ಉತ್ತರಪ್ರದೇಶ : ರೈತನೋರ್ವನ ಬ್ಯಾಂಕ್ ಖಾತೆಗೆ ಬರೋಬ್ಬರಿ 9,900ಕೋಟಿ ರೂಪಾಯಿ ಹಣ ಜಮಾ ಆದ ಆಶ್ಚರ್ಯದ ಘಟನೆ ಉತ್ತರಪ್ರದೇಶದ ಬದೋಹೀಯಲ್ಲಿ ನಡೆದಿದೆ.

ಭಾನು ಪ್ರಕಾಶ ಅವರು ತಮ್ಮ ಖಾತೆಗೆ ಇಷ್ಟೊಂದು ಹಣ ಜಮೆಯಾಗಿದ್ದು ನೋಡಿ ಬ್ಯಾಂಕಿಗೆ ಓಡಿದ್ದಾರೆ. ಬರೋಡಾ ಬ್ಯಾಂಕ್‌ನಲ್ಲಿ ಕಿಸಾನ್ ಕ್ರೆಡಿಟ್ ಕಾರ್ಡ್ (ಕೆಸಿಸಿ) ಸಾಲದ ಖಾತೆ  ಹೊಂದಿರುವ ಅವರು ಚೆಕ್ ಮಾಡಿದಾಗ 99,99,94,95,999.99 ರೂ.ಗಳ ಬ್ಯಾಲೆನ್ಸ್ ಇರುವುದು ಗೊತ್ತಾಗಿದೆ. ಬ್ಯಾಂಕ್‌ ಸಿಬ್ಬಂದಿಗಳು ಕೂಡ ಒಮ್ಮೆಲೇ ಇಷ್ಟೊಂದು ಹಣ ನೋಡಿ ಹೌಹಾರಿದ್ದಾರೆ.

ಜಮೆಯಾದ ಹಣ ಅನುತ್ಪಾದಕ ಆಸ್ತಿ (Non-Performing Asset) ಆಗಿದೆ ಎಂದು ಬ್ಯಾಂಕ್ ಸ್ಪಷ್ಟಪಡಿಸಿದೆ. ತಕ್ಷಣ ದೋಷವನ್ನು ಗುರುತಿಸಿ “ಈ ಸ್ಥಿತಿಗೆ ಸಾಫ್ಟ್‌ವೇರ್ ಗ್ಲಿಚ್ ಕಾರಣವಾಗಿದೆ. ಹೀಗಾಗಿ ಖಾತೆಯಲ್ಲಿ ಅಗಾಧ ಮೊತ್ತವನ್ನು ತೋರಿಸಿದೆ ” ಎಂದು ಬ್ಯಾಂಕಿನ ಶಾಖಾ ವ್ಯವಸ್ಥಾಪಕರು ತಿಳಿಸಿದ್ದಾರೆ.

ಏನ್ಪಿಎ ಗಳಿಗೆ, ಲಿಂಕ್ ಮಾಡಲಾದ ಸಾಫ್ಟ್‌ವೇರ್ ದೋಷದಿಂದಾಗಿ ಹೀಗಾಗಿದ್ದು  ಉಳಿತಾಯ ಖಾತೆಗಳಿಗೆ ಕೆಲವು ಮಿತಿಗಳನ್ನು ವಿಧಿಸಲಾಗುತ್ತೆ. ಹೆಚ್ಚಿನ ಸಮಸ್ಯೆಗಳನ್ನು ತಡೆಗಟ್ಟಲು ಖಾತೆಯನ್ನು ಫ್ರೀಜ್ ಮಾಡಲಾಗುತ್ತದೆ ಎಂದು ಬ್ಯಾಂಕ್ ವ್ಯವಸ್ಥಾಪಕರು  ಹೇಳಿದ್ದಾರೆ.