ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಉಡುಪಿ (Udupi): ರಾಜ್ಯದಲ್ಲಿ ನಕ್ಷಲ್ ರ ಕರಾಳ ಅಧ್ಯಾಯ ಬಹುತೇಕ ಮುಗಿಯುವ ಹಂತದಲ್ಲಿದೆ. ಇಂದು ಮತ್ತೋರ್ವ ನಕ್ಷಲ್ (Nakshal) ಉಡುಪಿಯಲ್ಲಿ(Udupi) ಶರಣಾಗಿದ್ದಾರೆ.

ಕಳೆದ 20 ವರ್ಷಗಳಿಂದ ನಾಪತ್ತೆಯಾಗಿ, ಪೊಲೀಸ್ ಇಲಾಖೆಯ ವಾಂಟೆಂಡ್(Wanted) ಲಿಸ್ಟ್ ನಲ್ಲಿದ್ದ ನಕ್ಸಲ್  ಕುಂದಾಪುರ(Kundapur) ತಾಲೂಕಿನ ತೊಂಬಟ್ಟುವಿನ ಲಕ್ಷ್ಮೀ ಇಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿಯಲ್ಲಿ ಶರಣಾಗಿದ್ದಾರೆ.

ನಕ್ಸಲ್ ನಾಯಕ ವಿಕ್ರಂ ಗೌಡ(Nakshal Vikram Gouda) ಶೂಟೌಟ್  ಘಟನೆ ಬಳಿಕ ಬಹುತೇಕ ಕರ್ನಾಟಕದ(Karnataka) ಎಲ್ಲಾ ನಕ್ಸಲ್ ಶರಣಾಗತಿ ದಾರಿ ಹಿಡಿದಿದ್ದಾರೆ. ಈಗಾಗಲೇ ನಕ್ಸಲ್ ಚಟುವಟಿಕೆಯಲ್ಲಿದ್ದ(Nakshal Activities) ಎಲ್ಲರೂ ಶರಣಾಗಿದ್ದಾರೆ ಎಂದು ಹೇಳಲಾಗಿದೆ. ಈ ನಡುವೆ ಉಡುಪಿ(Udupi) ಜಿಲ್ಲೆಯ ಪ್ರಥಮ ನಕ್ಸಲ್ ಹೋರಾಟಗಾರ್ತಿ ತೊಂಬಟ್ಟುವಿನ ಲಕ್ಷ್ಮೀ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿಗೆ ಆಗಮಿಸಿ ಶರಣಾಗಿದ್ದಾರೆ.

ಬೆಳಿಗ್ಗೆ ಪೊಲೀಸ್ ಭದ್ರತೆಯೊಂದಿಗೆ ಎಸ್ಪಿ ಕಚೇರಿಗೆ ಆಗಮಿಸಿದ ಲಕ್ಷ್ಮೀ ಜೊತೆ ಆಕೆಯ ಸಹೋದರ ವಿಠಲ ಪೂಜಾರಿ ಹಾಗೂ ಸಂಬಂಧಿಕರು,  ನಕ್ಸಲ್ ಶರಣಾಗತಿ(Nakshal Surrounder) ಹಾಗೂ ಪುನರ್ವಸತಿ ಸಮಿತಿಯ ಸದಸ್ಯ ಶ್ರೀಪಾಲ ಜೊತೆಗಿದ್ದರು.

ಎಸ್ ಪಿ ಡಾ.ಕೆ ಅರುಣ್, ಹೆಚ್ಚುವರಿ ಎಸ್ಪಿ ಎಸ್ ಟಿ ಸಿದ್ದಲಿಂಗಪ್ಪ ಸಮ್ಮುಖದಲ್ಲಿ ಶರಣಾಗತಿ ಪ್ರಕ್ರಿಯೆ  ನಡೆಸಲಾಯಿತು.  ಉಡುಪಿ ಜಿಲ್ಲೆಯ(Udupi District) ವಿಕ್ರಂ ಗೌಡ ಹಾಗೂ ಲಕ್ಷ್ಮಿ ತೊಂಬಟ್ಟು ನಕ್ಸಲ್ ಚಳವಳಿಯಲ್ಲಿ ಹಲವು ವರ್ಷಗಳಿಂದ ತೊಡಗಿಸಿಕೊಂಡಿದ್ದರು. ಆಂಧ್ರಪ್ರದೇಶ(Andrapradesh) ಮೂಲದ ಲಕ್ಷ್ಮಿ ಕಳೆದ ಹಲವು ವರ್ಷಗಳಿಂದ ನಕ್ಷಲ್ ಳಾಗಿ ತೊಡಗಿಕೊಂಡಿದ್ದಳು.

ಇದನ್ನು ಓದಿ : ಅಂಗಡಿಗೆ ಹೋಗಿ ಬರುತ್ತೇನೆಂದು ಹೋದ ಯುವತಿ ನಾಪತ್ತೆ

ಮೀನು ಮಾರಾಟ ಮಹಿಳೆಯರಿಂದ ಅದ್ದೂರಿ ಮಾಘ ಚೌತಿ ಆಚರಣೆ. ಗಣೇಶನ ಮುಂದೆ ಸಂಭ್ರಮವೋ ಸಂಭ್ರಮ.

ಕೇಂದ್ರ ಸರ್ಕಾರದ ಬಜೆಟ್ ಮಂಡನೆ.ಮಹಿಳೆಯರಿಗೆ ಗಿಫ್ಟ್, ಸೇನಾ ಬಲ ಹೆಚ್ಚಳಕ್ಕೆ ಒತ್ತು.

ಶಿವಣ್ಣರ ಆರೋಗ್ಯ ಕಾಳಜಿ ತೆಗೆದುಕೊಂಡಿದ್ದ ಶಾಸಕ ಭೀಮಣ್ಣ ನಾಯ್ಕ.