ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಶಿರಸಿ(Sirsi): ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತರ ಬಲೆಗೆ(Lokayukta Net)  ಜೆ.ಎಂ.ಎಫ್.ಸಿ ನ್ಯಾಯಾಲಯದಲ್ಲಿ(JMFC Court) ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಹಾಯಕ ಪಬ್ಲಿಕ್ ಪ್ರಾಸಿಕ್ಯೂಟರ್ (APP) ಬಿದ್ದ ಘಟನೆ  ಶುಕ್ರವಾರ ನಡೆದಿದೆ.

ಜೆ.ಎಂ.ಎಫ್.ಸಿ ನ್ಯಾಯಾಲಯದ ಎಪಿಪಿ ಪ್ರಕಾಶ ಲಮಾಣಿ ಆರು ಸಾವಿರ ರೂ. ಲಂಚ ಪಡೆಯುತ್ತಿದ್ದ ಸಂದರ್ಭದಲ್ಲಿ ಲೋಕಾಯುಕ್ತರು ಬಂಧಿಸಿದ್ದಾರೆ.  ಕಳ್ಳತನದಲ್ಲಿ ವಶಪಡಿಸಿಕೊಂಡ ನ್ಯಾಯಾಲಯದಲ್ಲಿರುವ ಮುದ್ದೆಮಾಲು ಪಡೆಯಲು ಲಂಚದ ಬೇಡಿಕೆಯನ್ನ ಇಟ್ಟಿದ್ದರು. ಲಂಚ ನೀಡುತ್ತಿರುವಾಗ ಲೋಕಾಯುಕ್ತರು ದಾಳಿ ನಡೆಸಿದ್ದರು.

ಪವನಕುಮಾರ ಎಂಬವರು ಲೋಕಾಯುಕ್ತ ಎಸ್ಪಿ ಕುಮಾರ ಚಂದ್ರ ಅವರಿಗೆ ದೂರು ನೀಡಿದ್ದರು. ಅದರ ಆಧಾರದ ಮೇಲೆ ಲೋಕಾಯುಕ್ತ ಅಧಿಕಾರಿಗಳು ಸಿಬ್ಬಂದಿಗಳು ದಾಳಿ ನಡೆಸಿದ್ದಾರೆ.

ಇದನ್ನು ಓದಿ : ಗೋಕರ್ಣ ಸನ್ನಿಧಿಯಲ್ಲಿ ಪಿಎಸ್ಐ ಸಂಸ್ಕಾರ ಅನಾವರಣ. ಭಕ್ತರ ಮುಂದೆ ಎಎಸ್ಐ ಗೆ ಹೊಡೆಯಲು ಏನು ಕಾರಣ?

ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಗುಜರಿ ಗೋಡೌನ್ ಗೆ ಬೆಂಕಿ. ಸಂಚಾರ ವ್ಯತ್ಯಯ

ಅನ್ಯ ಜಾತಿ ವಿವಾಹದಿಂದ ಸಿಟ್ಟಾದ ತಂದೆ. ಇಬ್ಬರಿಗೂ ಚಾಕು ಇರಿದ. ತಾನು ವಿಷ ಸೇವಿಸಿದ.