ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ಕಾರವಾರ(Karwar): ಶಿವಾಜಿ ವಿದ್ಯಾಮಂದಿರನ ಅಸ್ನೋಟಿ ಹಾಗೂ ಸ್ಮೀತಾ ಆರ್. ಪ್ರಭು ಪೌಂಡೇಶನ್ ಕಾರವರ ಇವರ ಸಹಯೋಗದಲ್ಲಿ ಪ್ರತಿವರ್ಷ ನೀಡುವ ರಾಜ್ಯ ಮಟ್ಟದ ಶಿಕ್ಷಣ ಸೇವಾ ರತ್ನ ಪ್ರಶಸ್ತಿಯನ್ನು ಶಿವಾಜಿ ವಿದ್ಯಾ ಮಂದಿರ ಅಸ್ನೋಟಿಯಲ್ಲಿ ನಿವೃತ್ತ ಮುಖ್ಯಾಧ್ಯಾಪಕಿ ಪ್ರಮೀಳಾ ದತ್ತಾತ್ರೇಯ ಪವಾರ್ ಅವರಿಗೆ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಭಾರತೀಯು ವಾಯು ಸೇನೆಯ ಅಧಿಕಾರಿ ಶಾಮ ಕುಮಾರ ದೇಸಾಯಿ ಮಾತನಾಡಿ, ಒಳ್ಳೆಯದು ಒಳ್ಳೆಯದನ್ನೇ ಸೃಷ್ಟಿ ಮಾಡುತ್ತದೆ. ಅದಕ್ಕೆ ಈ ವೇದಿಕೆಯೇ ಸಾಕ್ಷಿ, ಕಾರವಾರದ ಗ್ರಾಮೀಣ ಪ್ರದೇಶದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿ ಶೈಕ್ಷಣಿವಾಗಿ ಅಪಾರ ಕೊಡುಗೆ ನೀಡಿದ ಪ್ರಮೀಳಾ ಬಾಯಿ ಅವರಿಗೆ ಶಿಕ್ಷಣ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಿರುವುದು ಅಭಿನಂದನಾರ್ಹವಾಗಿದೆ. ಇದಕ್ಕೆ ಪುಷ್ಠಿ ನೀಡಿದ ಶಿವಾಜಿ ಮಂದಿರ ಕೈಂಕರ್ಯ ಅಭಿನಂದನಾರ್ಹವಾಗಿದೆ ಎಂದರು.
ಮುಖ್ಯ ಅತಿಥಿಗಳಾಗಿದ್ದ ಸತ್ಯಸಾಯಿ ಸ್ಕೂಲ್ನ ಚೇರಮನ್ ಗಿರೀಶ್ ಎಚ್.ಎಸ್. ಅವರು ಮಾತನಾಡಿ, ಪ್ರತಿವರ್ಷ ಕೊಡಮಾಡುವ ಶಿಕ್ಷಣ ಸೇವಾ ರತ್ನ ಪ್ರಶಸ್ತಿ ಅರ್ಹ ವ್ಯಕ್ತಿಗೆ ಸಂದಿರುವುದು ಪ್ರಶಸ್ತಿಯ ಗೌರವ ಹೆಚ್ಚಿಸಿದೆ. ಅವರ ಸೇವೆ ಮತ್ತು ನಾಡಿಗೆ ಲಭಿಸಲಿ ಎಂದು ಹಾರೈಸಿದರು.
ಬಿಸಿಎಮ್ ಇಲಾಖೆಯ ಅಧಿಕಾರಿ ವಿಶಾಲ್ ಕಾಂಬ್ಳೆ ಮಾತನಾಡಿ, ಸಮಾಜದಲ್ಲಿ ನಾವು ಮಾಡುವ ಯಾವುದೇ ಸೇವೆಯು ಜನಮಾನಸದಲ್ಲಿ ನೆಲೆಯೂರುವಂತಾಗಬೇಕು ಅಂತಹ ಸೇವೆಯನ್ನು ಪೂಜ್ಯನೀಯರು ನೀಡಿ ಪ್ರತಿಷ್ಠಿತ ಪ್ರಶಸ್ತಿಯನ್ನು ಸ್ವೀಕರಿಸಿರುವುದು ವಯಕ್ತಿಕತವಾಗಿ ಬಹಳಷ್ಟು ಖುಷಿ ನೀಡಿದೆ ಎಂದರು.
ಇದೇ ಸಂದರ್ಭದಲ್ಲಿ ಅವರು ಹಾಡಿದ ಜಿ. ಎಸ್. ಶಿವರುದ್ರಪ್ಪ ಅವರ ಭಾವಗೀತೆಯೊಂದು ಹಾಡುವ ಮೂಲಕ ಸಭೀಕರನ್ನು ರೋಮಾಂಚನಗೊಳಿಸಿದರು.
