ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ಶಿರಸಿ(Sirsi): ಮನೆಯೊಂದರಲ್ಲಿ ಅಂದರ್ ಬಾಹರ್ ಆಡುತ್ತಿದ್ದ ವೇಳೆ ಪೊಲೀಸರು ದಾಳಿ(Police Raid) ನಡೆಸಿ 13 ಮಂದಿಯನ್ನ ವಶಕ್ಕೆ ತೆಗೆದುಕೊಂಡ ಘಟನೆ ಶಿರಸಿಯ ಕೆಳಗಿನ ಇಟಗುಳಿ ಬಳಿ ನಡೆದಿದೆ.
ಶಿರಸಿ ಗ್ರಾಮೀಣ ಠಾಣೆಯ(Sirsi Rural Station) ಪೊಲೀಸರು ದಾಳಿ ನಡೆಸಿದ್ದು ಈ ವೇಳೆ 54900ರೂ ಹಣವನ್ನ ವಶಕ್ಕೆ ಪಡೆಯಲಾಗಿದೆ. ಪಿಎಸ್ಐ ಸಂತೋಷ ಕುಮಾರ ಎಂ ಅವರು ಗಸ್ತಿನಲ್ಲಿರುವಾಗ ಕೆಳಗಿನ ಇಟಗುಳಿ ಗ್ರಾಮದ ರಾಮಚಂದ್ರ ವಿಠಲ ಹೆಗ್ಗಡೆಯವರ ಮನೆಯ ಮೇಲೆ ದಾಳಿ ನಡೆಸಿದ್ದಾರೆ.
ಸುಮಾರು 10 ರಿಂದ 13 ಜನರು ಸೇರಿ ಪಂಥಕಟ್ಟಿಕೊಂಡು ಆಡುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇಲೆ ದಾಳಿ ನಡೆಸಲಾಗಿತ್ತು. ಈ ವೇಳೆ ರಾಮಚಂದ್ರ ವಿಠಲ ಹೆಗಡೆ(73), ಮಂಜುನಾಥ ಸುಬ್ರಾಯ ಹೆಗಡೆ (69), ಕೇಶವ ಮಹಾಬಲೇಶ್ವರ ಹೆಗಡೆ(54), ಮಂಜುನಾಥ ರಾಮಚಂದ್ರ ಹೆಗಡೆ(37), ಮಹೇಶ ರಾಮಚಂದ್ರ ಹೆಗಡೆ(48), ನಾರಾಯಣ ವೆಂಕಟರಮಣ ಹೆಗಡೆ(60), ವಿನಯ ಮಹಾಬಲೇಶ್ವರ ಹೆಗಡೆ(43), ಕಮಲಾಕರ ಮಹಾಬಲೇಶ್ವರ ಭಟ್(64), ಆನಂದ ಮಂಜುನಾಥ ಹೆಗಡೆ(53), ಮಂಜುನಾಥ ಸತ್ಯನಾರಾಯಣ ಹೆಗಡೆ(60), ಗಣಪತಿ ಶಾಂತರಾಮ ಹೆಗಡೆ(54), ಮಹಾಬಲೇಶ್ವರ ಶ್ರೀಪತಿ ಹೆಗಡೆ(58), ಕಾರ್ತಿಕ್ ಗಣಪತಿ ಹೆಗಡೆ(42) ಎಂಬುವವರನ್ನ ವಶಕ್ಕೆ ಪಡೆಯಲಾಗಿದೆ.
ಒಟ್ಟು 54,900/- ರೂಪಾಯಿ ನಗದು 07 ಮೊಬೈಲ್ ಗಳನ್ನು ಸ್ಥಳದಲ್ಲಿ ಪಂಚರ ಸಮಕ್ಷಮ ವಶಕ್ಕೆ ಪಡೆದಿದ್ದಾರೆ. ದಾಳಿಯಲ್ಲಿ ಸಿಬ್ಬಂದಿಗಳಾದ ರಾಘವೇಂದ್ರ, ಸಿ. ಹೆಚ್. ಷಣ್ಮುಖ ಮಿರಾಶಿ, ಮಾರುತಿ ಗೌಡ ಪಾಲ್ಗೊಂಡಿದ್ದರು. ದಾಳಿಯ ಬಗ್ಗೆ ಪೊಲೀಸ್ ಅಧಿಕ್ಷಕರು. ಹೆಚ್ಚುವರಿ ಪೊಲೀಸ್ ಅಧಿಕ್ಷಕರು, ಹೆಚ್ಚುವರಿ ಪೊಲೀಸ್ ಅಧಿಕ್ಷಕರು, ಪೊಲೀಸ್ ಉಪಾಧಿಕ್ಷಕರು ಶಿರಸಿ ಉಪವಿಭಾಗ (Sirsi Subdivision) ಹಾಗೂ ಪೊಲೀಸ್ ನೀರಿಕ್ಷಕರು ಶಿರಸಿ ಗ್ರಾಮೀಣ ಪೊಲೀಸ್ ಠಾಣೆ ರವರು ಮಾರ್ಗದರ್ಶನ ನೀಡಿ ದಾಳಿಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಶ್ಲಾಘಿಸಿದ್ದಾರೆ.
ಇದನ್ನು ಓದಿ : ಶ್ರೀನಿವಾಸ್ ನಾಯ್ಕ ಮೇಲೆ ಹಲ್ಲೆ ಮಾಡಿಲ್ಲ. ಇದೆಲ್ಲ ಸುಳ್ಳು ನಾಟಕ. ಎಸ್ಪಿ ನಾರಾಯಣ್ ಹೇಳಿಕೆ.
ಭಟ್ಕಳದಲ್ಲಿ ಹಿಂದು ಕಾರ್ಯಕರ್ತರ ಬಾರೀ ಪ್ರತಿಭಟನೆ. ಎಸ್ಪಿ ಎಂ ನಾರಾಯಣ್ ವಿರುದ್ಧ ಆಕ್ರೋಶ.
ಪರೀಕ್ಷೆಯಲ್ಲಿ ಫೇಲ್ ಆದವರಿಗೆ ಮತ್ತೇರಡು ಬಾರೀ ಬರೆಯಲು ಅವಕಾಶ: ಮಧು ಬಂಗಾರಪ್ಪ.
ಅನುಕಂಪದ ಉದ್ಯೋಗದ ಆಸೆಗೆ ಗಂಡನ ಮುಗಿಸಿದ ಪತ್ನಿ ಅಂದರ್.
ಮನೆಯಲ್ಲಿ ಸಿಕ್ತು ಕಂತೆ ಕಂತೆ ನೋಟು. ಅದರ ಮೇಲೆ ರಿವರ್ಸ್ ಬ್ಯಾಂಕ್ ಆಪ್ ಇಂಡಿಯಾ ಬರಹ.