ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಕಾರವಾರ (Karwar) : ಹೊನ್ನಾವರ ತಾಲೂಕಿನ(Honnavar) ಸಾಲ್ಕೋಡು ಕೊಂಡಾಕುಳಿಯ(Salkodu Kondakuli) ಗೋ ವಧೆ ಪ್ರಕರಣಕ್ಕೆ ಸಂಬಂಧಿಸಿ ಜಿಲ್ಲಾ ಪೊಲೀಸ್ ಇಲಾಖೆ(District Police Department) ಪ್ರಮುಖ ಆರೋಪಿಗಳಿಬ್ಬರ ಸುಳಿವು ನೀಡಿದವರಿಗೆ ಬಹುಮಾನ(Prize) ಘೋಷಿಸಿದೆ.
ಈಗಾಗಲೇ ಪೊಲೀಸ್ ವಿಶೇಷ ತಂಡಗಳು(Police Special Team) ಹುಡುಕಾಟ ಚುರುಕುಗೊಳಿಸಿದ್ದು ಯಾವುದೇ ಕ್ಷಣದಲ್ಲಾದರೂ ಆರೋಪಿ ಸಿಕ್ಕಿ ಬೀಳಬಹುದು. ಪ್ರಮುಖ ಇಬ್ಬರು ಆರೋಪಿಗಳು ಕೂದಲೆಳೆ ಅಂತರದಲ್ಲಿ ತಪ್ಪಿಸಿಕೊಂಡಿದ್ದಾರೆಂದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ನಾರಾಯಣ್ ಎಂ ಹೇಳಿದ್ದಾರೆ. ಆರೋಪಿಗಳ ಬಗ್ಗೆ ಸುಳಿವು ಅಥವಾ ಹುಡುಕಿ ಕೊಟ್ಟವರಿಗೆ 50 ಸಾವಿರ ಬಹುಮಾನ ಘೋಷಣೆ ಮಾಡಿದ್ದಾರೆ
ಜನವರಿ 19ರಂದು ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕೊಂಡಕುಳಿ ಗ್ರಾಮದಲ್ಲಿ ನಡೆದಿದ್ದ ಗರ್ಭ ಧರಿಸಿದ್ದ ಹಸುವಿನ ಹತ್ಯೆ(Cow Kiilled) ಪ್ರಕರಣ ಬೆಳಕಿಗೆ ಬಂದಿತ್ತು. ರಾಜ್ಯದಲ್ಲಿಯೂ ಈ ಪ್ರಕರಣ ಸದ್ದು ಮಾಡಿದ್ದರಿಂದ ಜಿಲ್ಲಾ ಪೊಲೀಸ್ ಇಲಾಖೆ ಸವಾಲಾಗಿ ತೆಗೆದುಕೊಂಡು ಆರು ವಿಶೇಷ ತಂಡ ಮಾಡಲಾಗಿತ್ತು. ಈಗಾಗಲೇ ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನ ಬಂಧಿಸಲಾಗಿದೆ.
ವಲ್ಕಿಯ ತೌಪಿಕ್ ಹಾಗೂ ಕಾಸರಕೋಡಿನ ಪೈಜಾನ್ ಬಂಧಿಸಲಾಗಿದೆ. ಆರೋಪಿಗಳು ಕೊಂಡಕುಳಿ ಗ್ರಾಮದಲ್ಲಿ ಮೇಯಲು ಬಂಧಿದ್ದ ಹಸುವನ್ನ ಕಡಿದು ಭಟ್ಕಳದಲ್ಲಿ ಮದುವೆ(Bhatkal Marriage) ಮನೆಗೆ ಮಾರಾಟ ಮಾಡಿದ್ದರು. ಅವರಿಂದ 7500ರೂ. ಹಣವನ್ನ ಜಿಪೇ(GPay) ಮೂಲಕ ಪಡೆದಿದ್ದರು
ಪ್ರಕರಣದ ತನಿಖೆ ಸಂದರ್ಭದಲ್ಲಿ ಸುಮಾರು ಸಾವಿರ ಜನರ ಚಲನವಲನ ಪರಿಶೀಲಿಸಿದ್ದು 450 ಜನರನ್ನ ತನಿಖೆಗೆ ಒಳಪಡಿಸಲಾಗಿತ್ತು. ಶನಿವಾರ ಫೈಜಾನ್ ಬಂಧಿಸಿದ ಬಳಿಕ ಪಂಚನಾಮೆ ಸಂದರ್ಭದಲ್ಲಿ ಆತ ಕೃತ್ಯಕ್ಕೆ ಬಳಸಿದ್ದ ಮಚ್ಚನ್ನ ವಶಕ್ಕೆ ಪಡೆಯಲು ಹೋದಾಗ ಪೊಲೀಸರ ಮೇಲೆ ಬೀಸಿದ್ದರಿಂದ ಆತ್ಮರಕ್ಷಣೆಗಾಗಿ ಪೊಲೀಸರು ಆರೋಪಿ ಕಾಲಿಗೆ ಗುಂಡು ಹಾರಿಸಿದ್ದಾರೆಂದು(Firing) ಎಸ್ಪಿ ಎಂ ನಾರಾಯಣ್ ಮಾಹಿತಿ ನೀಡಿದ್ದಾರೆ.
