ಶಿರಸಿ(sirsi) : ನಗರದ ಚಂದನ್ ವುಡ್ ವರ್ಕ್ಸ & ಪರ್ನಿಚರ್ ಹತ್ತಿರ ಅರಣ್ಯ ಇಲಾಖೆಯ ಅಧಿಕಾರಿಗಳು ದಾಳಿ(Forest Officer Raid) ನಡೆಸಿ 12 ಚಕ್ರದ ಲಾರಿಯೊಂದನ್ನ ವಶಕ್ಕೆ ಪಡೆದಿದ್ದಾರೆ.

KA- 23 A-4226 ನೋಂದಣಿ ಸಂಖ್ಯೆಯ ಲಾರಿಯಲ್ಲಿ ಅನಧಿಕೃತವಾಗಿ ಅಕೇಶಿಯಾ ಜಾತಿಯ ನಾಟಗಳನ್ನು ಸಾಗಿಸುತ್ತಿರುವ ಬಗ್ಗೆ ಬಂದ ಖಚಿತ ಬಾತ್ಮಿಯ ಮೇರೆಗೆ ಶಿರಸಿ ಅರಣ್ಯ ಸಂಚಾರಿದಳದ ಉಪ ಅರಣ್ಯ ಸಂರಕ್ಷಣಾಧಿಕಾರಿ ಅಶೋಕ ಎ.ಹೆಚ್. ಇವರೊಂದಿಗೆ ಶಿರಸಿ ವಲಯದ ವಲಯ ಅರಣ್ಯಾಧಿಕಾರಿ ಗಿರೀಶ ಎಲ್. ನಾಯ್ಕ ಮತ್ತು ಅರಣ್ಯ ಸಂಚಾರಿದಳದ ವಲಯ ಅರಣ್ಯಾಧಿಕಾರಿ ಶಿಲ್ಪಾ ನಾಯ್ಕ ಇವರು ದಾಳಿ ನಡೆಸಿದ್ದರು.

ದಾಳಿಯಲ್ಲಿ ಒಟ್ಟು 92  ನಾಟಗಳು ಹಾಗೂ ಕೃತ್ಯಕ್ಕೆ ಬಳಸಿದ ಲಾರಿಯನ್ನು ಜಪ್ತಿಪಡಿಸಿಕೊಳ್ಳಲಾಗಿದೆ. ಈ ಸಂದರ್ಭದಲ್ಲಿ ಲಾರಿ ಚಾಲಕ ಕೊಲ್ಲಾಪುರ ಮೂಲದ ಮಾದೇವ ರಾಮಚಂದ್ರ ವಡ್ಡ (34) ಹಾಗೂ  ಶಿರಸಿಯ ಕೊಪ್ಪಳ ಕಾಲೋನಿಯ ಜಗದೀಶ ಮಾದೇವ ಗುಡಿಗಾರ  ಕಾಲೋನಿ  (46}  ಎಂಬುವವರನ್ನು ದಸ್ತಗಿರಿ ಮಾಡಲಾಗಿದೆ.

ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ॥ ಅಜ್ಜಯ್ಯ ಜಿ.ಆರ್.  ಮತ್ತು  ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಸ್. ಎಸ್ ನಿಂಗಾಣಿ ಮಾರ್ಗದರ್ಶನದಲ್ಲಿ  ಉಪ ವಲಯ ಅರಣ್ಯಾಧಿಕಾರಿಗಳಾದ ಧನಂಜಯ ನಾಯ್ಕ. ರಾಜೇಶ ಕೋಟಾರಕರ, ಅರಣ್ಯ ಸಂಚಾರಿದಳದ ಉಪವಲಯ ಅರಣ್ಯಾಧಿಕಾರಿಗಳಾದ ಶಶಿಧರ ಎಲ್. ಜಿ. ಮತ್ತು ಶ್ರೀಮತಿ ಯಶಸ್ವಿನಿ ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿದ್ದರು. ಪ್ರಕರಣದ ತನಿಖೆ  ಮುಂದುವರೆದಿದೆ.

ಇದನ್ನು ಓದಿ : ಅರಬ್ಬೀ ಸಮುದ್ರದಲ್ಲಿ ಪಲ್ಟಿಯಾದ ದೋಣಿ. ಆಪತ್ಬಾಂಧವನಂತೆ ಬಂದ ಮಂಗಳೂರು ಮೀನುಗಾರರು

ಭಟ್ಕಳದಲ್ಲಿ ಗಾಂಜಾ ಹೊಡೆದ ಯುವಕನ ಆರೆಸ್ಟ್.

ತಿರುಪತಿಯಲ್ಲಿ ಕಾಲ್ತುಳಿತ. ಏಳು ಭಕ್ತರ ಸಾವು.

ಮಚ್ಚಿನಿಂದ ಮೂವರ ರುಂಡ ಚೆಂಡಾಡಿದ ಹೋಮ್ ಗಾರ್ಡ್. ಮಚ್ಚಿನೊಂದಿಗೆ ಠಾಣೆಗೆ ಬಂದ.

ಸೂಚನೆ ಧಿಕ್ಕರಿಸಿ ಸಮುದ್ರಕ್ಕೆ ಹಾರಿದ ಮೂವರ ದುರ್ಮರಣ. ಓರ್ವನ ರಕ್ಷಣೆ