ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಗೋವಾ (Goa): ಪ್ರಯಾಗರಾಜ್ ನಲ್ಲಿ(Prayagraj) ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ (Maha kumbhamela) ಗೋವಾದಿಂದ (Goa) ತೆರಳಲು ಸಬ್ಸಿಡಿ (subsidy) ದರದಲ್ಲಿ ಟಿಕೇಟ್ ನೀಡಲಾಗುವುದು ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ ಸಾವಂತ್(Pramod Savanth) ಹೇಳಿದ್ದಾರೆ.

ಗೋವಾದಿಂದ ಭಕ್ತರಿಗೆ ತೆರಳಲು ರಾಜ್ಯ ಸರ್ಕಾರ(State Government) ವಿಶೇಷ ರೈಲಿಗೆ(Special train) ಚಾಲನೆ ನೀಡಲಿದೆ. ಹೀಗಾಗಿ ನೇರವಾಗಿ ಪ್ರಯಾಗ್ ರಾಜ್ ಗೆ(Prayagaraj) ತೆರಳಲು ಅವಕಾಶ ಲಭಿಸಲಿದೆ. ಶೀಘ್ರದಲ್ಲಿ  ವಿಶೇಷ ರೈಲಿಗೆ ಚಾಲನೆ ನೀಡಲಾಗುವುದು ಎಂದಿದ್ದಾರೆ.

ಮುಂದಿನ ನಾಲ್ಕು ದಿನಗಳೊಳಗೆ ಈ ವಿಶೇಷ ರೈಲಿನ ವೇಳಾಪಟ್ಟಿಯನ್ನು ಬಿಡುಗಡೆಗೊಳಿಸಲಾಗುವುದು ಮತ್ತು ಬುಕಿಂಗ್ ಆರಂಭಿಸಲಾಗುತ್ತದೆ. ಪ್ರಯಾಗರಾಜ್ ನಲ್ಲಿ ವಿಶೇಷ ಸಂಯೋಜಕರನ್ನು ನೇಮಕ ಮಾಡಲಾಗುವುದು ಎಂದು ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಹೇಳಿದ್ದಾರೆ.

ಜನವರಿ 13 ರಂದು ಉತ್ತರಪ್ರದೇಶದ(Uttarpradesha) ಪ್ರಯಾಗರಾಜ್ ನಲ್ಲಿ  ಮಹಾಕುಂಭ ಮೇಳ(Maha kumbhamela) ಆರಂಭಗೊಂಡಿದ್ದು ಫೆಬ್ರುವರಿ 26 ರ ವರೆಗೆ ನಡೆಯಲಿದೆ. ಮಹಾ ಕುಂಭ ಮೇಳದಲ್ಲಿ ಗಂಗಾ(Ganga), ಯಮುನಾ(Yamuna), ಸರಸ್ವತಿ ನದಿಗಳ(Saraswati River) ಸಂಗಮದಲ್ಲಿ ಸ್ನಾನ ಮಾಡುವುದರಿಂದ ಮೋಕ್ಷ ಲಭಿಸುತ್ತದೆ ಎಂಬ ನಂಭಿಕೆಯಿದೆ. ಇದರಿಂದಾಗಿ ಮಹಾಕುಂಭಮೇಳದಲ್ಲಿ ಕೋಟ್ಯಂತರ ಭಕ್ತರು ಈ ಸಂಗಮ ತೀರಕ್ಕೆ ಆಗಮಿಸಿ ಪವಿತ್ರ ಸ್ನಾನ ಮಾಡುವ ಹಂಬಲ ವ್ಯಕ್ತಪಡಿಸುತ್ತಾರೆ. ಹೀಗಾಗಿ ಗೋವಾ ಸರ್ಕಾರ(Goa Government) ಭಕ್ತರಿಗೆ ಅನುಕೂಲ ಮಾಡಿಕೊಡಲು ಮುಂದಾಗಿದೆ.

ಇದನ್ನು ಓದಿ : ಪ್ರತಿಷ್ಟಿತ ಶಾಲೆಗೆ ಬಾಂಬ್ ಬೆದರಿಕೆ. ದೌಡಾಯಿಸಿದ ಪೊಲೀಸರು.

ಕುಂಭಮೇಳದಲ್ಲಿ ಭಾಗವಹಿಸಿದ ಭಟ್ಕಳದ ನೂರಾರು ಭಕ್ತರು.

ಬಿಗ್ ಬಾಸ್ ಕಿರೀಟ ತೊಟ್ಟು ಐತಿಹಾಸಿಕ ದಾಖಲೆ ಬರೆದ ಹನುಮಂತ.

ಕೂದಲೆಳೆ ಅಂತರದಲ್ಲಿ ಆರೋಪಿಗಳು ಎಸ್ಕೇಪ್. ಸುಳಿವು ನೀಡಿದವರಿಗೆ ಸಿಗಲಿದೆ 50ಸಾ.ರೂ. ಬಹುಮಾನ.