ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ದಾಂಡೇಲಿ(Dandeli) : ಹೆಜ್ಜೇನು ದಾಳಿಯಿಂದ(Honeybee attack) ಜನರು ದಿಕ್ಕಾಪಾಲಾಗಿ  ಓಡಿದ ಘಟನೆ ನಗರದ ಹಳಿಯಾಳ ರಸ್ತೆಯ 3ನಂ ಗೇಟ್ ಹತ್ತಿರ  ಬುಧವಾರ ಮಧ್ಯಾಹ್ನ ನಡೆದಿದೆ.

ದಾಳಿಯಿಂದ ಮೂವರಿಗೆ ಗಾಯವಾಗಿದೆ. ಹಳಿಯಾಳ ರಸ್ತೆಯ (Haliyal Road) 3ನಂ ಗೇಟ್ ಹತ್ತಿರದ ನಿವಾಸಿಗಳಾದ ಮಹಮ್ಮದ್ ಇಸಾಕ್, ಬಹದ್ದೂರ್ ಖಾನ್ ಮತ್ತು ಮನೋಜ್ ಕುಮಾರ್  ಹೆಜ್ಜೇನು ದಾಳಿಯಿಂದ ಗಾಯಗೊಂಡು ನಗರದ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಏಕಾಏಕಿ ಹೆಜ್ಜೇನು ದಾಳಿ ಮಾಡಿದ ಪರಿಣಾಮವಾಗಿ ಅಲ್ಲಿದ್ದ ಜನರು ದಿಕ್ಕಾ ಪಾಲಾಗಿ ಓಡಿಹೋಗಿ ರಕ್ಷಿಸಿ ಕೊಂಡಿದ್ದರಿಂದ ಹೆಚ್ಚಿನ ಜನರಿಗೆ ತೊಂದರೆಯಾಗಿಲ್ಲ.  ದಾಂಡೇಲಿ ನಗರ ಠಾಣೆಯ(Dandeli Town Station) ಪೊಲೀಸರು  ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆಯನ್ನು ನಡೆಸಿದ್ದಾರೆ.

ಇದನ್ನು ಓದಿ : ಹುತಾತ್ಮ ಯೋಧನ ಕುಟುಂಬಕ್ಕೆ ಭಟ್ಕಳ ತಾಲೂಕು ಮಾಜಿ ಸೈನಿಕರ ಸಂಘ ಸಹಾಯ.

ಸ್ಟಾರ್ ಚಾಯ್ಸ್ ಕಲಾ ಕೇಂದ್ರದಲ್ಲಿ ಚಿಣ್ಣರ ಚಿಲಿಪಿಲಿ ಆರಂಭ.

ಕಾಳಿ ಹಳೆ ಸೇತುವೆ ತೆರವುಗೊಳಿಸುವ ವೇಳೆ ಘಟನೆ.

ಪಾಪ ಮೊನಾಲಿಸಾ. ಆಫರ್ ನೀಡಿದ್ದ ನಿರ್ದೇಶಕ ಆರೆಸ್ಟ್