ಪ್ರಕರಣದಲ್ಲಿ ಹೊನ್ನಾವರ ತಾಲೂಕಿನ ವಾಸಿಂ ಹಾಗೂ ಮುಜಾಮಿಲ್ ಎಂಬ ಇಬ್ಬರು ಪ್ರಮುಖ ಆರೋಪಿಗಳಿದ್ದಾರೆ. ಇಬ್ಬರು ಪರಾರಿಯಾಗಿದ್ದಾರೆ. ತಲೆಮರೆಸಿಕೊಂಡ ಆರೋಪಿಗಳ ಬಂಧನಕ್ಕೆ ಜಾಡು ಬೀಸಲಾಗಿದೆ. ಈಗಾಗಲೇ ಭಟ್ಕಳ ಮತ್ತು ಹೊನ್ನಾವರ ಜಮಾತಾಗಳಿಗೆ ಮಾಹಿತಿ ನೀಡಿದ್ದು ಸಹಕರಿಸುತ್ತಿದ್ದಾರೆ. ಇನ್ನೂ ಆರೋಪಿಗಳ ಬಗ್ಗೆ ಮಾಹಿತಿ ನೀಡಿದರೆ, ಅಥವಾ ಆರೋಪಿ ಹುಡುಕಿಕೊಟ್ಟಲ್ಲಿ 50 ಸಾವಿರ ಬಹುಮಾನ ಕೊಡುವುದಾಗಿ ಘೋಷಣೆ ಮಾಡಿದ್ದಾರೆ.
ಹೊನ್ನಾವರ ಗೋ ಪ್ರಕರಣದಲ್ಲಿ ಜಾತಿ ಧರ್ಮ ನೋಡದೆ ತಪ್ಪು ಮಾಡಿದವರ ಮೇಲೆ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ್ ವೈದ್ಯ(Mankal Vaidya) ಪ್ರತಿಕ್ರಿಯಿಸಿದ್ದಾರೆ.
ಇದನ್ನು ಓದಿ : ಕಿಂಗ್ ಇಸ್ ಬ್ಯಾಕ್. ಬೆಂಗಳೂರಲ್ಲಿ ನಸುನಗುತ್ತಾ ಮಾತನಾಡಿದ ಶಿವಣ್ಣ.
ಹೊನ್ನಾವರದಲ್ಲಿ ಗೋ ಕಟುಕನ ಮೇಲೆ ಪೊಲೀಸ್ ಪೈರಿಂಗ್.
ಮಹಾಕುಂಭಮೇಳದಲ್ಲಿ ಬಾಲಿವುಡ್ ಮಾದಕ ನಟಿಗೆ ಸನ್ಯಾಸ ದೀಕ್ಷೆ.
ಹಸುವಿನ ಹತ್ಯೆ ಪ್ರಕರಣದಲ್ಲಿ ಓರ್ವನ ಸೆರೆ. ಪ್ರಮುಖ ಆರೋಪಿಗಳಿಗಾಗಿ ಮುಂದುವರಿದ ತಲಾಶ್.