ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ದಾಂಡೇಲಿ(Dandeli) : ಐವತ್ತು  ವರ್ಷಗಳ ಹಿಂದೆ ನಿರ್ಮಿಸಿದ ದಾಂಡೇಲಿ ಬಸ್ ನಿಲ್ದಾಣವನ್ನ ದುರಸ್ತಿಗೊಳಿಸುವುದನ್ನ ಬಿಟ್ಟು ಹೊಸ ನಿಲ್ದಾಣವನ್ನಾಗಿ ಮಾಡಬೇಕೆಂದು ದಾಂಡೇಲಿ ಸಮಗ್ರ ಅಭಿವೃದ್ಧಿ ಹೋರಾಟ ಸಮಿತಿ ಆಗ್ರಹಿಸಿದೆ.

  ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ  ಬಸ್ ನಿಲ್ದಾಣವನ್ನ  ಕಳೆದ ಕಳೆದ ಹಲವು ವರ್ಷಗಳಿಂದ ರಿಪೇರಿ ಮಾಡಿಲ್ಲ. ಈಗ ಮೇಲ್ಭಾಗದಲ್ಲಿ ಜೀಐ ಸಿಟ್ ಹಾಕಿ ರಿಪೇರಿಗೊಳಿಸುತ್ತಿರುವುದನ್ನು ಸಮಿತಿ ಖಂಡಿಸಿದೆ. ಕೂಡಲೇ ಕಾಮಗಾರಿ ನಿಲ್ಲಿಸಬೇಕೆಂದು ಒತ್ತಾಯಿಸಿದೆ.  ಬಸ್ ಸ್ಟ್ಯಾಂಡಿನ  ಅನೇಕ  ಕಂಬಗಳಲ್ಲಿ  ಬಿರುಕು ಕಾಣಿಸುತ್ತದೆ ಅದೇ ರೀತಿಯಲ್ಲಿ ಅನೇಕ ಬಾರಿ ಸಿಮೆಂಟ್ ಉದುರಿ ಬಿದ್ದಿದೆ. ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದಾಗ ಮೇಲೆ ಸಿಮೆಂಟ್ ಪ್ಯಾಚ್ ಹೊಡೆಯಲಾಗಿದೆ.

ಜಿಲ್ಲೆಯ ಎಲ್ಲಾ ತಾಲೂಕು ಗಳಲ್ಲಿ ಹೊಸ ಬಸ್ ನಿಲ್ದಾಣಗಳನ್ನ ನಿರ್ಮಾಣ ಮಾಡಿದ್ದಾರೆ. ಆದರೆ ದಾಂಡೇಲಿ ತಾಲೂಕಿಗೆ ಮಾತ್ರ ಮಲತಾಯಿ ಧೋರಣೆ ಆಗುತ್ತಿದೆ ಯಾಕೆ ? ಸಾರ್ವಜನಿಕರ ಪ್ರಶ್ನೆಯಾಗಿದೆ. ಈ ವಿಷಯ ದ ಬಗ್ಗೆ  ತಾಲೂಕಿನ ವಿವಿಧ ಸಂಘಟನೆಗ ಳು ಹಲವಾರು ಬಾರಿ ಹೊಸ ಬಸ್ ನಿಲ್ದಾಣ ನಿರ್ಮಾಣ ಮಾಡಲು ಮತ್ತು ಹೆಚ್ಚಿನ ಬಸ್ಸಿನ ಸಂಚಾರದ ಬಗ್ಗೆ ಮನ ವಿ ಸಲ್ಲಿಸಿದರೂ ಯಾವುದೇ ಕ್ರಮವಾಗಿಲ್ಲ.   ಸಾರಿಗೆ ಸಂಸ್ಥೆ ಅಧಿಕಾರಿಗಳು ಸಾರ್ವಜನಿಕರ ಬೇಡಿಕೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ಸಮಿತಿ ಆರೋಪಿಸಿದೆ.

