ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಹುಣಸೂರು(Hunasuru) : ಹೊಸ ವರ್ಷದ(New Year) ದಿನದಂದು ಕಟ್ ಮಾಡಿ ಇಟ್ಟಿದ್ದ ಕೇಕ್ (Cake) ತಿಂದು 40 ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥರಾದ ಘಟನೆ ತಾಲೂಕಿನ ಬೋಳನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಶ್ರೀ ಮಂಜುನಾಥ ವಿದ್ಯಾಸಂಸ್ಥೆ (Shri Manjunath Vidya Samsthe) ಶಾಲಾ ಮಕ್ಕಳು ಅಸ್ವಸ್ಥರಾದವರು. ನ್ಯೂ ಇಯರ್ ದಿನದಂದು(New Year) ಕೇಕ್ ಕಟ್ ಮಾಡಿ ಉಳಿಸಲಾಗಿತ್ತು. ಎರಡು ದಿನವಾಗಿದ್ದ ಕೇಕ್ನ್ನ ಮಕ್ಕಳು ತಿಂದಿದ್ದಾರೆ. ಕೇಕ್ ಸೇವಿಸಿದ ನಂತರ ಮಕ್ಕಳು ವಾಂತಿ ಭೇದಿಯಿಂದ ಅಸ್ವಸ್ಥರಾಗಿದ್ದಾರೆ. ನಂತರ ಮಕ್ಕಳನ್ನ ಬೋಳನಹಳ್ಳಿಯ ಆಯುಷ್ಮಾನ್ ಆರೋಗ್ಯ ಕೇಂದ್ರಕ್ಕೆ (Ayushman Health Center) ದಾಖಲಿಸಲಾಗಿದೆ.
ಚಿಕಿತ್ಸೆ ಪಡೆದ ನಂತರ ಮಕ್ಕಳು ಚೇತರಿಸಿಕೊಂಡಿದ್ದಾರೆ. ಆಸ್ಪತ್ರೆಗೆ ಕ್ಷೇತ್ರ ಶಿಕ್ಷಣಾಧಿಕಾರಿ ಮಹದೇವ್ ಭೇಟಿ ನೀಡಿ ಮಕ್ಕಳ ಆರೋಗ್ಯದ ಬಗ್ಗೆ ಮಾಹಿತಿ ಪಡೆಡಿದ್ದಾರೆ. ನಿರ್ಲಕ್ಷ್ಯ ವಹಿಸಿದ ಶಾಲಾ ಮುಖ್ಯೋಪಾದ್ಯಾಯ ಅಶ್ವತ್ಥ್ರಿಗೆ ಬಿಇಓ ಕ್ಲಾಸ್ ತೆಗೆದುಕೊಂಡಿದ್ದಾರೆ.
ಇದನ್ನು ಓದಿ : ಗಂಗೊಳ್ಳಿ ಪಂಚಾಯತ್ ನಲ್ಲಿ ಮೌಲ್ವಿಯಿಂದ ದುವಾ, ಅರ್ಚಕರಿಂದ ಗಣಹೋಮ.
ಕಾನಸ್ಟೇಬಲ್ ಒಬ್ಬರನ್ನ ಹನಿಟ್ರ್ಯಾಪ್ ಖೆಡ್ಡಾಕ್ಕೆ ದೂಡಿದ ಐನಾತಿ ಲೇಡಿ.
ಗೀತಾ ಪ್ರಕರಣ. ಕೊಲೆ ಆರೋಪಿಯ ಬಾಡೂಟ ಉಂಡ ದೋಸ್ತರು.
ಉತ್ತರಕನ್ನಡದ ಸಂಧ್ಯಾ, ಆನಂದ, ಸಂದೀಪ ಸೇರಿ ಹಲವರಿಗೆ ಮಾದ್ಯಮ ಅಕಾಡೆಮಿ ಪ್ರಶಸ್ತಿ.