ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಬೆಂಗಳೂರು (Bangalore) : ಮನೆಯಲ್ಲಿ ತಾಯಿ ಹಾಗೂ ಇಬ್ಬರು ಮಕ್ಕಳ ಜೀವ ತೆಗೆದಿರೋ ಟ್ರಾಫಿಕ್ ಹೋಂ ಗಾರ್ಡ್ ಗಂಗರಾಜು ಎಂಬಾತ ಮಚ್ಚಿನೊಂದಿಗೆ ಪೀಣ್ಯಾ ಪೊಲೀಸ್ ಠಾಣೆಗೆ(Peenya police Station) ಬಂದು ಶರಣಾಗಿದ್ದಾನೆ.
ಜಾಲಹಳ್ಳಿ ಕ್ರಾಸ್ (Jalahalli Cross) ಬಳಿಯ ಮನೆಯಲ್ಲಿ ಆರೋಪಿ ಹೋಂ ಗಾರ್ಡ್ (HomeGuard) ಗಂಗರಾಜು, ಪತ್ನಿ, ಮಗಳು ಹಾಗೂ ಮತ್ತೊಬ್ಬ ಮಹಿಳೆ ಮೇಲೆ ಮನಬಂದಂತೆ ಮಚ್ಚು ಬೀಸಿದ್ದಾನೆ. ಇಬ್ಬರು ಹೆಣ್ಣು ಮಕ್ಕಳ ತಲೆಯನ್ನ ಕತ್ತರಿಸಿ ಅಡುಗೆ ಮನೆಯಲ್ಲಿ ಬಿಸಾಡಿದ್ದಾನೆ. ಹೊರಗೆ ಹೋಗಿದ್ದ ಹೆಂಡತಿ ಮನೆಗೆ ಎಂಟ್ರಿ ಆಗುತ್ತಿದ್ದಂತೆ ಆಕೆಯನ್ನು ಕೊಲೆಗೈದಿದ್ದಾನೆ.
ಸ್ಥಳಕ್ಕೆ ಹೊಯ್ಸಳ ಸಿಬ್ಬಂದಿ ಪರಿಶೀಲಿಸಿದಾಗ ಒಂದೇ ಮನೆಯಲ್ಲಿ ಮೂವರು ಮಹಿಳೆಯರ ರುಂಡ-ಮುಂಡ ಬೇರೆಯಾಗಿರೋ ಭೀಕರ ಮೃತದೇಹಗಳು ಪತ್ತೆಯಾಗಿದೆ.
42 ವರ್ಷದ ಆರೋಪಿ ಗಂಗರಾಜುಗೆ ಹೆಬ್ಬಗೋಡಿ (Hebbagodi) ಠಾಣೆಯ ಹೋಮ್ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ. ಭಾಗ್ಯ ಗಂಗರಾಜು (36) ಪತ್ನಿ. ಮಗಳು ನವ್ಯಾ (19) ಹಾಗೂ ಹೇಮಾವತಿ(33) ಮೃತ ಮಹಿಳೆಯರಾಗಿದ್ದಾರೆ.
ಆರೋಪಿ ಗಂಗರಾಜು ಮೂಲತಃ ನೆಲಮಂಗಲದವನಾಗಿದ್ದು(Nelamangala), ಕಳೆದ ಆರು ವರ್ಷದಿಂದ ಜಾಲಹಳ್ಳಿ ಕ್ರಾಸ್ ಬಳಿಯ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಗಂಗರಾಜು ಒಂದೇ ಕೊಣೆಯಲ್ಲಿ ಮೂವರು ಮಹಿಳೆಯರ ಜೀವ ತೆಗೆದು ಮಚ್ಚಿನ ಸಮೇತ ಪೀಣ್ಯಾ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ.
ನಿನ್ನೆ ಮನೆಯಲ್ಲಿ ಗಂಗರಾಜು ಮೇಲೆ ಹೆಂಡತಿ ಮತ್ತು ಇಬ್ಬರು ಯುವತಿಯರು ಜಗಳ ಆಡಿದ್ದರು. ಈ ಜಗಳದಲ್ಲಿ ಮೂವರು ಮಹಿಳೆಯರು ಸೇರಿ ಗಂಗರಾಜು ಮೇಲೆ ಹಲ್ಲೆ ಮಾಡಿದ್ದಾರೆನ್ನಲಾಗಿದೆ. ಈ ಗಲಾಟೆಯಲ್ಲಿ ಗಂಗರಾಜುಗೆ ಮೂವರು ತಲೆ ಊದಿಕೊಳ್ಳುವಂತೆ ಹೊಡೆದಿದ್ದಾರೆ. ಇಂದು ಮತ್ತೆ ಇಬ್ಬರು ಯುವತಿಯರ ಜೊತೆ ಗಂಗರಾಜು ಗಲಾಟೆ ಮಾಡಿಕೊಂಡಿದ್ದಾನೆ. ಆ ವೇಳೆ ಯುವತಿಯರ ಮೇಲೆ ಮಚ್ಚಿನಿಂದ ಹಲ್ಲೆ ಮಾಡಿದ್ದಾನೆ.
ಸದ್ಯ ಪೀಣ್ಯಾ ಪೊಲೀಸ್ ಠಾಣೆಯಲ್ಲಿರುವ ಆರೋಪಿ ಗಂಗರಾಜು ಅವರನ್ನ ಹೆಚ್ಚುವರಿ ಪೊಲೀಸ್ ಆಯುಕ್ತ ವಿಕಾಶಕುಮಾರ್ ಅವರು ವಿಚಾರಿಸುತ್ತಿದ್ದಾರೆ.
ಇದನ್ನು ಓದಿ : ಸೂಚನೆ ಧಿಕ್ಕರಿಸಿ ಸಮುದ್ರಕ್ಕೆ ಹಾರಿದ ಮೂವರ ದುರ್ಮರಣ. ಓರ್ವನ ರಕ್ಷಣೆ
ರಾಜ್ಯದಲ್ಲಿ ನಕ್ಷಲರ ಹೋರಾಟ ಅಂತ್ಯ. ಸಿಎಂ ಮುಂದೆ ಆರು ನಕ್ಷಲರು ಶರಣು.
ನಾನು ಯಾರೊಂದಿಗೂ ಓಡಿ ಹೋಗಿಲ್ಲ. ಪೊಲೀಸ್ ಠಾಣೆಯಲ್ಲಿ ಮಹಿಳೆ ಪ್ರತ್ಯಕ್ಷ.