ಇ ಸಮಾಚಾರ ಡಿಜಿಟಲ್ ನ್ಯೂಸ್(esamachara digital news) ಭಟ್ಕಳ(Bhatkal) : ಭಾರತೀಯ ಸೇನೆಯಲ್ಲಿ(Indian Army)  ಸೇವೆ ಸಲ್ಲಿಸಿ ನಿವೃತ್ತಿ ಹೊಂದಿ ಸ್ವಗ್ರಾಮಕ್ಕೆ ಆಗಮಿಸಿದ  ಯೋಧನಿಗೆ ಮುರ್ಡೇಶ್ವರದಲ್ಲಿ(Murdeshwar) ಭವ್ಯವಾದ ಸ್ವಾಗತ ನೀಡಲಾಯಿತು.

24 ವರ್ಷಗಳ ಕಾಲ ದೇಶದ ವಿವಿಧ ಭಾಗಗಳಲ್ಲಿ ಸೈನಿಕನಾಗಿ(Soldier) ಗೌರವಯುತ ಸೇವೆ ಸಲ್ಲಿಸಿದ ಭಟ್ಕಳ ತಾಲೂಕಿನ ಮುರ್ಡೇಶ್ವರ ಕೋಟದಮಕ್ಕಿಯ ಜನಾರ್ಧನ ರಾಮದಾಸ ದೇವಾಡಿಗ ಅವರು ಸಾರ್ಥಕ ಸೇವೆ ಸಲ್ಲಿಸಿದವರು. ರಾಮದಾಸ ಹಾಗೂ  ಸೀತಾ ಅವರ ಪುತ್ರರಾದ ಜನಾರ್ಧನ ದೇವಾಡಿಗ ಅವರು ರಾಜಸ್ಥಾನ(Rajasthan), ಪಂಜಾಬ್(Panhab), ಜಮ್ಮು–ಕಾಶ್ಮೀರ(Jammu-Kashmir) ಸೇರಿದಂತೆ ಹಲವೆಡೆ ಸೇವೆ ಸಲ್ಲಿಸಿ ದೇಶಸೇವೆಯಲ್ಲಿ ಗಮನಾರ್ಹ ಕೊಡುಗೆ ನೀಡಿದ್ದಾರೆ. ಅವರ ನಿವೃತ್ತಿಯನ್ನು ಸ್ಮರಿಸುವ ಉದ್ದೇಶದಿಂದ ಕೋಟದಮಕ್ಕಿ ಗ್ರಾಮದ(Kotadamakki Village) ಸ್ನೇಹ ಯುವಕ ಸಂಘದ ವತಿಯಿಂದ ಅದ್ದೂರಿ ಸ್ವಾಗತ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಸಂಘದ ಅಧ್ಯಕ್ಷ  ಜಗದೀಶ ದೇವಾಡಿಗ ಹಾಗೂ ಪದಾಧಿಕಾರಿಗಳ ನೇತೃತ್ವದಲ್ಲಿ ಮುರ್ಡೇಶ್ವರದ ಮುಖ್ಯ ದ್ವಾರದಿಂದ ಸ್ವಗೃಹದವರೆಗೆ ಮೆರವಣಿಗೆ ನಡೆಸಲಾಯಿತು. ಈ ವೇಳೆ ಗ್ರಾಮಸ್ಥರು ದೇಶಭಕ್ತಿಯ ಘೋಷಣೆಗಳೊಂದಿಗೆ ನಿವೃತ್ತ ಸೈನಿಕರನ್ನು ಸಂತೋಷದಿಂದ ಬರಮಾಡಿಕೊಂಡರು.

ಕಾರ್ಯಕ್ರಮದಲ್ಲಿ ದೇವಾಡಿಗ ಸಮಾಜದ ಅಧ್ಯಕ್ಷ  ಲಕ್ಷಣ ಕೋಟದಮಕ್ಕಿ, ದೇವಾಡಿಗ ಯುವ ವೇದಿಕೆಯ ಅಧ್ಯಕ್ಷ  ನಾಗರಾಜ ದೇವಾಡಿಗ (ನೆರಿಕುಳಿ), ವಿವಿಧ ಸಂಘ–ಸಂಸ್ಥೆಗಳ ಪದಾಧಿಕಾರಿಗಳು, ಊರಿನ ಗಣ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದು ನಿವೃತ್ತ ಸೈನಿಕರಿಗೆ ಗೌರವ ಸಲ್ಲಿಸಿ ಶುಭಾಶಯ ಕೋರಿದರು.

ಈ ಸಂದರ್ಭದಲ್ಲಿ ಭಟ್ಕಳ ತಾಲೂಕಿನ ಮಾಜಿ ಸೈನಿಕರ ಸಂಘದ(Bhatkal Former Soldiers Association) ಅಧ್ಯಕ್ಷ  ಎಂ.ಡಿ. ಪಕ್ಕಿ, ಕಾರ್ಯದರ್ಶಿ ಶ್ರೀಕಾಂತ ನಾಯ್ಕ ಹಾಗೂ ಸದಸ್ಯರಾದ  ರವೀಂದ್ರ ನಾಯ್ಕ,  ವಾಸು ಮೊಗೇರ, ಶ್ರೀ ಗಣಪತಿ ಮೊಗೇರ ಮತ್ತು  ರಾಜೇಶ ದೇವಾಡಿಗ ಅವರು ಸ್ವಗೃಹಕ್ಕೆ ಭೇಟಿ ನೀಡಿ ಶಾಲು ಹೊದಿಸಿ, ಮಾಲಾರ್ಪಣೆ ಮಾಡುವ ಮೂಲಕ ಗೌರವಿಸಿದರು.

ನಿವೃತ್ತ ಸೈನಿಕರಿಗೆ ನೀಡಿದ ಆತ್ಮೀಯ ಸ್ವಾಗತಕ್ಕೆ ಸ್ನೇಹ ಯುವಕ ಸಂಘದ ಪದಾಧಿಕಾರಿಗಳು, ಊರಿನ ಗಣ್ಯರು ಹಾಗೂ ಸಮಸ್ತ ಗ್ರಾಮಸ್ಥರಿಗೆ ಮಾಜಿ ಸೈನಿಕರ ಸಂಘದ ಪರವಾಗಿ ಕೃತಜ್ಞತೆ ಸಲ್ಲಿಸಲಾಯಿತು.

ಇದನ್ನು ಓದಿ : ಮುಂಡಗೋಡ ಪಿಎಸ್‌ಐ ಯಲ್ಲಾಲಿಂಗ ಕುನ್ನೂರು ವಿಧಿವಶ. ಕಂಬನಿ ಮಿಡಿದ ಸಹದ್ಯೋಗಿಗಳು.

Iಪತಿ–ಪತ್ನಿ ಕಲಹ.  ತಾಯಿಯೊಂದಿಗೆ ಇರಲು ಬಯಸದ ಮಕ್ಕಳು. ಭಾವನ ಮುಗಿಸಿದ ಕಿರಾತಕಿ.

ಜೈಲಿನಲ್ಲಿ ನಿಲ್ಲದ ಖೈದಿಗಳ ಉಪಟಳ. ಕೇಂದ್ರ ಕಾರಾಗೃಹದಲ್ಲಿ ಗಾಂಜಾ, ಮೊಬೈಲ್ ಪೂರೈಕೆ