ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಕಾರವಾರ (Karwar): ಆಕಳ ಕಳ್ಳತನ(Cow Theft) ನಡೆದಲ್ಲಿ ನಡೆಸಿದವರನ್ನ ಸರ್ಕಲ್ ನಲ್ಲಿ ನಿಲ್ಲಿಸಿ ಗುಂಡು(Firing) ಹಾಕಿ ಎಂದು ಜಿಲ್ಲಾ ಉಸ್ತುವಾರಿ ಸಚಿವ(District incharge Minister) ಮಂಕಾಳ ವೈದ್ಯ(ಮಾಂಕಾಳ್ vaidya) ಗುಡುಗಿದ್ದಾರೆ.

ಕಾರವಾರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಉತ್ತರಕನ್ನಡ (Uttarakannada) ಜಿಲ್ಲೆಯ ಆಕಳು ಕಳ್ಳತನ ಹಲವು ವರ್ಷಗಳಿಂದ ನಡೆದು ಬಂದಿದೆ. ಆಕಳ ಪ್ರಕರಣದಲ್ಲಿ ಪೊಲೀಸ್ ಇಲಾಖೆಯಿಂದ ಕ್ರಮ ತೆಗೆದುಕೊಳ್ಳಲು ಸೂಚಿಸಿದ್ದೇನೆ. ಈಗಾಗಲೇ ಕೆಲ ಪ್ರಕರಣದಲ್ಲಿ ಹಲವು ಆರೋಪಿಗಳನ್ನ ಬಂಧಿಸಲಾಗಿದೆ. ಇನ್ಮೇಲೆ ಇಂಥದ್ದಾದರೆ ನಾವು ಸಹಿಸುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದೆ ವೇಳೆ ಕುಮಟಾ ಶಾಸಕ(Kumta MLA) ದಿನಕರ ಶೆಟ್ಟಿ(Dinakara Shetti) ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಸಚಿವರು ದಿನಕರ ಶೆಟ್ಟಿ ದಿನಕರ ಖಾನ್ ಆಗಿಬಿಟ್ರಾ.  ಮುಖ್ಯಮಂತ್ರಿ, ಗೃಹ ಮಂತ್ರಿ(Home minister) ಇಲ್ಲಿಗೆ ಬಂದು ಏನು ಮಾಡ್ತಾರೆ. ಅವರು ಸಪೋರ್ಟ್ ಮಾಡಲಿಲ್ಲಾದ್ರೆ ಕೇಸ್ ಆಗುತ್ತಿತ್ತಾ ಎಂದು ಪ್ರಶ್ನಿಸಿದ ಸಚಿವರು ನನ್ನ ಗಮನಕ್ಕೆ ಬಂದು ಎಲ್ಲಾ ಕ್ರಮ ಕೈಗೊಳ್ಳಲಾಗಿದೆ. ಸರ್ಕಾರ ಯಾರಿಗೂ ಸಪೋರ್ಟ್ ಮಾಡೋದಿಲ್ಲ ಎಂದರು.

ಸರ್ಕಾರ (Government) ರೈತರ, ಗೋ ಸಾಕುವವರ ಪರವಾಗಿದೆ. ಯಾರು ಭಯ ಪಡುವ ಅಗತ್ಯವಿಲ್ಲ. ಹಿಂದಿನ ಸರ್ಕಾರ ಸುಮ್ಮನಿರುತಿತ್ತು. ಮುಂದೆ ನಾವು ಈ ವಿಚಾರದಲ್ಲಿ ಸುಮ್ಮನಿರಲ್ಲ.  ಬಿಜೆಪಿ(BJP) ಕೆಟ್ಟ ರಾಜಕಾರಣ ಮಾಡುವುದು ಬಿಡಲಿ ಎಂದು ಮಾಂಕಾಳ್ ವೈದ್ಯ ಹೇಳಿದರು.
ಉತ್ತರಕನ್ನಡ

ವಿದ್ಯುತ್ ಬಿಲ್ ಬಾಕಿ ಸುಳ್ಳು :  ನಮ್ಮ ವಿದ್ಯುತ್ ಬಾಕಿ(Electricity Bill) 8ಲಕ್ಷ ರೂ ಇದೆ ಎಂಬುದು ಸುಳ್ಳು ಎಂದು ಮೀನುಗಾರಿಕೆ ಮತ್ತು ಒಳನಾಡು ಜಲಸಾರಿಗೆ ಸಚಿವ ಮಾಂಕಾಳ್ ವೈದ್ಯ ಸ್ಪಷ್ಟಪಡಿಸಿದ್ದಾರೆ.

