ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ಯಲ್ಲಾಪುರ(Yallapura) : ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ(Rape) ಏಸಗಿದ 20 ವರ್ಷದ ಯುವಕನನ್ನ ಪೊಲೀಸರು ಬಂಧಿಸಿದ್ದಾರೆ.
ಹಳಿಯಾಳದ(Haliyal) ಭಾಗವತಿಯ ಅಸ್ಲಾಂ ಆದಂ ಸಾಬ್ ಸುತಾರ್ ಅತ್ಯಾಚಾರ ಎಸಗಿದ ಯುವಕ. ಏಪ್ರಿಲ್ 1ರಂದು ಹಳಿಯಾಳದ ಭಾಗವತಿಯ ಅಸ್ಲಾಂ ತನ್ನ ಸಂಬಂಧಿಕರ ಮನೆಗೆ ಆಗಮಿಸಿದ್ದ. ಯಲ್ಲಾಪುರ(Yallapur) ತಾಲೂಕಿನ ಕಿರವತ್ತಿ (kirawatti) ಬಳಿಯ ಕಾಡುಸಿದ್ದೇಶ್ವರ ದೇವಾಲಯದಲ್ಲಿ ಹಳಿಯಾಳದ ಭಾಗವತಿಯ ಅಸ್ಲಾಂ ಆದಂ ಸಾಬ್ ಸುತಾರ್ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ನಡೆಸಿದ್ದ. ಪರಿಶಿಷ್ಟ ಪಂಗಡಕ್ಕೆ ಸೇರಿದ ಬಾಲಕಿಗೆ ಮೊದಲು ಚಾಕಲೇಟು ಕೊಡುವುದಾಗಿ ನಂಬಿಸಿದ್ದ. ಆಟ ಆಡೋಣ ಎಂದು ಫುಸಲಾಯಿಸಿ ಕಾಡುಸಿದ್ದೇಶ್ವರ ದೇವಾಲಯದ ಬಳಿ ಕರೆದೊಯ್ದು ಬಾಲಕಿಯ ಬಟ್ಟೆ ಬಿಚ್ಚಿದ್ದ. ಬಾಲಕಿ ಅಳಲು ಶುರು ಮಾಡಿದಾಗ ಆಕೆಯ ಕೆನ್ನೆಗೆ ಬಾರಿಸಿ ಹಿಂಸೆ ನೀಡಿದ್ದ. ಅದಾದ ನಂತರ ಆ ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆಂದು ಗೊತ್ತಾಗಿದೆ.
ಬಾಲಕಿ ಅಳುತ್ತಿರುವುದನ್ನು ನೋಡಿದ ಆ ಊರಿನ ಯುವತಿಯೋರ್ವರು ಪ್ರಶ್ನಿಸಿದ್ದರು. ಆಗ, ಅತ್ಯಾಚಾರ ನಡೆದಿರುವುದು ಗೊತ್ತಾಯಿತು. ಊರಿನವರೆಲ್ಲ ಸೇರಿ ಅಸ್ಲಾಂ ಆದಂ ಸಾಬ್ ಸುತಾರ್’ನನ್ನು ಧರ್ಮದೇಟು ನೀಡಿದ್ದರು. ಗಾಯಗೊಂಡ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಸ್ಲಾಂ ಆದಂ ಸಾಬ್ ಸುತಾರ್ ಚೇತರಿಸಿಕೊಂಡ ನಂತರ ಪೊಲೀಸರು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ. ನ್ಯಾಯಾಲಯ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಬುಧವಾರ ದೊರೆತ ಪ್ರಾಥಮಿಕ ಮಾಹಿತಿ ಪ್ರಕಾರ ಅತ್ಯಾಚಾರಕ್ಕೆ ಒಳಗಾದ ಸಂತ್ರಸ್ತೆ ಹಾಗೂ ಅತ್ಯಾಚಾರ ನಡೆಸಿದ ಕಾಮುಕ ಇಬ್ಬರೂ ಅಪ್ರಾಪ್ತರೆಂದು ಭಾವಿಸಲಾಗಿತ್ತು. ಹೀಗಾಗಿ ಸಂತ್ರಸ್ತೆ ಜೊತೆ ಆರೋಪಿಯ ಹೆಸರು-ವಿಳಾಸ-ಫೋಟೋವನ್ನು ಬಹಿರಂಗಪಡಿಸಿರಲಿಲ್ಲ. ಇದೀಗ ಅತ್ಯಾಚಾರ ಆರೋಪಿಯ ವಯಸ್ಸು ಖಚಿತವಾಗಿದ್ದು, ಆತನಿಗೆ 19 ವರ್ಷ ಪೂರ್ಣವಾಗಿರುವುದು ದೃಢವಾಗಿದೆ ಎಂದು ಪೊಲೀಸ್ ಇಲಾಖೆ ತಿಳಿಸಿದೆ.
ಇದನ್ನು ಓದಿ: ವಿದ್ಯುತ್ ಗಾಗಿ ರೊಚ್ಚಿಗೆದ್ದ ರೈತರು. ಕದಂಬೋತ್ಸವ ದಿನದವರೆಗೆ ಡೆಡ್ ಲೈನ್.