ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಮಧ್ಯಪ್ರದೇಶ(Madhyapradesh): ಸಹೋದರರ ಜಗಳ ವಿಕೋಪಕ್ಕೆ ಹೋಗಿ ತಂದೆ ಸತ್ತಾಗ ಅಂತ್ಯಕ್ರಿಯೆ (Crimition) ನಡೆಸಲು ವಿಚಿತ್ರ ಬೇಡಿಕೆ ಇಟ್ಟ ಘಟನೆ ಮಧ್ಯಪ್ರದೇಶದ (Madhyapradesh) ಟಿಕಮ್ ಗಢದಲ್ಲಿ ನಡೆದಿದೆ.
ಪೊಲೀಸರು ಮಧ್ಯ ಪ್ರವೇಶದಿಂದಾಗಿ ಪ್ರಕರಣ ಸುಖಾಂತ್ಯವಾಗಿದೆ. ಲಿಧೋರತಾಲ್ ಗ್ರಾಮದಲ್ಲಿ ಧ್ಯಾನಿ ಸಿಂಗ್ ಘೋಷ್ (84) ಎಂಬವರು ಅನಾರೋಗ್ಯದಿಂದ ರವಿವಾರ ನಿಧನರಾಗಿದ್ದರು. ಈ ಮೊದಲು ಅವರು ತಮ್ಮ ಕಿರಿಯ ಪುತ್ರ ದೇಶ್ ರಾಜ್ ನೊಂದಿಗೆ ವಾಸಿಸುತ್ತಿದ್ದರು. ಗ್ರಾಮದಿಂದ ಹೊರಗೆ ತಂದೆ ಬಿಟ್ಟು ವಾಸಿಸುತ್ತಿರುವ ಹಿರಿಯ ಪುತ್ರ ಕಿಶನ್ ಗೆ ಮಾಹಿತಿ ನೀಡಲಾಗಿತ್ತು. ಸ್ಥಳಕ್ಕೆ ಹಿರಿಯ ಪುತ್ರ ನಾನು ನನ್ನ ತಂದೆಯ ಅಂತ್ಯಕ್ರಿಯೆ ನೆರವೇರಿಸುತ್ತೇನೆ ಎಂದಿದ್ದ. ಕಿರಿಯ ಪುತ್ರ ಇದಕ್ಕೆ ನಿರಾಕರಿಸಿದಾಗ ಗದ್ದಲದ ವಾತಾವರಣ ನಿರ್ಮಾಣವಾಯಿತು.
ಮದ್ಯದ ಅಮಲಿನಲ್ಲಿದ್ದ ಕಿಶನ್, ತನ್ನ ತಂದೆಯ ಮೃತದೇಹವನ್ನು ಎರಡು ಭಾಗಗಳಾಗಿ ತುಂಡರಿಸಿ, ಅವನ್ನು ತಮ್ಮಿಬ್ಬರ ನಡುವೆ ಹಂಚಬೇಕು ಎಂದು ಪಟ್ಟು ಹಿಡಿದು ಕುಳಿತ. ಇದರಿಂದ ಗ್ರಾಮಸ್ಥರಿಗೆ ತಲೆನೋವಾಗಿದ್ದರಿಂದ ಪೊಲೀಸರಿಗೆ ತಿಳಿಸಲಾಯಿತು.
ಆಗ ಸ್ಥಳಕ್ಕೆ ಧಾವಿಸಿದ ಪೊಲೀಸರು, ಕಿಶನ್ ಮನವೊಲಿಸುವಲ್ಲಿ ಯಶಸ್ವಿಯಾದರು. ಬಳಿಕ ಆತ ವಾಪಾಸ್ ಹೋಗಿದ್ದಾನೆ. ನಂತರ ಕಿರಿಯ ಪುತ್ರ ದೇಶ್ ರಾಜ್ ವಿಧಿ ವಿಧಾನಗಳೊಂದಿಗೆ ತನ್ನ ತಂದೆಯ ಅಂತ್ಯಕ್ರಿಯೆಯನ್ನು ನೆರವೇರಿಸಿದ್ದಾನೆ ಎಂದು ತಿಳಿದುಬಂದಿದೆ.
ಇದನ್ನು ಓದಿ : ಭಟ್ಕಳದಲ್ಲಿ ಬೈಕ್ ಡಿಕ್ಕಿ ಹೊಡೆದು ಪಾದಚಾರಿ ಸಾವು.
ಪತ್ರಕರ್ತ ಸಂದೀಪ್ ಸಾಗರ್ ಗೆ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪ್ರಧಾನ
ಗೋ ಕಳ್ಳರಿಗೆ ಸರ್ಕಲ್ ನಲ್ಲಿ ನಿಲ್ಲಿಸಿ ಗುಂಡು ಹಾಕಿ. ಸಚಿವ ಮಾಂಕಾಳ್ ವೈದ್ಯ ಗುಡುಗು.
ತಮಗಿಷ್ಟದ ಸ್ಥಳಕ್ಕೆ ಭೇಟಿ ನೀಡುತ್ತಿರುವ ನಟ ಶಿವರಾಜಕುಮಾರ್. ಯಾಣಕ್ಕೆ ಭೇಟಿ