ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಕಾರವಾರ (Karwar) : ಜಿಲ್ಲೆಯಾದ್ಯಂತ ಮೀಟರ್ ಬಡ್ಡಿ ಹಾಗೂ ಮೈಕ್ರೋಫೈನಾನ್ಸ್(Micro Finance) ಕಿರುಕುಳ ನೀಡುವವರ ಮೇಲೆ ಪೊಲೀಸ್ ಇಲಾಖೆ(Police Department) ಕಟ್ಟು ನಿಟ್ಟಿನ ಕಾನೂನು ಕ್ರಮ ಕೈಗೊಂಡಿದೆ.
ಈಗಾಗಲೇ ಜಿಲ್ಲೆಯ ಹಲವು ಪೊಲೀಸ್ ಠಾಣಾ(Police Station) ವ್ಯಾಪ್ತಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪೊಲೀಸ್ ಕಾರ್ಯಾಚರಣೆಯಿಂದ ಎಚ್ಛೆತ್ತುಕೊಂಡ ಹಲವು ಅಕ್ರಮ ಬಡ್ಡಿಕೋರರು ಊರು ಬಿಟ್ಟು ನಾಪತ್ತೆಯಾಗಿದ್ದಾರೆ. ಅದರಲ್ಲಿ ಮುಂಡಗೋಡು(Mundgod), ಹಳಿಯಾಳ(Haliyal) ಹಾಗೂ ದಾಂಡೇಲಿ(Dandeli) ಭಾಗಗಳಲ್ಲಿ ಜಾಸ್ತಿಯಾಗಿದೆ.
ಮೈಕ್ರೋಫೈನಾನ್ಸ್(Microfinance) ಸಿಬ್ಬಂದಿಗಳಿಂದ ಕಿರುಕುಳ, ಮೀಟರ್ ಬಡ್ಡಿಯಿಂದ ತೊಂದರೆಗೊಳಗಾದವರು ಧೈರ್ಯವಾಗಿ ಠಾಣೆಗೆ ಬಂದು ದೂರು ದಾಖಲಿಸಲು ಪೊಲೀಸ್ ಇಲಾಖೆ ಕೋರಿದೆ. ನಿಮ್ಮ ಮನೆ ಹತ್ತಿರ ಬಂದು ಕಿರುಕುಳ ನೀಡುತ್ತಿದ್ದರೆ, ತಕ್ಷಣ ಲೊಕೇಶನ್ ಸಮೇತ ವಿವರಗಳನ್ನು ಪೊಲೀಸ್ ಅಧೀಕ್ಷಕರ (ಎಸ್ ಪಿ) ಮೊಬೈಲ್ ನಂ. 9480805201 ಗೆ ಕಳುಹಿಸಲು ಕೋರಿದೆ. ಕಿರುಕುಳ ಅನುಭವಿಸುವವರು 112ಗೆ ಕರೆಮಾಡಿ ಹತ್ತಿರದ ಪೊಲೀಸ ಠಾಣೆಗೆ ಬಂದು ದೂರು ಕೊಡಬಹುದು. ಬಡ್ಡಿ ಕಿರುಕುಳ ಮಾಡುವವರ ವಿವರಗಳನ್ನು ಕೂಡ ಶೇರ್ ಮಾಡಬಹುದು. ಮಾಹಿತಿದಾರರ ನೀಡುವ ಮಾಹಿತಿಯನ್ನು ಗೌಪ್ಯವಾಗಿ ಇಡಲಾಗುವುದು ಎಂದು ಜಿಲ್ಲಾ ಪೊಲೀಸ್ ಇಲಾಖೆ(District Police Department) ಪ್ರಕಟಣೆಯಲ್ಲಿ ತಿಳಿಸಿದೆ.
ಇದನ್ನು ಓದಿ : ಪ್ರಯಾಗರಾಜ್ ನಲ್ಲಿ ಪವಿತ್ರ ಸ್ನಾನ ಮಾಡಿದ ಡಿ ಕೆ ಶಿವಕುಮಾರ. ವ್ಯವಸ್ಥೆ ಬಗ್ಗೆ ಮೆಚ್ಚುಗೆ.
ಗಾಳ ಹಾಕಿ ಮೀನು ಹಿಡಿದ ಹವ್ಯಾಸಿಗಳ ದಂಡು. ಸಖತ್ ಫಿಶಿಂಗ್.