ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಹೈದ್ರಾಬಾದ್(Hyderbad) : ಮಗಳ ಮದುವೆಯ ಖುಷಿಯಲ್ಲಿ ಇದ್ದ ತಂದೆ ಧಾರೆಯೆರೆಯುವ ಶಾಸ್ತ್ರ ಪೂರೈಸಿದ  ಮರುಕ್ಷಣವೇ ಕೊನೆಯುಸಿರೆಳೆದ ದುರಂತದ (Tragedy) ಘಟನೆ ತೆಲಂಗಾಣದಲ್ಲಿ ನಡೆದಿದೆ.

ರಾಮೇಶ್ವರಪಲ್ಲಿ ಗ್ರಾಮದ ನಿವಾಸಿ 56 ವರ್ಷದ  ಬಾಲಚಂದ್ರಂ ಮದುವೆ ಮಂಟಪದಲ್ಲಿ ಕುಸಿದು ಬಿದ್ದು ಮೃತಪಟ್ಟ ದುರ್ದೈವಿ. ಕುಸಿದು ಬಿದ್ದ ತಕ್ಷಣ ಬಾಲಚಂದ್ರಮ್ ಅವರನ್ನ  ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ವೈದ್ಯರು  ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.   ಸಂಭ್ರಮಾಚರಣೆಯಲ್ಲಿ(Celebration) ಭಾಗವಹಿಸಿದ್ದ ಸಂಬಂಧಿಕರು ಮತ್ತು ಅತಿಥಿಗಳು ಇದರಿಂದ ಆಘಾತಕ್ಕೊಳಗಾಗುವಂತಾಯಿತು.

ಭಿಕ್ಕನೂ‌ರ್ ಮಂಡಲದ ಜಂಗಂಪಲ್ಲಿ ಗ್ರಾಮದ ಮದುವೆ ಮಂಟಪದಲ್ಲಿ ಈ ಘಟನೆ ನಡೆದಿದೆ. ಬಾಲಚಂದ್ರಂ ಅವರು ತಮ್ಮ ಹಿರಿಯ ಮಗಳು ಕನಕ ಮಹಾಲಕ್ಷ್ಮಿಯನ್ನ ಬೆಂಗಳೂರಿನ ರಾಘವೇಂದ್ರ ಅವರೊಂದಿಗೆ ಕೊಟ್ಟು ಮದುವೆ(Marriage) ಮಾಡಿಸಿದ್ದರು. ತಕ್ಷಣ ಮದುವೆಯಲ್ಲಿದ್ದ ಸಂಬಂಧಿಕರು ಮತ್ತು ಕುಟುಂಬ ಸದಸ್ಯರು ಭಯಭೀತರಾದರು.  ಸಂಭ್ರಮದ ಮನೆಯಲ್ಲಿ ಸೂತಕದ ಛಾಯೆ ನಿರ್ಮಾಣವಾಯಿತು.

ಇದನ್ನು ಓದಿ : ಶಿರಸಿಯಲ್ಲಿ ಪ್ರೀತಿ ಕೊಂದ ಕೊಲೆಗಾರ. ಆರೋಪಿ ಆರೆಸ್ಟ್.

ಏಪ್ರಿಲ್ 12ರಿಂದ ಕದಂಬೋತ್ಸವ. ಬನವಾಸಿಯಲ್ಲಿಯೇ ಪಂಪ ಪ್ರಶಸ್ತಿ ಪ್ರದಾನ.

ಗೋ ಕಳೆದುಕೊಂಡ ಕುಟುಂಬಕ್ಕೆ ಪರಮಾತ್ಮನ ರೂಪದಲ್ಲಿ ಬಂದು ಆಕಳು ಕರು ನೀಡಿದ ಮಾಸ್ತಪ್ಪ ನಾಯ್ಕ