ಭಟ್ಕಳ (Bhatkal) : ಮಾದಕ ಗಾಂಜಾ ಸೇವಿಸಿದ ಯುವಕನೋರ್ವನನ್ನ   ಪೊಲೀಸರು ವಶಕ್ಕೆ ಪಡೆದಿದ್ದಾರೆ

ತಾಲೂಕಿನ ಬಿಲಾಲಖಂಡದ ಗುಳ್ಳಿಯ(Gulmi) ನಿವಾಸಿ ಮಹ್ಮದ್ ರಯ್ಯಾನ್ ಮಹ್ಮದ್‌ ಶಬ್ಬಿರ್ (20) ಬಂಧಿತ ಆರೋಪಿಯಾಗಿದ್ದಾನೆ. ಕೂಲಿ ಕೆಲಸ ಮಾಡಿಕೊಂಡಿರುವ ಈತನನ್ನ ಸಂಶಯದ ಮೇಲೆ ಪೊಲೀಸರು ಆಸರಕೇರಿಯ(Asarakeri) ಪಶುಪತಿ ದೇವಸ್ಥಾನದ ಹತ್ತಿರ  ವಶಕ್ಕೆ ಪಡೆದಿದ್ದರು. ಈತನ ಬಾಯಿಂದ ಯಾವುದೋ ಘಾಟು ವಾಸನೆ ಬರುತ್ತಿದ್ದರಿಂದ ಮಾದಕ ಸೇವನೆ ಮಾಡಿದ ಸಂಶಯದ ಮೇಲೆ ಪಿಎಸೈ ನವೀನ ನಾಯ್ಕ ವಶಕ್ಕೆ ಪಡೆದಿದ್ದರು.

ವಿಚಾರಿಸಿದಾಗ  ಗಾಂಜಾ ಸೇವನೆ ಮಾಡಿದ್ದನ್ನು ಒಪ್ಪಿಕೊಂಡಿದ್ದಾನೆ. ಹೀಗಾಗಿ ಕುಂದಾಪುರದ (Kundapur) ಖಾಸಗಿ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದೆ. ಭಟ್ಕಳ ಶಹರ ಠಾಣೆಯಲ್ಲಿ(Bhatkal Town Station) ಪ್ರಕರಣ ದಾಖಲಾಗಿದ್ದು,  ಮುಂದಿನ ಕ್ರಮಕೈಗೊಳ್ಳಲಾಗಿದೆ.

ಇದನ್ನು ಓದಿ : ತಿರುಪತಿಯಲ್ಲಿ ಕಾಲ್ತುಳಿತ. ಏಳು ಭಕ್ತರ ಸಾವು.

ಮಚ್ಚಿನಿಂದ ಮೂವರ ರುಂಡ ಚೆಂಡಾಡಿದ ಹೋಮ್ ಗಾರ್ಡ್. ಮಚ್ಚಿನೊಂದಿಗೆ ಠಾಣೆಗೆ ಬಂದ.

ಸೂಚನೆ ಧಿಕ್ಕರಿಸಿ ಸಮುದ್ರಕ್ಕೆ ಹಾರಿದ ಮೂವರ ದುರ್ಮರಣ. ಓರ್ವನ ರಕ್ಷಣೆ

ರಾಜ್ಯದಲ್ಲಿ ನಕ್ಷಲರ ಹೋರಾಟ ಅಂತ್ಯ. ಸಿಎಂ ಮುಂದೆ ಆರು ನಕ್ಷಲರು ಶರಣು.

ನಾನು ಯಾರೊಂದಿಗೂ ಓಡಿ ಹೋಗಿಲ್ಲ. ಪೊಲೀಸ್ ಠಾಣೆಯಲ್ಲಿ ಮಹಿಳೆ ಪ್ರತ್ಯಕ್ಷ.