ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಬೆಂಗಳೂರು (Bengalore): ರಕ್ಷಣಾ ಇಲಾಖೆಗೆ ತಲೆನೋವಾಗಿದ್ದ ಆರು ಜನ ನಕ್ಸಲ್ ನಾಯಕರು ಶರಣಾಗಿದ್ದಾರೆ.
ಕರ್ನಾಟಕ, ಕೇರಳ ಹಾಗೂ ತಮಿಳುನಾಡು ಅರಣ್ಯಗಳಲ್ಲಿ ಸುಮಾರು ಎರಡು ದಶಕಗಳ ಕಾಲ ಬಂದೂಕು ಹಿಡಿದು ಹೋರಾಟ ನಡೆಸಿದ್ದ ಆರು ಮಂದಿ ನಕ್ಸಲೀಯರು ಬುಧವಾರ ಸಂಜೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್, ಗೃಹಸಚಿವ ಪರಮೇಶ್ವರ ಸೇರಿದಂತೆ ಪೊಲೀಸ್ ವರಿಷ್ಠಾಧಿಕಾರಿಗಳ ಮುಂದೆ ಶರಣಾಗಿದ್ದಾರೆ. ಇದರೊಂದಿಗೆ ಹಲವು ದಶಕಗಳ ಕಾಲ ರಾಜ್ಯ ಸರ್ಕಾರಕ್ಕೆ ತಲೆನೋವಾಗಿದ್ದ ನಕ್ಸಲ್ ಹೋರಾಟ ರಾಜ್ಯದಲ್ಲಿ ಅಂತ್ಯ ಕಾಣುವ ಹಂತದಲ್ಲಿದೆ.
ಬುಧವಾರ ಬೆಳಿಗ್ಗೆ ಚಿಕ್ಕಮಗಳೂರು ಜಿಲ್ಲಾಡಳಿತ ಎದುರು ಶರಣಗಬೇಕಿದ್ದ ನಕ್ಷಲರು ಖುದ್ದು ಸಿಎಂ ಸಿದ್ದರಾಮಯ್ಯನವರ ಸಮ್ಮುಖದಲ್ಲೇ ಶರಣಾಗಿದ್ದಾರೆ. ಹೀಗಾಗಿ ಆರು ಜನ ನಕ್ಸಲರನ್ನು ಬಿಗಿ ಪೊಲೀಸ್ ಭದ್ರತೆಯಲ್ಲಿ ಬೆಂಗಳೂರಿಗೆ ಒಯ್ಯಲಾಗಿತ್ತು. ಸಿಎಂ ಗೃಹ ಕಚೇರಿ ಕೃಷ್ಣದಲ್ಲಿ ಸಿದ್ದರಾಮಯ್ಯ ಸಮ್ಮುಖದಲ್ಲೇ ಶರಣಾಗಿದ್ದಾರೆ. ಇನ್ನು ಶರಣಾಗುವ ನಕ್ಸಲರಿಗೆ ರಾಜ್ಯ ಸರ್ಕಾರ, ಮೂರು ಕೆಟಗರಿಯಲ್ಲಿ ಪ್ಯಾಕೇಜ್ ಘೋಷಣೆ ಮಾಡಿದೆ.
ಶರಣಾದ ನಕ್ಸಲರಿಗೆ ಸರ್ಕಾರ ಪ್ಯಾಕೇಜ್ ನೀಡುತ್ತಿದೆ. ಇದರಲ್ಲಿ ಮೂರು ವಿಭಾಗ ಮಾಡಲಾಗಿದೆ
ವಿಭಾಗ ಒಂದು: ರಾಜ್ಯದ ನಕ್ಸಲರಾಗಿ ಆ್ಯಕ್ಟಿವ್ ಆಗಿರಬೇಕು, ಪ್ರಕರಣ ಇದ್ರೆ ಏಳು ಲಕ್ಷದ 50 ಸಾವಿರ ಹಣ., ಆಯುಧಗಳನ್ನ ಹಾಜರುಪಡಿಸಿದ್ರೆ ಹಣ. ವ್ಯಾಪಾರಕ್ಕಾಗಿ ತರಬೇತಿಗೆ ಸೇರಿದ್ರೆ ತಿಂಗಳಿಗೆ 5000 ಹಣ.
