ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ಕಾರವಾರ(Karwar) :  ನಾಳೆ  ದಿನಾಂಕ 22ರಂದು ಉತ್ತರಕನ್ನಡ ಜಿಲ್ಲೆಯ ಕೆಲವೆಡೆ ವಿದ್ಯುತ್ ವ್ಯತ್ಯಯವಾಗುವ ಬಗ್ಗೆ ಹೆಸ್ಕಾಂ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹೊನ್ನಾವರ (Honnavar) ವಿಭಾಗ ವ್ಯಾಪ್ತಿಯ ಶಿರಸಿಯಲ್ಲಿ (Sirsi) ತುರ್ತಾಗಿ ಬ್ಯಾಟರಿ ಚಾರ್ಜರ್ (Battery Charger) ಹಾಗೂ ಬ್ಯಾಟರಿ ಸೆಟ್ ಬದಲಾವಣೆ ಕಾರ್ಯ ಇರುವುದರಿಂದ ಮಾ.22ರಂದು ಬೆಳಗ್ಗೆ 11 ಗಂಟೆಯಿಂದ 12 ಗಂಟೆಯವರೆಗೆ ಶಿರಸಿ- ಕುಮಟಾ (Kumta) 110 ಕೆವಿ.ಮಾರ್ಗಗಳಲ್ಲಿ ವಿದ್ಯುತ್ ಸರಬರಾಜು ಇರುವುದಿಲ್ಲ.

ಆದ ಕಾರಣ, ಕಾರವಾರದ(Karwar) 220 ಕೆವಿ ವಿದ್ಯುತ್ ಸ್ವೀಕರಣಾ ಕೇಂದ್ರ ವಿದ್ಯುತ್ ಸರಬರಾಜು ಪಡೆಯಲಾಗುವುದು. ಈ ಸಮಯದಲ್ಲಿ 110 ಕೆವಿ ಕಾರವಾರ-ಕುಮಟಾ(Karwar-Kumta) ಮಾರ್ಗವು ಓವರ್ ಲೋಡ್ ಆಗುವ ಕಾರಣ ಕುಮಟಾ, ಹೊನ್ನಾವರ(Honnavar)  ಹಾಗೂ ಭಟ್ಕಳ (Bhatkal) ತಾಲೂಕಿನ ಎಲ್ಲಾ ಗ್ರಾಮೀಣ ಭಾಗಗಳಲ್ಲಿ ಮಾ22ರಂದು ಶನಿವಾರ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ (power shutdown) ಎಂದು ಹೆಸ್ಕಾಂ(Hescom) ಹೊನ್ನಾವರ ಕಾರ್ಯ ಮತ್ತು ಪಾಲನಾ ವಿಭಾಗದ ಕಾರ್ಯನಿರ್ವಾಹಕ ಇಂಜಿನೀಯರ(ವಿ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕುಮಟಾ ಉಪವಿಭಾಗದ(Kumta Subdivision)  ಗೋಕರ್ಣ (Gokarna) ಶಾಖೆಯ ಮಾದನಗೇರಿ(Madanageri), ಬಂಕಿಕೊಡ್ಲ(Bankikodla), ಗಂಗಾವಳಿ(Gangavali), ತದಡಿ(Tadri), ಓಂ ಬೀಚ್(Om Beach) ಮತ್ತು ಮರಾಕಲ್ ಶಾಖೆಯ ಮೂರೂರು -ಕಲ್ಲಬ್ಬೆ(Murooru-Kallabbe) ಸಂತೆಗುಳಿ, ಉಳ್ಳೂರಮಠ, ಹೊದ್ಕೆ ಶಿರೂರು ಹಾಗೂ ಮಿರ್ಜಾನ್(Mirjan), ಕತಗಾಲ(Katagala), ಧಾರೇಶ್ವರ, ವಾಲ್ಗಳ್ಳಿ, ಬಾಡ, ಹೆಗಡೆ(Hegade) ಫೀಡರಿನ ಭಾಗಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಹೆಸ್ಕಾಂನ ಕುಮಟಾ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ(ವಿ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನು ಓದಿ : ದಾಂಡೇಲಿಯಲ್ಲಿ ಹೊಸ ಬಸ್ ನಿಲ್ದಾಣ ಮತ್ತು ಬೆಂಗಳೂರ್ ಬಸ್ ಸಂಚಾರಕ್ಕೆ  ಹೋರಾಟ ಸಮಿತಿ ಆಗ್ರಹ.

ಮಲ್ಪೆ ಬಂದರಿನಲ್ಲಿ ಮಹಿಳೆ ಕಟ್ಟಿ ಹಾಕಿ ಹಲ್ಲೆ ಪ್ರಕರಣ. ಮೂವರ ಬಂಧನ