ಸತ್ಯಸಾಯಿ ಸ್ಕೂಲ್ನ ಪ್ರಾಚಾರ್ಯ ಅಶೋಕ ಗಾಂವಕರ್ ಅವರು ಮಾತನಾಡಿ, ಗ್ರಾಮೀಣ ಭಾಗದಲ್ಲಿ ಹುಟ್ಟಿ ಉತ್ತಮ ಶಿಕ್ಷಣ ಸಂಸ್ಕಾರ ಪಡೆದು ನಮಗೆಲ್ಲರಿಗೂ ಆದರ್ಶನೀಯವಾದ ವ್ಯಕ್ತಿತ್ವ ಪ್ರಮೀಳಾ ಬಾಯಿ ಅವರದ್ದು ಬದುಕು, ಬರಹದ ಜೊತೆಗೆ ಕುಟುಂಬವನ್ನು ಸುಸಂಸ್ಕೃತವನ್ನಾಗಿದ್ದು ಅವರ ಕೊಡುಗೆಯ ಭಾಗವೆಂದು ಭಾವಿಸುತ್ತೇನೆ ಎಂದರು.
ಇಂತಹ ಶಿಕ್ಷಕಿಯನ್ನು ಗುರುತಿಸಿ ಸ್ಮೀತಾ ಆರ್. ಪ್ರಭು ಪೌಂಡೇಶನ್ ವತಿಯಿಂದ ಪ್ರಶಸ್ತಿ ನೀಡಿರುವುದು ಬಹಳಷ್ಟು ಖುಷಿಯಾಗಿದೆ ಎಂದರು.
ಇನ್ನೋರ್ವ ಮುಖ್ಯ ಅತಿಥಿ ಪವನ್ ಸಾವಂತ ಮಾತನಾಡಿ, ವಿದ್ಯಾರ್ಥಿಗಳಿಗೆ ಸಮಯದ ಮಹತ್ವ, ಸಾಧನೆಯ ಆಕರ್ಷಣೆಯನ್ನು ತಿಳಿಸಿದರು.
ರಾಮನಾಥ ದೇವಸ್ಥಾನದ ಟ್ರಸ್ಟಿಗಳಾದ ರಂಜಿತ್ ದೇಸಾಯಿ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಅಸ್ನೋಟಿ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಗಿರೀಶ್ ದೇಸಾಯಿ ಅವರು ಆಡಳಿತ ಮಂಡಳಿಯ ಪರವಾಗಿ ಶುಭಾಶಯ ಕೋರಿದರು.
ವೇದಿಕೆಯ ಮೇಲೆ ಉಪಸ್ಥಿತರಿದ್ದ ಪ್ರೀತಿ ಸಾವಂತ, ನನ್ನ ಮಾತೋಶ್ರೀಯವರಿಗೆ ಪ್ರಶಸ್ತಿ ನೀಡಿ ಸೇವೆಯನ್ನು ಗುರುತಿಸಿರುವ ಶಾಲೆಯ ಕೊಡುಗೆಯನ್ನು ಮುಕ್ತ ಕಂಠದಿಂದ ಪ್ರಶಂಸಿಸಿದರು.
ಪ್ರಶಸ್ತಿ ಸ್ವೀಕರಿಸಿದ ಪ್ರಮೀಳಾ ದತ್ತಾತ್ರೇಯ ಪವಾರ್ ಮಾತನಾಡಿ, ಈ ಪ್ರಶಸ್ತಿಯು ನನ್ನ ಸೇವೆಯ ಸಾರ್ಥಕತೆಯನ್ನು ಹೆಚ್ಚಿಸಿದೆ ಎಂದು ಭಾವುಕರವಾಗಿ ಕೃತಜ್ಞತೆ ಅರ್ಪಿಸಿದರು.
ಅಧ್ಯಕ್ಷತೆ ವಹಿಸಿದ್ದ ಶಾಲಾ ಮುಖ್ಯಾಧ್ಯಾಪಕರಾದ ದಿನೇಶ್ ಗಾಂವಕರ್ ಮಾತನಾಡಿ, ನಮ್ಮ ಶಾಲೆಯು ತನ್ನ ಶೈಕ್ಷಣಿಕ ಸೇವೆಯೊಂದಿಗೆ ಸಾಮಾಜಿಕ ಸೇವೆಯನ್ನೂ ಕೈಗೊಳ್ಳುವುದರ ಮೂಲಕ ನಾಡಿನ ಪ್ರತಿಷ್ಠಿತ ಶಾಲೆಯಾಗಿ ಹೊರಹೊಮ್ಮಿದೆ. ನಮ್ಮ ಶಾಲೆಗೆ ಹಲವು ದಾನಿಗಳು ಪ್ರತಿನಿತ್ಯ ಸಹಾಯ ಮಾಡಿ ಶಾಲೆಯ ಪ್ರಸಿದ್ಧಿಯನ್ನ ನಾಡಿನಾದ್ಯಂತ ಪಸರಿಸಲು ಕಾರಣೀಭೂತರಾಗಿದ್ದಾರೆ ಎಂದರು.
