ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಭಟ್ಕಳ(Bhatkal):  ಹಿಂದೂ ಸಂಘಟನೆ ಕಾರ್ಯಕರ್ತ ಶ್ರೀನಿವಾಸ್  ನಾಯ್ಕ ಮೇಲೆ ಯಾವುದೇ ಹಲ್ಲೆ ಮಾಡಿಲ್ಲ. ಕೇವಲ ವಾರ್ನಿಂಗ್  ಮಾಡಿದ್ದೇವೆ  ಎಂದು ಎಸ್ಪಿ ಎಂ. ನಾರಾಯಣ್ ಹೇಳಿದ್ದಾರೆ(Sp Statement).

ಭಟ್ಕಳಕ್ಕೆ ಆಗಮಿಸಿದ ಎಸ್ಪಿ ನಾರಾಯಣ್ ಅವರು ಹೇಳಿಕೆ ನೀಡಿದ್ದಾರೆ. ಉತ್ತರಕನ್ನಡ ಜಿಲ್ಲೆಯಲ್ಲಿ 996 ರೌಡಿಗಳಿದ್ದು, ಅವರ ಮೇಲೆ ನಿಗಾ ಇರಿಸಿದ್ದೇವೆ.  ನಿನ್ನೆ ಸಹ ಶಿರಸಿಯಲ್ಲಿ ಕೆಲವು ರೌಡಿಗಳನ್ನು ಕರೆಯಿಸಿ ಅವರಿಗೆ ಕೇವಲ ವಾರ್ನಿಂಗ್ ನೀಡಲಾಗಿದೆ. ಆದರೆ, ಶ್ರೀನಿವಾಸ ಭಟ್ಕಳಕ್ಕೆ ಬಂದು ಆಸ್ಪತ್ರೆಗೆ ದಾಖಲಾಗಿ ಹಲ್ಲೆ ನಡೆಸಿರುವ ಆರೋಪ‌ ಮಾಡಿದ್ದಾನೆ. ಇದೆಲ್ಲಾ ಸುಳ್ಳು ನಾಟಕವಾಗಿದ್ದು, ಆತನ ಮೇಲೆ ಯಾವ ರೀತಿಯಲ್ಲೂ ಹಲ್ಲೆ ಮಾಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಪ್ರಕರಣದ ಬಗ್ಗೆ ಜಿಲ್ಲಾಧಿಕಾರಿ, ಐಜಿಪಿಗೆ ಮಾಹಿತಿ ನೀಡಲಾಗಿದ್ದು ಈ ಪ್ರಕರಣವನ್ನು ಕಾನೂನು ರೀತ್ಯಾ ನಾವು ಎದುರಿಸುತ್ತೇವೆ ಎಂದರು.

ಯಾರೆಲ್ಲಾ ಸಮಾಜಘಾತಕ ಕೃತ್ಯದಿಂದ ದೂರವಿದ್ದಾರೆ ಅವರನ್ನು ಗೂಂಡಾ ಲಿಸ್ಟ್‌ನಿಂದ ಹೊರತೆಗೆಯುತ್ತೇವೆ. ಅದೇ ಕೃತ್ಯಗಳನ್ನು ಮುಂದುವರಿಸಿದವರಿಗೆ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದ ಎಸ್ಪಿ ಎಂ.ನಾರಾಯಣ್ ಖಡಕ್ಕಾಗಿ ಹೇಳಿದ್ದಾರೆ.