ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಪ್ರಯಾಗರಾಜ್(Prayagraj) : ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ (D K Shivkumar) ಉತ್ತರಪ್ರದೇಶದ(Uttarapradesh) ಪ್ರಯಾಗ್ರಾಜ್ನಲ್ಲಿ(Prayagraj) ನಡೆಯುತ್ತಿರುವ ಮಹಾಕುಂಭ (Mahakumbha) ಮೇಳದಲ್ಲಿ ಭಾಗವಹಿಸಿದ್ದಾರೆ.
ಭಾನುವಾರ ಕುಟುಂಬ ಸಮೇತರಾಗಿ ಮಹಾಕುಂಭಮೇಳಕ್ಕೆ ಆಗಮಿಸಿದ ಅವರು ತ್ರಿವೇಣಿ ಸಂಗಮದಲ್ಲಿ(Treeveni Sangama) ಪುಣ್ಯ ಸ್ನಾನ ಮಾಡಿದ್ದಾರೆ. ಎರಡು ದಿನಗಳ ಹಿಂದಷ್ಟೇ ಡಿಕೆಶಿ ಪುತ್ರಿ ಐಶ್ವರ್ಯಾ ಅವರು ಪ್ರಯಾಗ್ರಾಜ್ಗೆ ತೆರಳಿ ಪವಿತ್ರ ಸ್ನಾನ ಮಾಡಿದ್ದರು. ಇದೀಗ ಶಿವಕುಮಾರ್(Shivakumar) ತಮ್ಮ ಪತ್ನಿ ಉಷಾ ಜೊತೆ ಪ್ರಯಾಗರಾಜ್ ಗೆ ಆಗಮಿಸಿದ್ದಾರೆ.
144 ವರ್ಷಗಳ ನಂತರ ನಡೆದ ಕುಂಭ ಮೇಳದಲ್ಲಿ ಈಗಾಗಲೇ ಕೋಟ್ಯಾನುಕೋಟಿ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದಾರೆ. ನೊಣವಿನಕೆರೆ(Nonavinakere) ಕಾಡಸಿದ್ದೇಶ್ವರ ಮಠದ ಕರಿವೃಷಭ ರಾಜದೇಶಿ ಕೇಂದ್ರ ಶಿವಯೋಗಿಶ್ವರ ಶಿವಾಚಾರ್ಯ ಸ್ವಾಮೀಜಿ ಅವರ ಜೊತೆಯಲ್ಲೇ ಡಿಕೆಶಿ ದಂಪತಿ ಮಹಾಕುಂಭಮೇಳಕ್ಕೆ (Mahakumbha mela) ಆಗಮಿಸಿದ್ದರು.
ಗಂಗಾ(Ganga), ಯಮುನಾ(Yamuna) ಮತ್ತು ಸರಸ್ವತಿ ನದಿಗಳ(Saraswati River) ಪೂಜ್ಯ ಮತ್ತು ಆಧ್ಯಾತ್ಮಿಕವಾಗಿ ಸಂಗಮ ಸ್ಥಳದಲ್ಲಿ ಡಿಕೆಶಿ ದಂಪತಿ ಸಹ ಗಂಗೆಗೆ ವಿಶೇಷ ಪೂಜೆ(Special pooja) ಸಲ್ಲಿಸಿ ಆರತಿ ಬೆಳಗಿದರು. ಪುಣ್ಯಸ್ನಾನ ಮಾಡಿರುವ ಫೋಟೋಗಳನ್ನು ಡಿಕೆಶಿ ತಮ್ಮ ಸಾಮಾಜಿಕ ಜಾಲತಾಣಗಳ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ. ಉತ್ತರ ಪ್ರದೇಶದ ಪ್ರಯಾಗ್ ರಾಜ್ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ಕುಟುಂಬ ಸಮೇತ ಪಾಲ್ಗೊಂಡು, ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡಿದೆ. 144 ವರ್ಷಗಳಿಗೊಮ್ಮೆ ನಡೆಯುವ ಮಹಾ ಕುಂಭದಲ್ಲಿ ಪಾಲ್ಗೊಳ್ಳಲು ಅವಕಾಶ ಸಿಕ್ಕಿದ್ದು ನಿಜಕ್ಕೂ ಖುಷಿ ತಂದಿದೆ. ವ್ಯವಸ್ಧೆ ತುಂಬಾ ಅಚ್ಚುಕಟ್ಟಾಗಿದೆ. ಸಂಘಟಕರಿಗೆ ಧನ್ಯವಾದಗಳು ಎಂದು ಅವರು ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಕುಂಭಮೇಳದಲ್ಲಿ ಪುಣ್ಯ ಸ್ನಾನ ಮಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ(Amit Shs) ಅವರ ಬಗ್ಗೆ ಎಐಸಿಸಿ (AICC) ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ(Kharge) ಅವರು ಟೀಕಿಸಿದ್ದರು. ಅಲ್ಲದೇ ಪರ ವಿರೋಧ ಚರ್ಚೆಗಳು ನಡೆದಿದ್ದವು. ಇದೀಗ ಕೆಪಿಸಿಸಿ (KPCC) ಅಧ್ಯಕ್ಷ, ಡಿಸಿಎಂ ಡಿ ಕೆ ಶಿವಕುಮಾರ್ ಅವರು ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಿ ಗಮನ ಸೆಳೆದಿದ್ದಾರೆ. ಒಟ್ಟಿನಲ್ಲಿ ಡಿ ಕೆ ಶಿ ಭೇಟಿ ಕುತೂಹಲ ಮೂಡಿಸಿದೆ.
ಇದನ್ನು ಓದಿ : ಗಾಳ ಹಾಕಿ ಮೀನು ಹಿಡಿದ ಹವ್ಯಾಸಿಗಳ ದಂಡು. ಸಖತ್ ಫಿಶಿಂಗ್.
ಗೃಹ ರಕ್ಷಕ ಇಲಾಖೆಗೆ ನೇಮಕಾತಿಗೆ ಅರ್ಜಿ ಆಹ್ವಾನ
ಸರ್ಕಾರಿ ಬಸ್ ಬ್ರೇಕ್ ಫೇಲಾಗಿ ಗುಡ್ಡಕ್ಕೆ ಢಿಕ್ಕಿ.
ದೆಹಲಿಯಲ್ಲಿ ಪಕ್ಷದ ಗೆಲುವು. ಉತ್ತರಕನ್ನಡದಲ್ಲಿ ಬಿಜೆಪಿ ಕಾರ್ಯಕರ್ತರ ಹಬ್ಬ.