ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಮುಂಡಗೋಡು (Mundagodu): ಮಹಿಳೆಯೊಬ್ಬರಿಗೆ ಚುಡಾಯಿಸಲು ಮುಂದಾದ ಮೂವರು ಯುವಕರಿಗೆ ಸಾರ್ವಜನಿಕರು ಧರ್ಮದೇಟು ನೀಡಿದ ಘಟನೆ ಉತ್ತರಕನ್ನಡ ಜಿಲ್ಲೆಯ ಮುಂಡಗೋಡು(Mundgodu) ತಾಲೂಕಿನಲ್ಲಿ ನಡೆದಿದ.

ಬೈಕ್ ನಲ್ಲಿದ್ದ ಮೂವರು ಯುವಕರು  ಮಹಿಳೆಯೊಬ್ಬರು ತಮ್ಮ ಸ್ಕೂಟಿಯ ಮೇಲೆ ಯಲ್ಲಾಪುರ ರಸ್ತೆಯ(Yallapur Road) ಮಾರ್ಗವಾಗಿ ಮನೆಗೆ ತೆರಳುತ್ತಿದ್ದಾಗ ಪಲ್ಸರ್ ಬೈಕ್ ನಲ್ಲಿ ಬಂದು  ಚುಡಾಯಿಸಿ, ಮಹಿಳೆಯ ಕೈಲಿದ್ದ ಬ್ಯಾಗನ್ನು ಕಸಿದುಕೊಳ್ಳಲು ಪ್ರಯತ್ನಿಸಿದ್ದಾರೆ. ಈ ವೇಳೆ ರಸ್ತೆಯ ಮೇಲೆ ಹೋಗುತ್ತಿದ್ದ ಸಾರ್ವಜನಿಕರು ಇದನ್ನು ನೋಡಿ ಆ ಮೂರು ಯುವಕರನ್ನ ಹಿಡಿದು ಧರ್ಮದೇಟು ನೀಡಿದ್ದಾರೆ.  ತಕ್ಷಣವೇ 112 ಪೊಲೀಸರ ಸಹಾಯ ವೇಳೆಗೆ ಫೋನ್ ಮಾಡಿ ಮಾಹಿತಿ ನೀಡಿದ್ದರು.

ಸ್ಥಳಕ್ಕೆ ಪೊಲೀಸರು ಆಗಮಿಸುವಷ್ಟರಲ್ಲಿ ಈ ಪುಂಡರು ತಮ್ಮ ಬೈಕ್ ಬಿಟ್ಟು ಪರಾರಿಯಾಗಿದ್ದಾರೆ. ಪುಂಡರು ಬಿಟ್ಟು ಹೋದ ಬೈಕ್ ನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪೊಲೀಸರು ಪುಂಡರಿಗಾಗಿ ಹುಡುಕಾಟ ನಡೆಸಿದ್ದಾರೆ.

ಇದನ್ನು ಓದಿ : ಪೊಲೀಸ್ ರನ್ ಲ್ಲಿ ಕುಸಿದು ಬಿದ್ದ ವ್ಯಕ್ತಿ. ಮಾನವೀಯತೆ ಮೆರೆದ ಶಾಸಕ ಸತೀಶ್ ಸೈಲ್.

ಮತಾಂತರದ ನೆಪದಲ್ಲಿ ಪ್ರೇಯಸಿಯನ್ನ ಕೊಂದ ಇನ್ನಿಬ್ಬರು ಪ್ರೇಯಸಿಯರು. ಮೂವರು ಲಾಕ್

ಹೊರ ಗುತ್ತಿಗೆ ನೌಕರರಿಗೆ ಬಜೆಟ್ ನಲ್ಲಿ ಅನ್ಯಾಯ. ಕಾರವಾರದಲ್ಲಿ ಪ್ರತಿಭಟನೆ.