ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) : ಬೆಂಗಳೂರು (Bangaluru): ಮಾರಕ ಕ್ಯಾನ್ಸರ್ ಕಾಯಿಲೆ ಗೆದ್ದ ಸ್ಯಾಂಡಲ್ ವುಡ್ ನಟ ಶಿವರಾಜಕುಮಾರ್ (Shivarajakumar) ಅಮೆರಿಕಾದಿಂದ(America) ಸಂಪೂರ್ಣ ಗುಣಮುಖರಾಗಿ ತಾಯ್ನಾಡಿಗೆ ವಾಪಾಸ್ ಆಗಿದ್ದಾರೆ.
ಕಳೆದ ಒಂದು ತಿಂಗಳಿಂದ ಶಸ್ತ್ರ ಚಿಕಿತ್ಸೆಗಾಗಿ ಅಮೇರಿಕಾದಲ್ಲಿ ಇದ್ದ ಶಿವಣ್ಣ ಇಂದು ಬೆಳಿಗ್ಗೆ ಬೆಂಗಳೂರಿಗೆ(Bangaluru) ಆಗಮಿಸಿದ್ದಾರೆ. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯುತ್ತಿದ್ದಂತೆ ಚಿತ್ರರಂಗದ ಕಲಾವಿದರು (Cini Stars), ಅಭಿಮಾನಿಗಳು ಶಿವಣ್ಣನಿಗೆ ಅದ್ದೂರಿ ಸ್ವಾಗತ ಕೋರಿದರು.
ಬೆಂಗಳೂರಿನಲ್ಲಿರುವ ತಮ್ಮ ನಿವಾಸಕ್ಕೆ ಆಗಮಿಸಿದ ಹ್ಯಾಟ್ರಿಕ್ ಹೀರೊ ಶಿವರಾಜಕುಮಾರ್(Hyatric Hero Shivarajakumar) ಸುದ್ದಿಗೋಷ್ಠಿ ನಡೆಸಿದರು. ಕಿಂಗ್ ಈಸ್ ಬ್ಯಾಕ್(King Is Back) ಎಂದು ಮೊದಲ ಪ್ರತಿಕ್ರಿಯೆ ನೀಡಿದ ಅವರು, ಎಲ್ಲರ ಆಶೀರ್ವಾದ, ಧೈರ್ಯದಿಂದ ಚಿಕಿತ್ಸೆ ಪಡೆದು ಗುಣಮುಖನಾಗಿದ್ದೇನೆ. ವೈದ್ಯರು ಕೂಡ ನಿಮ್ಮ ಧೈರ್ಯ ಮೆಚ್ಚಬೇಕು ಎಂದಿದ್ದಾರೆ. ಅವರಿಗೂ ಸ್ವಲ್ಪ ಆತಂಕವಿತ್ತು. ಚಿಕಿತ್ಸೆ ಬಳಿಕ ಸಂಪೂರ್ಣ ಗುಣಮುಖನಾಗಿದ್ದು, ವೈದ್ಯರೂ ಅಚ್ಚರಿಪಟ್ಟಿದ್ದಾರೆ. ತುಂಬಾ ಜನರು ನನಗೆ ಧೈರ್ಯ ತುಂಬಿದ್ದರು. ಶಸ್ತ್ರ ಚಿಕಿತ್ಸೆ ಮಾಡಿದ ಮೂರು ದಿನ ಮಾತ್ರ ದ್ರವ ಆಹಾರ ತೆಗೆದುಕೊಳ್ಳುತ್ತಿದ್ದೆ ಇದೀಗ ಸಾಮಾನ್ಯ ಆಹಾರ ತೆಗೆದುಕೊಳ್ಳುತ್ತಿದ್ದೇನೆಂದು ಹೇಳಿದರು.
ಜೀವನದಲ್ಲಿ ಎಲ್ಲವೂ ತಾನಾಗಿಯೇ ಬರುತ್ತದೆ. ಅದು ಒಂದು ಪಾಠ. ಎದುರಿಸುತ್ತಾ ಹೋಗಬೇಕು. ನಾನು ಎಲ್ಲವನ್ನೂ ಧೈರ್ಯದಿಂದ ಎದುರಿಸುತ್ತಿದ್ದೇನೆ ಎಂದು ಅವರು ಹೇಳಿದರು. ಮುಂದಿನ ಸಿನೆಮಾ ಪ್ರಾಜೆಕ್ಟ್ (Cinema Project) ಬಗ್ಗೆ ತಯಾರಿ ನಡೆಸಬೇಕಾಗಿದೆ. ಹೀಗಾಗಿ ಪ್ಲಾನ್ ಮಾಡಬೇಕು ಎಂದರು.
ಇದನ್ನು ಓದಿ : ಹೊನ್ನಾವರದಲ್ಲಿ ಗೋ ಕಟುಕನ ಮೇಲೆ ಪೊಲೀಸ್ ಪೈರಿಂಗ್.
ಮಹಾಕುಂಭಮೇಳದಲ್ಲಿ ಬಾಲಿವುಡ್ ಮಾದಕ ನಟಿಗೆ ಸನ್ಯಾಸ ದೀಕ್ಷೆ.
ಎಲ್ಲರಿಗೂ ನಮಸ್ಕಾರ, ನಾನು ನಿಮ್ಮ ಪ್ರೀತಿಯ ಶಿವರಾಜಕುಮಾರ್
ಹಸುವಿನ ಹತ್ಯೆ ಪ್ರಕರಣದಲ್ಲಿ ಓರ್ವನ ಸೆರೆ. ಪ್ರಮುಖ ಆರೋಪಿಗಳಿಗಾಗಿ ಮುಂದುವರಿದ ತಲಾಶ್.