ವಿಭಾಗ ಎರಡು : ಹೊರರಾಜ್ಯದವರಾಗಿ ಆ್ಯಕ್ಟಿವ್ ಆಗಿರಬೇಕು., ಒಂದಕ್ಕಿಂತ ಹೆಚ್ಚು ಪ್ರಕರಣ ಇದ್ರೆ 4 ಲಕ್ಷ ಹಣ, ಆಯುಧಗಳನ್ನ ಹಾಜರುಪಡಿಸಿದ್ರೆ ಹಣ, ವ್ಯಾಪಾರಕ್ಕಾಗಿ ತರಬೇತಿಗೆ ಸೇರಿದ್ರೆ ತಿಂಗಳಿಗೆ 5000 ಹಣ.
ವಿಭಾಗ ಮೂರು : ಎಡಪಂಥೀಯ ಭಯೋತ್ಪಾದನಾ ಚಟುವಟಿಕೆ ಬೆಂಬಲಿಸುವವರು., ನಕ್ಸಲರ ಸಂಪರ್ಕ ಹೊಂದಿ ಪ್ರಕರಣಗಳು ಇದ್ರೆ 2 ಲಕ್ಷ ಹಣ, ಆಯುಧಗಳನ್ನ ಹಾಜರುಪಡಿಸಿದ್ರೆ ಸರ್ಕಾರದಿಂದ ಹಣ, ವ್ಯಾಪಾರಕ್ಕಾಗಿ ತರಬೇತಿಗೆ ಸೇರಿದ್ರೆ ತಿಂಗಳಿಗೆ 5000 ಹಣ
ಶಸ್ತ್ರಾಸ್ತ್ರ ಹಾಗೂ ಆಯುಧ ನೀಡಿದರೆ ಹಣ, ಹಾಗೇ ನಕ್ಸಲರು ತಮ್ಮ ಬಳಿ ಇರುವ ಶಸ್ತ್ರಾಸ್ತ್ರ ಹಾಗೂ ಆಯುಧಗಳನ್ನು ನೀಡಿದರೂ ಸಹ ಅವುಗಳಿಗೆ ತಕ್ಕಂತೆ ಪ್ರೋತ್ಸಾಹ ಧನ ನೀಡಲಾಗುತ್ತದೆ..
ಶರಣಾಗುವ ನಕ್ಸಲರು ಹೆಸರು : ಮುಂಡುಗಾರು ಲತಾ (ಮುಂಡಗಾರು ಶೃಂಗೇರಿ), ವನಜಾಕ್ಷಿ (ಬಾಳೆಹೊಳೆ ಕಳಸ), ಸುಂದರಿ (ಕುಂತಲೂರು ದಕ್ಷಿಣ ಕನ್ನಡ), ಮಾರಪ್ಪ ಅರೋಳಿ (ರಾಯಚೂರು), ವಸಂತ ಟಿ (ತಮಿಳುನಾಡು), ಎನ್. ಜೀಶಾ (ಕೇರಳ).
ಶರಣಾದ ನಕ್ಸಲರು ಶಾಂತಿಗಾಗಿ ನಾಗರೀಕ ಸಮಿತಿಗೆ ಕೃತಘ್ನತೆ ಪತ್ರ ಸಲ್ಲಿಸಿದ್ದಾರೆ. ತಾವೇ ಕೈಯಲ್ಲಿ ಪತ್ರ ಬರೆದು ಸಮಿತಿಗೆ ನೀಡಿದ್ದಾರೆ. 2025ರ ಕ್ರಾಂತಿಕಾರಿ ಶುಭಾಶಯಗಳು ಎಂದು ಪತ್ರದಲ್ಲಿ ಉಲ್ಲೇಖಿಸಿ
ಹೋರಾಟದ ಸಾಗರಕ್ಕೆ ಸಾವಿರಾರು ನದಿಗಳು.
ನಿಮ್ಮೊಂದಿಗೆ ನಾವು, ಜನರಿಗಾಗಿ ಜೊತೆಗೂಡಿ ಹೋರಾಡೋಣ
ಎಂದು ಭಾವನಾತ್ಮಕ ಪತ್ರ ಬರೆದಿದ್ದಾರೆ.
ಇದನ್ನು ಓದಿ : ನಾನು ಯಾರೊಂದಿಗೂ ಓಡಿ ಹೋಗಿಲ್ಲ. ಪೊಲೀಸ್ ಠಾಣೆಯಲ್ಲಿ ಮಹಿಳೆ ಪ್ರತ್ಯಕ್ಷ.