ಈ ಹಿಂದೆ ದಾಂಡೇಲಿಯಿಂದ ರಾತ್ರಿ ಸಮಯದಲ್ಲಿ ಬೆoಗಳೂರು, ಮಂಗಳುರು, ಗೊವಾ. ಮುಂಬೈಗಳಿಗೆ ಬಸ್ಗಳು ಸಂಚಾರ ಮಾಡುತ್ತಿದ್ದವು. ಹಂತ ಹಂತವಾಗಿ ಬಸ್ ಸಂಚಾರ ನಿಲ್ಲಿಸಲಾಯಿತು.  ಈ ವಿಷಯ ಬಗ್ಗೆ ವಿವಿದ ಸಂಘಟನೆಗಳು ಹಲವಾರು ಬಾರಿ ಮನವಿ ಕೊಟ್ಟರು  ಅಧಿಕಾರಿಗಳು ಪ್ರಯಾ ಣಿಕರ ಮಾತಿಗೆ ಕಿಮ್ಮತ್ತು ನೀಡಿಲ್ಲ.   ಸಾರಿಗೆ ಸಂಸ್ಥೆ ಅಧಿಕಾ ರಿಗಳು ಜೊತೆಗೆ ಖಾಸಗಿ ಬಸ್ ಗಳ ಮಾಲಿಕರ ಜೊತೆ ಹೊಂದಾಣಿಕೆ ಮಾಡಿಕೊಂಡು ಬೆಂಗಳೂರು ರಾತ್ರಿ ಸಮಯ ದಲ್ಲಿ ಹೋಗುವ ಬಸ್ ಸಂಪೂರ್ಣವಾಗಿ ನಿಲ್ಲಿ ಸಲಾಗಿದೆ ಎಂದು ಸಮಿತಿ ಮುಖಂಡರು ಆರೋಪಿಸಿದ್ದಾರೆ.

ಹೀಗಾಗಿ ದಾಂಡೇಲಿಯಿಂದ ರಾತ್ರಿ ಸಮಯದಲ್ಲಿ ಬೆಂಗಳೂರು, ಮಂಗಳೂರು, ಮುಂಬೈ ಮತ್ತು ಗೋವಾ ಬಸ್ಸುಗಳನ್ನು ಪ್ರಾರಂಭಿಸಬೇಕು. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ವಿವಿಧ ಸಂಘಟನೆಗಳ ಜೊತೆಗೆ ಸಭೆ ನಡೆಸಿ  ಸಮಸ್ಯೆ ಬಗೆಹರಿಸಬೇಕು. ಇಲ್ಲದಿದ್ದಲ್ಲಿ ಅನಿವಾರ್ಯವಾಗಿ ಪ್ರತಿಭಟನೆ ಮಾಡ ಬೇಕಾಗುತ್ತದೆ ಎಂದು ದಾಂಡೇಲಿ ಸಮಗ್ರ ಅಭಿವೃದ್ಧಿ ಹೋರಾಟ ಸಮಿತಿ ಅಧ್ಯಕ್ಷ ಅಕ್ರಂ ಖಾನ್,  ಪದಾಧಿಕಾರಿಗಳಾದ ಮಹಮ್ಮದ್ ಗೌಸ್ ಬೆಟಿಗೇರಿ. ದತ್ತಾತ್ರಯ ಹೆಗಡೆ. ಚಂದಪ್ಪ ಹಡಪದ. ಹಾಗೂ ಇನ್ನೂ ಅನೇಕ ಸಮಿತಿಯ ಅನೇಕ ಸದಸ್ಯರು ಉಪಸ್ಥಿತರಿದ್ದರು.

ಇದನ್ನು ಓದಿ : ಮಲ್ಪೆ ಬಂದರಿನಲ್ಲಿ ಮಹಿಳೆ ಕಟ್ಟಿ ಹಾಕಿ ಹಲ್ಲೆ ಪ್ರಕರಣ. ಮೂವರ ಬಂಧನ

ಯುಗಾದಿ ಹಬ್ಬಕ್ಕೆ ಬೆಂಗಳೂರು – ಮುರುಡೇಶ್ವರ ರೈಲು ಕಾರವಾರಕ್ಕೆ ವಿಸ್ತರಣೆ.