ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಉಡುಪಿ(Udupi) : ನಗರದ ಪ್ರತಿಷ್ಠಿತ ಕುಂಜಿಬೆಟ್ಟು(Kunjibettu) ಶಾರದಾ ರೆಸಿಡೆನ್ಷಿಯಲ್ ಸ್ಕೂಲ್(Sharada residencial school) ಗೆ ಇಮೇಲ್ ಮೂಲಕ ಬೆದರಿಕೆ ಬಂದಿದೆ. ದೇಶದ ನಕ್ಸಲ್(Nakshal) ಚಟುವಟಿಕೆ ಹಾಗೂ ಭಯೋತ್ಪಾದಕ (Terrarisom) ವಿಚಾರಗಳನ್ನು ಉಲ್ಲೇಖಿಸಿದ ಮೇಲ್ ಸಂದೇಶವೊಂದು ಭಯ ಮೂಡಿಸಿದೆ.

ಮೇಲ್  ಸಂದೇಶದಲ್ಲಿ ಇದು ನಮ್ಮ ಕೊನೆಯ ಕಾರ್ಯಾಚರಣೆ. ಅಫ್ಜಲ್ ಗುರು ಗಲ್ಲು ಸೇರಿದಂತೆ ಇನ್ನಿತರ ವಿಚಾರಗಳನ್ನ ಮೇಲ್ ನಲ್ಲಿ ಉಲ್ಲೇಖಿಸಲಾಗಿದೆ. ತಮಿಳುನಾಡಿನ ಅಣ್ಣ ವಿವಿಯ ಪ್ರೊಫೆಸರ್ ಚಿತ್ರಕಲಾ ಗೋಪಾಲನ್ ಘಟನೆ ಬಗ್ಗೆ ತಿಳಿಸಲಾಗಿದೆ. ಈ ಬ್ಲಾಸ್ಟ್ ಮೂಲಕ ನಾವು ಸ್ವರ್ಗ ಪಡೆಯುತ್ತೇವೆ ಎಂದು ತಿಳಿಸಿ  ಇಮೇಲ್ ಕೊನೆಯಲ್ಲಿ ಅಲ್ಲಾಹು ಅಕ್ಬರ್ ಎಂದು ನಮೂದಿಸಿದ್ದಾರೆನ್ನಲಾಗಿದೆ. IED ಬ್ಲಾಸ್ಟ್ ಮಾಡುವುದಾಗಿ ಬೆದರಿಸಲಾಗಿದೆ.

ಶಾಲೆಗೆ ಬಾಂಬ್ ಬೆದರಿಕೆ (Bomb Threat) ಬಂದಿದ್ದರಿಂದ ವಿದ್ಯಾರ್ಥಿಗಳು ಮತ್ತು ಪೋಷಕರು ಆತಂಕಗೊಂದಿದ್ದಾರೆ. ಶಾಲಾಡಳಿತ ಮಂಡಳಿ ಪೊಲೀಸರಿಗೆ ಮಾಹಿತಿ ನೀಡಿದ್ದರಿಂದ  ಸ್ಥಳಕ್ಕೆ ಆಗಮಿಸಿದ ಪೊಲೀಸರು ಮತ್ತು ಶ್ವಾನದಳ ತೀವ್ರ ತಪಾಸಣೆ ಕೈಗೊಂಡಿದ್ದಾರೆ.  ಮಕ್ಕಳನ್ನು ಶಾಲೆಯಿಂದ ಹೊರಗೆ ಕಳುಹಿಸಿ ಮೈದಾನದಲ್ಲಿ ಕೂರಿಸಲಾಗಿದೆ.

ಪೊಲೀಸರು ಮತ್ತು ಶ್ವಾನದಳ (Dog Squad) ಶಾಲೆಯ ಸುತ್ತಮುತ್ತ ಪರಿಶೀಲನೆ ನಡೆಸಿದ್ದು ಯಾವುದೇ  ಸುಳಿವು ಲಭ್ಯವಾಗಿಲ್ಲ.  ಸ್ಥಳಕ್ಕೆ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಿದ್ದಲಿಂಗಪ್ಪ, ಉಡುಪಿ ಡಿವೈಎಸ್ಪಿ ಪ್ರಭು ಡಿ ಸಹಿತ ಇತರ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದಾರೆ.

ಶಾರದಾ ರೆಸಿಡೆನ್ಸಿಯಲ್ ಶಾಲೆಯಲ್ಲಿ ಸುಮಾರು 850ಕ್ಕೂ ಅಧಿಕ ಮಕ್ಕಳು ಕಲಿಯುತ್ತಿದ್ದು ಇವರನ್ನೆಲ್ಲ ಶಾಲೆಯ ಮೈದಾನದಲ್ಲಿ ಇರಿಸಲಾಗಿದೆ. ಬಾಂಬ್ ಬೆದರಿಕೆ (Bomb threat) ಹಿನ್ನೆಲೆಯಲ್ಲಿ ಈ ಶಾಲೆಯ ಸಮೀಪದಲ್ಲಿರುವ ವಿದ್ಯಾ ಸಂಸ್ಥೆಯ ಮಕ್ಕಳನ್ನು ಕೂಡ ಹೊರಗಡೆ ಕಳುಹಿಸಲಾಗಿದೆ.

ಇದನ್ನು ಓದಿ : ಕುಂಭಮೇಳದಲ್ಲಿ ಭಾಗವಹಿಸಿದ ಭಟ್ಕಳದ ನೂರಾರು ಭಕ್ತರು.

ಬಿಗ್ ಬಾಸ್ ಕಿರೀಟ ತೊಟ್ಟು ಐತಿಹಾಸಿಕ ದಾಖಲೆ ಬರೆದ ಹನುಮಂತ.

ಕೂದಲೆಳೆ ಅಂತರದಲ್ಲಿ ಆರೋಪಿಗಳು ಎಸ್ಕೇಪ್. ಸುಳಿವು ನೀಡಿದವರಿಗೆ ಸಿಗಲಿದೆ 50ಸಾ.ರೂ. ಬಹುಮಾನ.

ಕಿಂಗ್ ಇಸ್ ಬ್ಯಾಕ್. ಬೆಂಗಳೂರಲ್ಲಿ ನಸುನಗುತ್ತಾ ಮಾತನಾಡಿದ ಶಿವಣ್ಣ.

ಹೊನ್ನಾವರದಲ್ಲಿ ಗೋ ಕಟುಕನ ಮೇಲೆ ಪೊಲೀಸ್ ಪೈರಿಂಗ್.