ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಶಿರಸಿ (Sirsi) : ಇತ್ತೀಚಿಗಷ್ಟೇ ಕ್ಯಾನ್ಸರ್ ಚಿಕಿತ್ಸೆಗೆ(Cancer Treatment) ಒಳಗಾಗಿ ಗುಣಮುಖರಾದ ಸ್ಯಾಂಡಲ್‌ವುಡ್‌ ಸ್ಟಾರ್ ನಟ ಶಿವರಾಜಕುಮಾ‌ರ್(Actor Shivarajakumar)  29 ವರ್ಷಗಳ ಬಳಿಕ ಮತ್ತೆ ಯಾಣಗೆ ಭೇಟಿ(Yaana visit) ನೀಡಿದ್ದಾರೆ.

ವಿದೇಶಕ್ಕೆ ಹೋಗಿ ಕ್ಯಾನ್ಸರ್ ಚಿಕಿತ್ಸೆ ಪಡೆದ ಬಳಿಕ ಅವರು ತಮಗಿಷ್ಟವಾಗಿರುವ ಸ್ಥಳಗಳಿಗೆ ಭೇಟಿ ಕೊಡುತ್ತಿದ್ದಾರೆ. ಪ್ರಕೃತಿ ರಮ್ಯ ತಾಣ ಯಾಣಗೆ ಭೇಟಿ ನೀಡಿದ್ದಾರೆ.

ಮೂರು ದಶಕಗಳ ಹಿಂದೆ ಶಿವರಾಜಕುಮಾರ್(Shivarajakumar), ರಮೇಶ್ ಅರವಿಂದ್(Ramesh Aravind), ಪ್ರೇಮಾ(Prema) ಅಭಿನಯದ ‘ನಮ್ಮೂರ ಮಂದಾರ ಹೂವೇ’ (Nammura Mandara Hoove) ಸಿನಿಮಾದ ಶೂಟಿಂಗ್(Cinema Shooting) ಅನ್ನು ಯಾಣದಲ್ಲಿ ಮಾಡಲಾಗಿತ್ತು. ಇದೀಗ ಅದೇ ಜಾಗಕ್ಕೆ ಭೇಟಿ ನೀಡಿ ಶಿವಣ್ಣ ಖುಷಿ ಅನುಭವಿಸಿದ್ದಾರೆ.

ನಟ ಯಾಣಕ್ಕೆ ಹೋಗಿರುವ ಫೋಟೋಗಳನ್ನು ತಮ್ಮ ಇನ್‌ಸ್ಟಾಗ್ರಾಮ್(Instragram) ಖಾತೆಯಲ್ಲಿ ಶೇ‌ರ್ ಮಾಡಿಕೊಂಡಿದ್ದಾರೆ. ಆ ಫೋಟೋ ಜೊತೆಗೆ ‘ಬಾಳಿನ ಬೆನ್ನು ಹತ್ತಿ. ನೂರಾರು ಊರು ಸುತ್ತಿ.. ಏನೇನೋ ಕಂಡ ಮೇಲೂ.. ನಮ್ಮೂರೇ ನಮಗೆ ಮೇಲೂ..’ ನಮ್ಮೂರ ಮಂದಾರ ಹೂವೆ’ ನಂತರ ಮತ್ತೆ ನನ್ನ ಯಾಣ ಭೇಟಿ 29 ವರ್ಷಗಳ ಬಳಿಕ ಅಂತ ಅವರು ಬರೆದುಕೊಂಡಿದ್ದಾರೆ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಏನೇ ಇರಲಿ ಶಿವಣ್ಣ ಈಗ ರಿಲ್ಯಾಕ್ಸ್ ಮೂಡ್ ನಲ್ಲಿ ನಮಗಿಷ್ಟ ಬಂದ ಸ್ಥಳ ಸುತ್ತುತ್ತಿದ್ದಾರೆ.

ಇದನ್ನು ಓದಿ : ಮೊದಲ ಬಾರಿಗೆ ಮದುವೆಗೆ ಸಾಕ್ಷಿಯಾಗುತ್ತಿದೆ ರಾಷ್ಟ್ರಪತಿ ಭವನ

ಘನ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಬೆಂಕಿ. ಆತಂಕದ ವಾತಾವರಣ.

ಧರೆಗೆ ಢಿಕ್ಕಿ ಹೊಡೆದ ಮಿನಿ ಬಸ್. 9 ಜನರಿಗೆ ಗಾಯ

ಮತ್ತೋರ್ವ ನಕ್ಷಲ್ ಮಹಿಳೆ ಉಡುಪಿಯಲ್ಲಿ ಶರಣು