ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಕಾರವಾರ (Karwar) : ಚೆನ್ನ ಬಸವಣ್ಣನ ನಾಡು ಉತ್ತರಕನ್ನಡ ಜಿಲ್ಲೆಯ ಜೊಯಿಡಾ ತಾಲೂಕಿನ ಉಳವಿಯಲ್ಲಿ (Ulavi) ಶರಣ ಚೆನ್ನಬಸವಣ್ಣ ರಥೋತ್ಸವ(Rathotsava) ಅದ್ದೂರಿಯಿಂದ ನೆರವೇರಿತು.

ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಜರುಗಿದ  ಮಹಾರಥೋತ್ಸವ ಗುರುವಾರ ಸಂಪನ್ನಗೊಂಡಿತು. ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ  ಆರ್.ವಿ ದೇಶಪಾಂಡೆ, ಎಂ ಎಲ್ಸಿ  ಗಣಪತಿ ಉಳ್ವೆಕರ, ಶ್ರೀ  ಉಳವಿ ಚನ್ನಬಸವೇಶ್ವರ ಟ್ರಸ್ಟ್   ಅಧ್ಯಕ್ಷ ಸಂಜಯ ಕಿತ್ತೂರ, ಉಪಾಧ್ಯಕ್ಷ ಪ್ರಕಾಶ ಕಿತ್ತೂರ, ಬಿ.ಸಿ ಉಮಾಪತಿ, ಅಶ್ವಿತ ಕೊತಂಬ್ರಿ, ವಿರೇಶ ಕಂಬಳಿ, ಉಳವಿ ಗ್ರಾ.ಪಂ ಅಧ್ಯಕ್ಷ ಮಂಜುನಾಥ ಮೋಖಾಶಿ, ಪ್ರಧಾನ ಅರ್ಚಕ ಶಂಕ್ರಯ್ಯ ಕಲ್ಮಠ, ಆಡಳಿತ ಮಂಡಳಿಯವರು  ಮಹಾರಥಕ್ಕೆ ತೆಂಗಿನ ಕಾಯಿ ಒಡೆದು ಪೂಜೆ ಸಲ್ಲಿಸುವ ಮೂಲಕ ಭಕ್ತಾದಿಗಳೊಂದಿಗೆ ರಥ ಎಳೆದು ಚಾಲನೆ ನೀಡಿದರು. ವೀರಭದ್ರ ದೇವಸ್ಥಾನದವರೆಗೂ ಎಳೆದು ಪುನಃ ಶ್ರೀ ಚೆನ್ನಬಸವೇಶ್ವರ ದೇವಸ್ಥಾನದ
ಆವಾರದವರೆಗೆ ರಥ ಎಳೆದು ತರಲಾಯಿತು.

ಭಕ್ತರ ಹರ್ಷೋದ್ಘಾರದ ನಡುವೆ ಶ್ರೀ ಚೆನ್ನಬಸವೇಶ್ವರಗೆ ಜಯಕಾರ ಘೋಷಣೆ ಮೊಳಗಿತು. 

ಲಕ್ಷಾಂತರ ಸಂಖ್ಯೆಯ ಭಕ್ತರು ಜಾತ್ರೆಯಲ್ಲಿ ಬಾಗಿಯಾದರು.  ಉತ್ತರ ಕರ್ನಾಟಕದ ಜಿಲ್ಲೆಗಳಾದ ಬೆಳಗಾವಿ, ಧಾರವಾಡ, ಬೀದರ, ವಿಜಾಪುರ ,ಬಾಗಲಕೋಟೆ, ಗದಗ, ಹಾವೇರಿ ಜಿಲ್ಲೆಗಳಿಂದ  ಲಕ್ಷಾಂತರ ಭಕ್ತರು ಆಗಮಿಸಿ ಚೆನ್ನಬಸವಣ್ಣನನ್ನು ಕಣ್ತುಂಬಿಕೊಂಡರು.

ಭಾರತ ಹುಣ್ಣಿಮೆಯ ಮರುದಿನ ನಡೆವ ಈ ಜಾತ್ರೆಗೆ ವಚನಸಾಹಿತ್ಯ ಮತ್ತು ಶರಣರ ಭಕ್ತರು ಎತ್ತಿನ ಚಕ್ಕಡಿಗಳ ಮೂಲಕ ಆಗಮಿಸುವುದು ಸಂಪ್ರದಾಯ. ಸಾವಿರಕ್ಕೂ ಹೆಚ್ಚು ಚಕ್ಕಡಿಗಳು ಜಾತ್ರೆಗೆ ಎರಡು ದಿನ ಮುಂಚೆ ಆಗಮಿಸಿ, ರಥೋತ್ಸವದ ನಂತರ ತಮ್ಮ ಊರುಗಳಿಗೆ ಮರಳುತ್ತಾರೆ. ಜಾತ್ರಾ ಸಂದರ್ಭದಲ್ಲಿ ಭಕ್ತರಿಗೆ ದೇವಾಲಯ ಸಮಿತಿ ಮತ್ತು ಗ್ರಾಮ ಪಂಚಾಯತ್ ವತಿಯಿಂದ ಭಕ್ತರಿಗೆ ಸೌಲಭ್ಯಗಳನ್ನು ಕಲ್ಪಿಸಲಾಗುತ್ತದೆ.

ಇದನ್ನು ಓದಿ : ಮೈಕ್ರೋಫೈನಾನ್ಸ್ ಸಂಸ್ಥೆಗಳ ಕಿರುಕುಳ ನಿಯಂತ್ರಣಕ್ಕೆ ಸರ್ಕಾರಿ ಆಧ್ಯಾದೇಶ ಜಾರಿ

ಹಾಡು ನಿಲ್ಲಿಸಿದ ಹಾಡುಗಾರ್ತಿ. ಪದ್ಮಶ್ರೀ ಸುಕ್ರಿ ಬೊಮ್ಮು ಗೌಡ ನಿಧನ.

ಭಟ್ಕಳ ವ್ಯಕ್ತಿಯ ಬ್ಯಾಂಕ್ ಖಾತೆಗೆ ಕೈ ಹಾಕಿದ ಸೈಬರ್ ವಂಚಕರು.

ಕರಾವಳಿಯಿಂದ ಮಹಾ ಕುಂಭಮೇಳಕ್ಕೆ ವಿಶೇಷ ರ