ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಹೊನ್ನಾವರ (Honnavar) : ತಾಲೂಕಿನ ಗೇರುಸೊಪ್ಪ ಸಮೀಪ (Gerusoppa Near) ಸರ್ಕಾರಿ ಬಸ್(Government Bus) ಅಪಘಾತವಾಗಿದೆ. ಸೂಳೆಮುರ್ಕಿ ಕ್ರಾಸ್(Sulemurki Cross) ಹತ್ತಿರ ಕೆಎಸ್ ಆರ್ ಟಿ ಸಿ ಬಸ್(Ksrtc Bus) ಡಿಕ್ಕಿ ಹೊಡೆದಿದ್ದು ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಬಸ್ ಸಾಗರದಿಂದ ಹೊನ್ನಾವರ (Sagar to Honnavar) ಕಡೆ ತೆರಳುತಿತ್ತು. ಬ್ರೇಕ್ ಫೇಲ್ ಆಗಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಅಂಚಿನ ಗಟಾರಕ್ಕೆ ಇಳಿದು ಗುಡ್ಡಕ್ಕೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.
ಸರ್ಕಾರಿ ಬಸ್ ನಲ್ಲಿ ಒಟ್ಟು 49 ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ಘಟನೆ ನಡೆದ ತಕ್ಷಣ ಬಸ್ ನಲ್ಲಿದ್ದ ಪ್ರಯಾಣಿಕರು ಡ್ರೈವರ್ ಕುಳಿತುಕೊಳ್ಳುವ ಸೀಟಿನ ಬದಿಯಿಂದ ಹೊರಕ್ಕೆ ಬಂದಿದ್ದಾರೆ. ಯಾವುದೇ ತೊಂದರೆಯಾಗಿಲ್ಲ. ಹೊನ್ನಾವರ ಪೊಲೀಸ್ ಠಾಣಾ(Honnavar Police Station) ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನು ಓದಿ : ದೆಹಲಿಯಲ್ಲಿ ಪಕ್ಷದ ಗೆಲುವು. ಉತ್ತರಕನ್ನಡದಲ್ಲಿ ಬಿಜೆಪಿ ಕಾರ್ಯಕರ್ತರ ಹಬ್ಬ.
ಮನೆಯ ಅಂಗಳದಲ್ಲಿದ್ದ ಅಡಿಕೆ ಚೀಲ ಕದ್ದ ಕಳ್ಳ ಪೊಲೀಸರಿಗೆ ಸಿಕ್ಕಿ ಬಿದ್ದ.
ದೆಹಲಿಯಲ್ಲಿ ಬಿಜೆಪಿಗೆ ಗದ್ದುಗೆ. ಆಪ್ ಮನೆಗೆ. ಕಾಂಗ್ರೆಸ್ ಮತ್ತೆ ಸೋಲಿಗೆ.