ನಾನು ರಾಜಕಾರಣಕ್ಕೆ ಬರುವ ಮುನ್ನವೇ ನಾನು ಇಂಡಸ್ಟ್ರೀಯಲಿಸ್ಟ್(Industrialist). ನನ್ನದು ಪ್ಯಾಕ್ಟರಿ ಇದೆ, ಹೋಟೆಲ್ ಇದೆ, ಸ್ಕೂಲ್ ಇದೆ. ನಮ್ಮ ಸ್ಕೂಲ್ ಲ್ಲಿ ವಿದ್ಯುತ್ ಗೆ ಆದಾಯ ಬರುತ್ತಿದೆ. ಯಾಕಂದ್ರೆ  ಶಾಲೆಗೆ ಸೋಲಾರ್(Solar) ಅಳವಡಿಸಿದ್ದೇವೆ. ತಿಂಗಳಿಗೆ ಐದು ಸಾವಿರ ರೂಪಾಯಿ ಇಲಾಖೆಯರೇ ನೀಡ್ತಾರೆ  ಎಂದರು.

ನನ್ನದು ಪ್ರತಿ ತಿಂಗಳು 8ರಿಂದ 25ಲಕ್ಷ ರೂ ಬ್ಯಾಲೆನ್ಸ್ ಇರುತ್ತದೆ. ಬ್ಯಾಲೆನ್ಸ್ ಇದ್ದುದಕ್ಕೆ ಹೆಸ್ಕಾಂನವರು ಬಡ್ಡಿ ಹಾಕುತ್ತಾರೆ.  ಆದರೆ ಇವತ್ತಿನವರೆಗೆ ಒಂದೇ ಒಂದು ರೂ ವಿದ್ಯುತ್ ಬಿಲ್ ಬಾಕಿ ಇರಿಸಿಕೊಂಡಿಲ್ಲ. ವರ್ಷಕ್ಕೆ ಒಂದೂವರೆ ಕೋಟಿ ರೂ ಕರೆಂಟ್ ಬಿಲ್ ತುಂಬುತ್ತಿದ್ದೇನೆ. ಹೆಸ್ಕಾಂ ಗೆ(Hescom) ಟೋಪಿ ಹಾಕುವುದಾಗಲಿ, ತುಂಬದೇ ಇರುವುದಾಗಲಿ ಇಲ್ಲ. ಇಂದಿನವರೆಗೆ ನಮ್ಮದು ಒಂದೇ ಒಂದು ರಿಮಾರ್ಕ್ ಇಲ್ಲ.  ಒಂದೇ ಒಂದು ಚೆಕ್ ವಾಪಾಸ್ ಹೋದದಿಲ್ಲ. ವಯಕ್ತಿಕವಾಗಿ ಯಾರು ಹೇಳಿದರಂತೆ ಸುದ್ದಿ ಹಾಕಬೇಡಿ ಎಂದು ಸಚಿವರು ಹೇಳಿದ್ದಾರೆ.

ನಾನು 25 ವರ್ಷದಿಂದ ಬಿಲ್ ಸರಿಯಾಗಿ ತುಂಬುತ್ತಿದ್ದೇನೆ. 13 ವರ್ಷದಿಂದ ಶಾಲೆಯದ್ದು ಒಂದೇ ಒಂದು ರೂ ಬಾಕಿ ಇಲ್ಲ.  ತಪ್ಪು ಮಾಹಿತಿ ಕೊಟ್ಟು ಶಾಲೆಯ ಹೆಸರು ಹಾಳು ಮಾಡುತ್ತಿದ್ದಾರೆ.  ಬಡವರಿಗೆ ಒಂದು ಕಾನೂನು, ಶ್ರೀಮಂತರಿಗೆ ಒಂದು ಕಾನೂನೆ. ಒಂದು ವೇಳೆ ತಪ್ಪು ಗೊತ್ತಾದಲ್ಲಿ ನೇರವಾಗಿ ಮಾತನಾಡಿ ಉತ್ತರ ನೀಡುತ್ತೇನೆ ಎಂದು ಕಾರವಾರದಲ್ಲಿ ಮಂಕಾಳ್ ವೈದ್ಯ ಹೇಳಿಕೆ  ನೀಡಿದ್ದಾರೆ.

ಇದನ್ನು ಓದಿ : ತಮಗಿಷ್ಟದ ಸ್ಥಳಕ್ಕೆ ಭೇಟಿ ನೀಡುತ್ತಿರುವ ನಟ ಶಿವರಾಜಕುಮಾರ್. ಯಾಣಕ್ಕೆ ಭೇಟಿ

ಮೊದಲ ಬಾರಿಗೆ ಮದುವೆಗೆ ಸಾಕ್ಷಿಯಾಗುತ್ತಿದೆ ರಾಷ್ಟ್ರಪತಿ ಭವನ.

ಘನ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಬೆಂಕಿ. ಆತಂಕದ ವಾತಾವರಣ.