ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ಶಿರಸಿ (Sirsi): ಶಿರಸಿ ನಗರ ಪೊಲೀಸ ಠಾಣೆಯ ಪಿಎಸ್ಐ ನಾಗಪ್ಪ ಬಿ ಅವರಿಗೆ ಮುಖ್ಯಮಂತ್ರಿ ಬಂಗಾರ ಪದಕ (CM Gold Medal) ಪ್ರಧಾನ ಮಾಡಲಾಯಿತು. ಪೊಲೀಸ್ ಇಲಾಖೆಯಲ್ಲಿ ಉತ್ತಮ ಅಧಿಕಾರಿಯಾಗಿ ಸೇವೆ ಸಲ್ಲಿಸಿರುವುದನ್ನ ಪರಿಗಣಿಸಿ ಸರ್ಕಾರ ಪುರಸ್ಕಾರ ನೀಡಿ ಗೌರವಿಸಿದೆ.
ರಾಯಚೂರು(Rayachuru) ಜಿಲ್ಲೆಯ ಮಸ್ಕಿ ಮೂಲದ ನಾಗಪ್ಪ ಅವರು ಕಲಬುರಗಿಯಲ್ಲಿ ಪಿಎಸ್ಐ(PSI) ಆಗಿ ನಿಯೋಜನೆಯಾಗಿ ಬಳಿಕ ಉತ್ತರಕನ್ನಡ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಯಲ್ಲಿ ಅವರು ಕರ್ತವ್ಯ ನಿಭಾಯಿಸಿದ್ದಾರೆ. ದಾಂಡೇಲಿ, ಕಾರವಾರದಲ್ಲಿಯೂ ಅವರು ಉತ್ತಮ ರೀತಿ ಸೇವೆ ಸಲ್ಲಿಸಿದ್ದಾರೆ. 2022ನೇ ಸಾಲಿನ ಮುಖ್ಯಮಂತ್ರಿ ಚಿನ್ನದ ಪದಕಕ್ಕೆ ಅವರು ಆಯ್ಕೆಯಾಗಿದ್ದು, ಬುಧವಾರ ಅವರಿಗೆ ಪ್ರದಾನ ಮಾಡಲಾಯಿತು.
ಕೇವಲ ಇಲಾಖೆ ಕರ್ತವ್ಯ ಮಾತ್ರವಲ್ಲ ಸಾಹಿತ್ಯದಲ್ಲಿಯೂ ಅಪಾರ ಆಸಕ್ತಿ ಹೊಂದಿದ ನಾಗಪ್ಪ ಅವರು ಜನ ಜಾಗೃತಿ ಮೂಡಿಸುವ ಬರಹಗಳನ್ನು ವಿವಿಧ ಪತ್ರಿಕೆಯಲ್ಲಿ ಪ್ರಕಟಿಸಿದ್ದಾರೆ. ತಮ್ಮ ಅಂಕಣ ಬರಹದ ಮೂಲಕ ಸಾಹಿತ್ಯಸಕ್ತರ, ಓದುಗರ ಗಮನ ಸೆಳೆಯುತ್ತಿದ್ದಾರೆ. ಕವಿಯಾಗಿಯೂ ಗುರುತಿಸಿಕೊಂಡಿರುವ ನಾಗಪ್ಪ ಅವರು ಪುಸ್ತಕವನ್ನು ಬರೆದಿದ್ದಾರೆ. ಅಲ್ಪ ಅವಧಿಯಲ್ಲಿ ಜನಸ್ನೇಹಿ ಅಧಿಕಾರಿಯಾಗಿ ಜನ ಮನ್ನಣೆ ಗಳಿಸಿದ್ದಾರೆ.
ಇದನ್ನು ಓದಿ : ಆರು ವರ್ಷದ ಬಾಲಕಿ ಅತ್ಯಾರ ಎಸಗಿದ ಯುವಕನ ಬಂಧನ*
ವಿದ್ಯುತ್ ಗಾಗಿ ರೊಚ್ಚಿಗೆದ್ದ ರೈತರು. ಕದಂಬೋತ್ಸವ ದಿನದವರೆಗೆ ಡೆಡ್ ಲೈನ್.