ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ಭಟ್ಕಳ (Bhatkal) : ತಾಲೂಕಿನ ಶಿರಾಲಿ ಚೆಕ್ ಪೋಸ್ಟ್ ಬಳಿ ಗ್ರಾಮೀಣ ಠಾಣೆಯ ಪೊಲೀಸರು ಮತ್ತೊಂದು ಕಾರ್ಯಾಚರಣೆ ನಡೆಸಿದ್ದಾರೆ.

ಅಕ್ರಮವಾಗಿ ಲಾರಿಯಲ್ಲಿ ಸಾಗಾಟವಾಗುತ್ತಿದ್ದ 15 ಕೋಣಗಳನ್ನು(Cattles) ಪೊಲೀಸರು ರಕ್ಷಿಸಿದ್ದಾರೆ. ಈ ವೇಳೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.

ಹಾವೇರಿ(Haveri) ಜಿಲ್ಲೆಯ ಅಕ್ಕಿಆಲೂರು(Akkiaalooru)  ನಿವಾಸಿಗಳಾದ ಜೈನುಲ್ಲಾ ಚಮನ್ ಶಾಬ್  ಹಾಗೂ ಇಮಾಮ್ ಹುಸೇನ್ ಮೌಲಾಲಿ ಬಂಧಿತರು.  ಯಾವುದೇ ಪರವಾನಿಗೆ ಇಲ್ಲದೆ ಕೋಣಗಳ ಸಾಗಾಟ  ಮಾಡುವ ವೇಳೆ ವಾಹನವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

ವಾಹನದಲ್ಲಿದ್ದ  ಒಟ್ಟು 17 ಕೋಣಗಳಲ್ಲಿ 2 ಕೋಣಗಳು ಸಾವನ್ನಪ್ಪಿದ್ದು ಇನ್ನುಳಿದ 15ಕೋಣಗಳನ್ನು ಬೇರೆ ವಾಹನಗಳ ಮೂಲಕ ರಕ್ಷಿಸಲಾಗಿದೆ.

ಪಿಎಸೈ ರನ್ನ ಗೌಡ ಪಾಟೀಲ ಮತ್ತು ಭರ್ಮಪ್ಪ ಬೆಳಗಲಿ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸಿಬ್ಬಂದಿಗಳಾದ ವಿನೋದಕುಮಾರ ರೆಡ್ಡಿ, ಮಂಜು ಖಾರ್ವಿ, ವೀರಣ್ಣ ಬಳ್ಳಾರಿ, ಕಿರಣ ತಿಲಗಂಜಿ, ಚಾಲಕ ದೇವರಾಜ ಮೊಗೇರ ಇದ್ದರು. ಈ ವೇಳೆ ಹಿಂದು ಜಾಗರಣಾ ವೇದಿಕೆ ಅಧ್ಯಕ್ಷ ಜಯಂತ ನಾಯ್ಕ ಸಹ ಸಂಚಾಲಕ ಕುಮಾರ ನಾಯ್ಕ ಹನುಮಾನನಗರ, ಬಿಜೆಪಿ  ಒಬಿಸಿ ಮೋರ್ಚಾ ಜಿಲ್ಲಾ ಕಾರ್ಯದರ್ಶಿ ರಾಘವೇಂದ್ರ ನಾಯ್ಕ ಮೂಡಭಟ್ಕಳ ಹಾಗೂ  ಕೆಲ  ಯುವಕರು ಕೋಣಗಳ ಆರೈಕೆಗೆ ಪೊಲೀಸರಿಗೆ ಸಹಕರಿಸಿದ್ದಾರೆ.