ್ ಕ್ಲಿನಿಕ್ ಮತ್ತು ಪಂಚಕರ್ಮ ಸೇವೆ.
ಯುಗಾದಿ ಹಬ್ಬಕ್ಕೆ ಬೆಂಗಳೂರು – ಮುರುಡೇಶ್ವರ ರೈಲು ಕಾರವಾರಕ್ಕೆ ವಿಸ್ತರಣೆ