ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಜಾರ್ಖಂಡ(Jarkhand): ವಯೋವೃದ್ಧೆ ತಾಯಿಯನ್ನ ಮನೆಯಲ್ಲಿ ದಿಗ್ಬಂಧಿಸಿದ(Blockade) ಪುತ್ರ ಮಹಾಶಯನೊಬ್ಬ ಮಹಾಕುಂಭ ಮೇಳಕ್ಕೆ(Mahakumbha Mela) ತೆರಳಿದ ಘಟನೆ ನಡೆದಿದೆ.
ಜಾರ್ಖಂಡ್ ನ ರಾಮಗಢದ(Jarkhand ramaghad) ಮನೆಯೊಂದರಲ್ಲಿ ಬಂಧಿಯಾಗಿದ್ದ 68 ವರ್ಷದ ಮಹಿಳೆಯನ್ನು ಸ್ಥಳೀಯರು ರಕ್ಷಣೆ (Rescue) ಮಾಡಿದ್ದಾರೆ.
ಅಖಿಲೇಶ್ ಪ್ರಜಾಪತಿ ಎಂಬಾತನೇ ಸೋಮವಾರದಂದು ತನ್ನ ಪತ್ನಿ, ಮಕ್ಕಳು ಹಾಗೂ ಅತ್ತೆ ಮಾವ ಅವರೊಂದಿಗೆ ಪ್ರಯಾಗರಾಜ್ ನಲ್ಲಿ ನಡೆಯುತ್ತಿರುವ ಕುಂಭಮೇಳಕ್ಕೆ ಹೊರಟಿದ್ದಾನೆ. ಹೋಗುವಾಗ ತಾಯಿ ಸಂಜು ದೇವಿಯನ್ನು ಮನೆಯೊಳಗೆ ಕೂಡಿ ಹಾಕಿದ್ದಾನೆ.
ವೃದ್ಧೆ ಮೂರು ದಿನಗಳ ಕಾಲ ಅನ್ನ, ನೀರಿಲ್ಲದೇ ಬಳಲಿದ್ದಾಳೆ. ತನಗಾದ ಹಸಿವು ಹಾಗೂ ಸಂಕಟದಿಂದ ಆಕೆ ಕೂಗುತ್ತಿರುವುದು ಅಕ್ಕಪಕ್ಕದ ಮನೆಯವರಿಗೆ ಕೇಳಿಸಿದೆ. . ಆಗ ಉಪಾಯವಿಲ್ಲದೆ ಮನೆಯ ಬಾಗಿಲು ಒಡೆದು ನೋಡಿದಾಗ ವೃದ್ದೆಯ ದಯನೀಯ ಸ್ಥಿತಿ ಕಣ್ಣಿಗೆ ರಾಚಿದೆ. ತಕ್ಷಣ ಆಕೆಗೆ ಆಹಾರ ತಂದುನೀಡಿದ್ದಾರೆ.
ಬಳಿಕ ಆಕೆಯ ಮಗಳು ಚಾಂದಿನಿ ದೇವಿಗೆ ಮಾಹಿತಿ ನೀಡಿದ್ದಾರೆ. ಚಾಂದನಿ ದೇವಿ ತನ್ನ ಚಿಕ್ಕಪ್ಪ ಮಾನಸ ಮಹತೋ ಅವರೊಂದಿಗೆ ಸ್ಥಳಕ್ಕೆ ಧಾವಿಸಿ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದರು, ನಂತರ ಅವರು ಅವರನ್ನು ವೈದ್ಯಕೀಯ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ದರು. ಪೊಲೀಸರು ಮಗನನ್ನು ದೂರವಾಣಿ ಮೂಲಕ ಸಂಪರ್ಕಿಸಿದ್ದಾರೆ. ತಾನು ಆಹಾರವನ್ನೆಲ್ಲ ನೀಡಿ ಬಂದಿದ್ದೇನೆಂದು ಹೇಳಿದ್ದಾನೆ. ಆದರೆ ತಾಯಿಯ ಬಗ್ಗೆ ಸಹೋದರ ಮಾಡುತ್ತಿರುವ ನಿರ್ಲಕ್ಷ್ಯಕ್ಕೆ ಮಗಳು ಚಾಂದನಿ ದೇವಿ ಅಸಮಾಧಾನ ವ್ಯಕ್ತಪಡಿಸಿದ್ದಾಳೆ.
ಇದನ್ನು ಓದಿ : ಗೋಕರ್ಣದಲ್ಲಿ ಬೆಂಗಳೂರು ಪ್ರವಾಸಿಗರಿಂದ ರಾಮನಗುಳಿ ಯುವಕರ ಮೇಲೆ ಹಲ್ಲೆ
ಮುರ್ಡೇಶ್ವರದಲ್ಲಿ ಫೆಬ್ರವರಿ 26 ರಂದು ಶಿವನ ಆರಾಧನೆಗೆ ನಡೆದಿದೆ ತಯಾರಿ.
ಸಂಸ್ಥೆಯ ಹಣ ದುರ್ಬಳಕೆ. ಸಿಬ್ಬಂದಿ ಮೇಲೆ ಕ್ರಿಮಿನಲ್ ದೂರು ದಾಖಲಿಸಿದ ಡಾ. ವೆಂಕಟೇಶ ನಾಯ್ಕ.