ಕಾರವಾರ(Karwar) : ರಾಜ್ಯದ ವಿವಿಧಡೆ ಅಯ್ಯಪ್ಪ(Ayyappa) ವೃತಧಾರಿಗಳು ಕಠಿಣ ವೃತಾನುಷ್ಠಾನ ಮಾಡುತ್ತಿದ್ದಾರೆ. 48 ದಿನಗಳ ವೃತದಲ್ಲಿ ತೊಡಗಿರುವ ವೃತಧಾರಿಗಳು ಶ್ರದ್ಧೆ, ಭಕ್ತಿಯಿಂದ ಅಯ್ಯಪ್ಪನ ನಾಮಸ್ಮರಣೆಯಲ್ಲಿದ್ದಾರೆ.    ಕಾರವಾರ (Karwar) ತಾಲೂಕಿನ ಕಿನ್ನರ ಅರವವಾಡದಲ್ಲಿ  (Kinner Aravawada) ಅಯ್ಯಪ್ಪ ವೃತಾಧಾರಿಗಳು ಭಕ್ತಿಯ ಪರಾಕಾಷ್ಠೆ ಮೆರೆದರು.

ಭಕ್ತರ ಮುಂದೆ ಕುದಿಯುವ ಎಣ್ಣೆಯಲ್ಲಿ ವಡೆಗಳನ್ನ ತೆಗೆಯುವ ಮೂಲಕ ನೆರೆದವರನ್ನ ರೋಮಾಂಚನಗೊಳಿಸಿದರು. . ಗುರು ಸ್ವಾಮಿಗಳಾದ ಸಂದೀಪ ಅವರು ಸನ್ನಿಧಿಯಲ್ಲಿ ಪೂಜೆ ಸಲ್ಲಿಸಿದ ಬಳಿಕ ಮುಂಭಾಗದಲ್ಲಿದ್ದ ಒಲೆಯ ಮೇಲಿಟ್ಟ ಬಂಡಿಗೆ ಎಣ್ಣೆಯನ್ನ ಸುರಿದರು. ನಂತರ ಬೆಂಕಿ ಮಾಡಿದರು. ಬಳಿಕ ಹಿಟ್ಟಿನಿಂದ ವಡೆ ತಯಾರಿಸಿ ಕುದಿಯುವ ಎಣ್ಣೆಗೆ (Boiling Oil) ಸುರಿದರು. ಈ ವೇಳೆ ವೃತಾಧಾರಿಗಳ ಭಕ್ತಿಯ ಪರಾಕಾಷ್ಟೆ ಮುಗಿಲು ಮುಟ್ಟಿತು. ಹಿರಿಯ ಸ್ವಾಮಿಗಳೊಂದಿಗೆ ಕನ್ಯಾ ಸ್ವಾಮಿಗಳು ಬಿಸಿಬಿಸಿ ಎಣ್ಣೆಯಲ್ಲಿ ಕೈ ಹಾಕಿ ವಡೆ ತೆಗೆಯುವ ದೃಶ್ಯ ನೆರೆದ ಭಕ್ತರ ಎದೆ ಝಲ್ ಎನಿಸಿತು.

ಭಕ್ತಿ ಮತ್ತು ನಿಷ್ಠೆ ಇದ್ದರೇ ಏನು ಆಗೋದಿಲ್ಲ ಎಂಬುದಕ್ಕೆ ಇದು ಸಾಕ್ಷಿ ಎಂದು ಭಕ್ತರು ಅಭಿಪ್ರಾಯ ವ್ಯಕ್ತಪಡಿಸಿದ್ರು. ಕಳೆದ 29 ವರ್ಷಗಳಿಂದ ಕಿನ್ನರದ ಅರವವಾಡದಲ್ಲಿ ಅಯ್ಯಪ್ಪ ಸನ್ನಿಧಿಯಲ್ಲಿ ವೃತ ನಡೆಸಿಕೊಂಡು ಬರಲಾಗುತ್ತಿದೆ. ಇಲ್ಲಿನ ಗುರು ಸ್ವಾಮಿಗಳಾದ ಸಂದೀಪ ಅವರು ಕಳೆದ ಹಲವು ವರ್ಷಗಳಿಂದ ವಿಶೇಷವಾಗಿ ಎಣ್ಣೆಯಲ್ಲಿ ವಡೆತೆಗೆಯುವ ಕಾರ್ಯಕ್ರಮ ಮುಂದುವರಿಸಿಕೊಂಡು ಬಂದಿದ್ದಾರೆ.

ಇದಕ್ಕೂ ಮುನ್ನ ದೇವರಿಗೆ ಅಭೀಷೇಕ ನಡೆದು ನಂತರ  ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು. ಗ್ರಾಮದೇವರಾದ ಮಹಾದೇವಸ್ಥಾನದವರೆಗೆ ಕೊಂಡೊಯ್ದು, ಪೂಜೆ ಸಲ್ಲಿಸಿ ಪುನಃ ಸನ್ನಿಧಾನಕ್ಕೆ ಕರೆತರಲಾಯಿತು. ನೂರಾರು ಸಂಖ್ಯೆಯಲ್ಲಿ ಭಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ಇದನ್ನು ಓದಿ : ಮಂಗಳೂರಿನಲ್ಲಿ ಎನ್ಎಐ ಘಟಕ. ಸಂಸದ ಕ್ಯಾ.ಬ್ರಿಜೇಶ್ ಚೌಟ ಅಮಿತ್ ಶಾ ಭೇಟಿ.

ಹ್ಯಾಟ್ರಿಕ್ ಹೀರೋ ಶಿವಣ್ಣ ಆಸ್ಪತ್ರೆಯಿಂದ ಡಿಸ್ಚಾರ್ಜ್.

ಸರ್ಕಾರದ ದುರಾಡಳಿತ ಖಂಡಿಸಿ ಭಟ್ಕಳದಲ್ಲಿ ಬಿಜೆಪಿ ಪ್ರತಿಭಟನೆ.

ಕೇಕ್ ತಿಂದು 40ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ.