ಗೋಕರ್ಣ(Gokarn) : ಮೀನುಗಾರಿಕೆಗೆ ತೆರಳಿದ ದೋಣಿಯೊಂದು ಪಲ್ಟಿಯಾದ ಘಟನೆ ಗೋಕರ್ಣ(Gokarn) ಸಮೀಪದ 35 ನಾಟಿಕಲ್ ದೂರದ ಅರಬ್ಬೀ ಸಮುದ್ರದಲ್ಲಿ(Ocean Sea) ಸಂಭವಿಸಿದೆ.
ಘಟನೆಯಲ್ಲಿ ಸಮುದ್ರಕ್ಕೆ ಬಿದ್ದ ನಾಲ್ವರು ಮೀನುಗಾರರನ್ನ ರಕ್ಷಿಸಲಾಗಿದೆ. ಸಂದೀಪ ಸುರೇಶ್ ತಾಂಡೇಲ್, ರಾಜು ಗಣಪತಿ ಕಾಂಬಳೆ, ಪ್ರಶಾಂತ್ ಪಿ ಮೆಹ್ತಾ, ಸೃಜನ್ ಎಂ. ಕವನೇಕರ್ ರಕ್ಷಣೆಗೊಳಗಾದ(Rescue) ಮೀನುಗಾರರಾಗಿದ್ದಾರೆ.
ಗೋಕರ್ಣದ ಗಂಗೆಕೊಳ್ಳದಿಂದ (Gokarn Gangekolla) ಇಂದು ಬೆಳಿಗ್ಗೆ ಮೀನುಗಾರರು ಮೀನು ಬೇಟೆಗೆ ತೆರಳಿದ್ದರು. ಗಾಳಿಯ ರಭಸಕ್ಕೆ ದೋಣಿ ಪಲ್ಟಿಯಾಗಿದೆ. ಅಲ್ಲಿಯೇ ಪಕ್ಕದಲ್ಲಿ ತೆರಳುತ್ತಿದ್ದ ಮಂಗಳೂರು ಯಾಂತ್ರಿಕ ದೋಣಿ ಮೀನುಗಾರರು ನಾಲ್ವರನ್ನ ರಕ್ಷಣೆ ಮಾಡಿದ್ದಾರೆ.
ಘಟನೆಯಲ್ಲಿ ಲಕ್ಷಾಂತರ ಮೌಲ್ಯದ ದೋಣಿ ಮತ್ತು ಬಲೆ ಹಾನಿಯಾಗಿದೆ. ಗಂಗೆಕೊಳ್ಳದ ಶ್ರೀಲೀಲಾ ಬೋಟ್ ಸ್ಥಳಕ್ಕೆ ತೆರಳಿ ಸುರಕ್ಷಿತವಾಗಿ ದಡಕ್ಕೆ ಕರೆತಂದಿದ್ದಾರೆ.
ಇದನ್ನು ಓದಿ : ಭಟ್ಕಳದಲ್ಲಿ ಗಾಂಜಾ ಹೊಡೆದ ಯುವಕನ ಆರೆಸ್ಟ್.
ತಿರುಪತಿಯಲ್ಲಿ ಕಾಲ್ತುಳಿತ. ಏಳು ಭಕ್ತರ ಸಾವು.
ಮಚ್ಚಿನಿಂದ ಮೂವರ ರುಂಡ ಚೆಂಡಾಡಿದ ಹೋಮ್ ಗಾರ್ಡ್. ಮಚ್ಚಿನೊಂದಿಗೆ ಠಾಣೆಗೆ ಬಂದ.