ಭಟ್ಕಳ : ತಾಲೂಕಿನ ಕಡವಿನಕಟ್ಟೆ ಹೊಳೆಯಲ್ಲಿ ಸ್ನಾನ ಮಾಡಲು ತೆರಳಿದ್ದ ಇಬ್ಬರು ಮುಳುಗಿ  ಸಾವನ್ನಪ್ಪಿದ ಘಟನೆ ನಡೆದಿದೆ

ಸೂರಜ್ ನಾಯ್ಕ್ (17) ಹಾಗೂ ಪಾರ್ವತಿ ಶಂಕರ ನಾಯ್ಕ (35) ಮೃತ ದುರ್ದೈವಿಗಳೆಂದು ಗುರುತಿಸಲಾಗಿದೆ. ಮೃತರು ಭಟ್ಕಳ ತಾಲೂಕಿನ ಕಂಡೆಕೋಡ್ಲು ನಿವಾಸಿಗಳು.

ಇಂದು ಮಧ್ಯಾಹ್ನ ಹತ್ತಕ್ಕೂ ಹೆಚ್ಚು ಮಹಿಳೆಯರು ಮಕ್ಕಳು ಜೊತೆಗೆ ಕಡವಿನಕಟ್ಟೆ ಹೊಳೆಯಲ್ಲಿ ಸ್ನಾನ ಮಾಡಲು ತೆರಳಿದ್ದರು. ಈ ವೇಳೆ ಸೂರಜ್ ನೀರಿನಲ್ಲಿ ಆಯಾ ತಪ್ಪಿ ಮುಳುಗಿದ. ಆತನನ್ನ ರಕ್ಷಿಸಲು ಉಳಿದವರು ಮುಂದಾಗಿದ್ದಾರೆ. ಈ ಸಂದರ್ಭದಲ್ಲಿ ಪಾರ್ವತಿಯೂ ಮುಳುಗಿದ್ದಾರೆ. ಇನ್ನುಳಿದವರು ಕೂಗಲು ಶುರು ಮಾಡಿದಾಗ ಅಕ್ಕ ಪಕ್ಕದವರು ಓದಿ ಬರುವಷ್ಟರಲ್ಲಿ ಇಬ್ಬರು ಮೃತರಾಗಿದ್ದಾರೆ. ಸಂಬಂಧಿಕರ ಆಕ್ರಂದನ. ಮುಗಿಲು ಮುಟ್ಟಿದೆ.

ಮೃತದೇಹ ಹೊರ ತೆಗೆಯಲಾಗಿದ್ದು ಭಟ್ಕಳ ಸರ್ಕಾರಿಆಸ್ಪತ್ರೆಗೆ ರವಾನಿಸಲಾಗಿದೆ. ಭಟ್ಕಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.