ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಶಿರಸಿ (Sirsi) : ಹಿರಿಯ ಸ್ಯಾಂಡಲವುಡ್ ನಟ(Sandalwood Actor), ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್(Hyatrik Hero Shivarajkumar) ಮಾರಕ ಕ್ಯಾನ್ಸರ್(Cancer) ಗೆದ್ದು ಕೆಲ ದಿನಗಳ ಹಿಂದೆ ಬೆಂಗಳೂರಿಗೆ ವಾಪಾಸ್(Bangaluru Return) ಆಗಿದ್ದಾರೆ. ಇವರ ಜೊತೆ ಶಿರಸಿ ಶಾಸಕ ಭೀಮಣ್ಣ ನಾಯ್ಕ (Sirsi MLA Bheemanna Naik) ಕೂಡ ಇದ್ದು ಅರೋಗ್ಯದ ಕಾಳಜಿ ತೆಗೆದುಕೊಂಡಿರೋದು ಗಮನಾರ್ಹ
ಈ ಬಗ್ಗೆ ಗೀತಾ ಶಿವರಾಜಕುಮಾರ್(Geeta Shivarajakumar) ತಮ್ಮ FB ಯಲ್ಲಿ ಭೀಮಣ್ಣ ಅವರ ಬಗ್ಗೆ ಬರೆದಿದ್ದಾರೆ. ನಿಮ್ಮೆಲ್ಲರ ಪ್ರೀತಿಯ ಭೀಮಣ್ಣ ನನಗೆ ಭೀಮ್ ಮಾಮ(Bheem Mama). ಅಂದಿನಿಂದ ಇಲ್ಲಿಯವರೆಗೆ ಸ್ವಲ್ಪ ಕೂಡ ಬದಲಾಗದ ವ್ಯಕ್ತಿತ್ವ. ಮಾತು, ಕೋಪ ತುಂಬಾ ಕಡಿಮೆ, ಆದರೆ ಕೆಲಸ ಎಲ್ಲರಿಗಿಂತ ಜಾಸ್ತಿ. ಯಾವತ್ತು ಕಡಿಮೆ ಆಗದ ಪ್ರೀತಿ ವಿಶ್ವಾಸ. ಅವರಿಗೆ ಕುಟುಂಬದವರಾಗಲಿ, ಊರಿನ ಜನರಾಗಲಿ ಎಲ್ಲರು ಒಂದೇ.
ಮಾಮ ಅಮೆರಿಕಾದ ಮಿಯಾಮಿ(America miyami) ಅಲ್ಲಿ ಶಿವಣ್ಣ ಅವರ ಟ್ರೀಟ್ಮೆಂಟ್ ಸಮಯದಲ್ಲಿ ಎರಡು ವಾರ ನಮ್ಮ ಜೊತೆಗೆ ಇದ್ದರು. ನನ್ನ ಕೆಲಸಗಳಿಗೆ ಸಹಾಯ, ಶಿವಣ್ಣ ಜೊತೆಗೆ ವಾಕಿಂಗ್, ಕಾಫಿ, ಹಾಸ್ಪಿಟಲ್ ಭೇಟಿಗೆ ಜೊತೆಗೆ ಇರುತ್ತಿದ್ದರು. ಕತ್ತಲಾದಾಗ ಅವರ ಮೊಬೈಲ್ ಫೋನಿಗೆ ಮುಂಜಾವು. ಅವರ ಕ್ಷೇತ್ರದ ಜನರ ಕರೆಗಳು ಬರುತ್ತಿದ್ದವು ಎಲ್ಲರ ಜೊತೆ ಸ್ವಲ್ಪವೂ ಬೇಜಾರಿಲ್ಲದೆ ಮಾತನಾಡುತಿದ್ದರು. ದೂರದ ಊರಿನಲ್ಲಿದರು, ಕ್ಷೇತ್ರ ಹಾಗು ಕ್ಷೇತ್ರದ ಜವಾಬ್ದಾರಿಯನ್ನು ಎಂದಿಗೂ ನಿರ್ಲಕ್ಷ್ಯ ಮಾಡಲಿಲ್ಲ.
ನಮ್ಮ ಪ್ರೀತಿಯ ಭೀಮ್ ಮಾಮ, ನಿಮಗೆ ಶಾಸಕರು. ನಮ್ಮ ಕುಟುಂಬದ ಸುಖ ದುಃಖ ಎರಡರಲ್ಲೂ ಸದಾ ಜೊತೆಗೆ ನಿಂತವರು. ನಿಮ್ಮ ಶಾಸಕರಾಗಿ ಅವರು ಸದಾ ನಿಮ್ಮ ಜೊತೆಯಲ್ಲಿ ನಿಂತಿರಲಿ, ಹಾಗು ಅವರ ಮತ್ತು ನಿಮ್ಮ ಮುಗುಳ್ನಗೆ ಎಂದಿಗೂ ಮಾಸದಿರಲಿ ಎಂದು ಎಂದು ದೇವರಲ್ಲಿ ನಾನು ಹಾಗು ಶಿವ ರಾಜಕುಮಾರ್ ಅವರು ಕೇಳಿಕೊಳ್ಳುತೇವೆ ಎಂದು ಗೀತಾ ಶಿವರಾಜಕುಮಾರ್ ಹಾಗು ಶಿವರಾಜಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಹೌದು. ಶಿರಸಿ ಶಾಸಕರಾಗಿರುವ ಭೀಮಣ್ಣ ನಾಯ್ಕ(Bheemanna Naik) ಅವರು ಶಿವರಾಜಕುಮಾರ ಕುಟುಂಬದ ಸಂಬಂಧಿ. ಆದರೆ ಶಿವಣ್ಣ ಅರೋಗ್ಯದ ವಿಚಾರದಲ್ಲಿ ಪ್ರತಿ ಕ್ಷಣವೂ ಅವರಿಗೆ ಧೈರ್ಯ, ಸ್ಥೈರ್ಯ ತುಂಬುತ್ತಿದ್ದರು. ಅಮೇರಿಕಾದ ಮಿಯಾಮಿ ಆಸ್ಪತ್ರೆಗೆ ಶಿವಣ್ಣ ದಾಖಲಾದಾಗಿನಿಂದ ಡಿಸ್ಚಾರ್ಜ್ ಆಗುವವರೆಗೂ ಅವರ ಜೊತೆಗೆ ಇದ್ದರು. ಕ್ಷೇತ್ರದ ಜನತೆಯ ಪಾಲಿಗೂ ಸಹ ಭೀಮಣ್ಣ ಸದಾ ಸ್ಪಂದಿಸುವ ಮನೋಭಾವದವರಾಗಿದ್ದಾರೆ.
ಇದನ್ನು ಓದಿ : ಮೈಕ್ರೋ ಫೈನಾನ್ಸ್, ಮೀಟರ್ ಬಡ್ಡಿ ವ್ಯವಹಾರದ ವಿರುದ್ದ ದೇಶಪಾಂಡೆ ಗರಂ.
ಗೋವಾದಲ್ಲಿ ಏಪ್ರಿಲ್ ಆರಂಭದಿಂದ ಹೊಸ ಶೈಕ್ಷಣಿಕ ವರ್ಷ ಶುರು.
ಪರಮಾನಂದ ಕೊಣ್ಣೂರು ಅಂದರೆ ಪೊಲೀಸ್ ಇಲಾಖೆಗೆ ಹೆಮ್ಮೆ.