ಪ್ರಮುಖವಾಗಿ ಓಎಸ್ಜಿ ಗ್ರೂಪ್ ಹಾಗೂ ಪ್ರಮೀಳಾ ದತ್ತಾತ್ರೇಯ ಪವಾರ್ ಕುಟುಂಬದ ಕೊಡುಗೆಯನ್ನು ಮನದಿಂದ ಸ್ಮರಿಸಲೇಬೇಕಾಗಿದೆ ಮುಂದೆಯೂ ಇವರ ಸಹಾಯ, ಮಾರ್ಗದರ್ಶನ ನಮ್ಮೊಂದಿಗೆ ಇರುತ್ತದೆ ಎನ್ನುವ ನಂಬಿಕೆ ನಮ್ಮದು ಎಂದು ಹೇಳಿದರು.
ಈ ಪ್ರಶಸ್ತಿ ಪ್ರತಿವರ್ಷ ಶೈಕ್ಷಣಿಕವಾಗಿ ಉತ್ತವ ಸೇವೆ ಮತ್ತು ಕೊಡುಗೆ ನೀಡಿದ ವ್ಯಕ್ತಿಗಳನ್ನು ಗುರುತಿಸಿ ನೀಡುತ್ತ ಬರುತ್ತಿದ್ದೇವೆ. ಇದಕ್ಕೆ ಅಡಿಪಾಯ ಹಾಕಿಕೊಟ್ಟ ಗುರೂಜಿ ಆರ್.ಜಿ.ಪ್ರಭು ಅವರ ಸಾಮಾಜಿಕ ಕಳಕಳಿಯನ್ನು ನಾನು ಅತ್ಯಂತ ಭಾವಪರವಸೆಯಲ್ಲಿ ಸ್ಮರಿಸಿಕೊಳ್ಳುತ್ತೇನೆ. ಜೊತೆಗೆ ಈ ಕಾರ್ಯಕ್ರಮ ಸಹಕಾರ ನಿಡಿದ ಎಲ್ಲ ಮನಸ್ಸುಗಳಿಗೆ ಧನ್ಯತೆ ಸಮಿರ್ಪಸುತ್ತೇನೆಂದರು.
ವೇದಿಕೆಯಲ್ಲಿ ಸತ್ಯಸಾಯಿ ದೇವಸ್ಥಾನದ ನಿವೃತ್ತ ಆರಕ್ಷಕ ನಿರೀಕ್ಷಕ ಶಿವಾನಂದ ಮೇತ್ರಿ, ಶಿಕ್ಷಕರಾದ ಸಂತೋಷ ಕಾಂಬ್ಳೆ, ಜೆ.ಬಿ ತಿಪ್ಪೇಸ್ವಾಮಿ, ರೂಪಾಲಿ ಸಾವಂತ ಹಾಜರಿದ್ದರು. ನಾಗವೇಣಿ ತಳೇಕರ್ ಸಂಗಡಿಗರ ಪ್ರಾರ್ಥನೆಯೊಂದಿಗೆ ಆರಂಭಗೊಂಡ ಕಾರ್ಯಕ್ರಮದಲ್ಲಿ ಶಿಕ್ಷಕ ಡಾ. ಗಣೇಶ ಬಿಷ್ಠಣ್ಣನವರ ಸ್ವಾಗತಿಸಿ, ನಿರೂಪಿಸಿದರು. ವಿಜಯಕುಮಾರ ನಾಯಕ ವಂದಿಸಿದರು.
ಇದನ್ನು ಓದಿ : ಕಾರವಾರದಲ್ಲಿ ವಿಶ್ವ ಸ್ಕೌಟ್ ಡೇ ಮತ್ತು ರಸ್ತೆ ಸುರಕ್ಷತಾ ಸಪ್ತಾಹ ಆಚರಣೆ.
ಮೀನುಗಾರರ ಶಕ್ತಿ ಪ್ರದರ್ಶನಕ್ಕೆ ಅವಕಾಶ ಮಾಡಿಕೊಡಬೇಡಿ. ಬಂದರು ಯೋಜನೆ ವಿರುದ್ಧ ಗಣಪತಿ ಉಳ್ವೆಕರ್ ಗುಡುಗು.