ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಭಟ್ಕಳ(Bhatkal) : ಐತಿಹಾಸಿಕ ಹಿನ್ನಲೆಯಿರುವ ಉತ್ತರಕನ್ನಡ ಜಿಲ್ಲೆಯ ಭಟ್ಕಳದ ಚೆನ್ನಪಟ್ಟಣ ಶ್ರೀ ಹನುಮಂತ ದೇವರ ಜಾತ್ರೋತ್ಸವ(Jatrotsava) ವಿಜೃಂಭಣೆಯಿಂದ ಜರುಗಿತು.
ರಾಮನವಮಿ(Ramanavami) ದಿನವಾದ ರವಿವಾರ ಬೆಳಿಗ್ಗೆ ಧಾರ್ಮಿಕ ಕಾರ್ಯ ನಡೆದು ದೇವರ ಉತ್ಸವ ಮೂರ್ತಿಯನ್ನ ರಥದ ಮೇಲೆ ಅಲಂಕರಿಸಲಾಯಿತು. ಬಳಿಕ ಭಕ್ತರಿಂದ ರಥ ಕಾಣಿಕೆ ಸಮರ್ಪಣೆ ನಡೆಯಿತು. ಮಧ್ಯಾಹ್ನ ಸಂಪ್ರದಾಯದಂತೆ ಜೈನ(Jain) ಹಾಗು ಮುಸ್ಲಿಂ(Muslim) ಕುಟುಂಬಕ್ಕೆ ಆಹ್ವಾನ ನೀಡುವುದರ ಮೂಲಕ ಜಾತ್ರೆಗೆ ಚಾಲನೆ ನೀಡಲಾಯಿತು. ಸಿದ್ದವಾಗಿರುವ ಬ್ರಹ್ಮ ರಥಕ್ಕೆ(Brahmaratha) ಭಟ್ಕಳದ ಸಮಸ್ತ ಸಮಾಜದ ಮುಖಂಡರು ಈಡುಗಾಯಿ ಒಡೆದ ಬಳಿಕ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.
ದೇವಾಲಯದ ಎದುರಿನಿಂದ ಹೂವಿನ ಪೇಟೆ(Flower Market), ಮುಖ್ಯ ರಸ್ತೆ(Main Road) ಮಾರ್ಗ, ರಥಬೀದಿಯ ಮೂಲಕ ರಥವನ್ನ ದೇವಾಲಯದ ಮುಂಭಾಗದವರೆಗೂ ಭಕ್ತರು ರಥವನ್ನೆಳೆದರು. ಜಾತ್ರೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಾಂಕಾಳ್ ವೈದ್ಯ(Mankal Vaidya), ಮಾಜಿ ಶಾಸಕ ಸುನೀಲ್ ನಾಯ್ಕ ಸೇರಿದಂತೆ ವಿವಿಧ ಸಮಾಜದ ಮುಖಂಡರು ಪಾಲ್ಗೊಂಡಿದ್ದರು.
ವಾದ್ಯ ತಂಡಗಳು, ಯುವಕರು ಡಿಜೆ ಹಾಡಿಗೆ(DJ Song) ಕುಣಿದು ಕುಪ್ಪಳಿಸಿದರು. ರಥೋತ್ಸವ ನಡೆಯುವ ಸಂದರ್ಭದಲ್ಲಿ ಮುಸ್ಲಿಂ ಸಮುದಾಯದ ಮುಖಂಡರು, ನಾಗರಿಕರು ಮುಖ್ಯ ರಸ್ತೆ, ಮಾರಿಕಟ್ಟೆ ಬಳಿ ಉಪಸ್ಥಿತರಿದ್ದು ವೀಕ್ಷಿಸಿದರು. ರಥೋತ್ಸವದಲ್ಲಿ ಪೊಲೀಸ್ ಇಲಾಖೆಯಿಂದ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಇದನ್ನು ಓದಿ : ವೈರಿಗಳ ಸದ್ದಡಗಿಸಲು ಸಜ್ಜಾಗುತ್ತಿದೆ ಭಾರತ. ಒನ್ ಓಷನ್ ಒನ್ ಮಿಷನ್.