ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಕಾರವಾರ (Karwar) : ನಗರದ ಖುರ್ಸಾವಾಡದಲ್ಲಿ(Khursawada) ಎಎಸ್‌ಐ (ASI) ಮನೆಗೇ ಕಳ್ಳರು ಕನ್ನ ಹಾಕಿ ನಗದು ಬಂಗಾರ ದೋಚಿದ ಘಟನೆ ನಡೆದಿದೆ.

ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಕಚೇರಿಯ ಡಿಸಿಆರ್‌ಬಿ(DCRB) ವಿಭಾಗದಲ್ಲಿ ಎಎಸ್‌ಐ ಆಗಿರುವ ಸ್ಮಿತಾ ಪಾವಸ್ಕರ್ ಅವರ ಮನೆಯಲ್ಲಿ ಯಾರೂ ಇಲ್ಲದಾಗ ನುಗ್ಗಿದ ಕಳ್ಳರು ಬಂಗಾರ ದೋಚಿದ್ದಾರೆ.

ಮನೆಯ ಬಾಗಿಲಿಗೆ ಹಾಕಿದ್ದ ಇಂಟರ್ ಲಾಕ್ ಮುರಿದು, ಒಳ ಪ್ರವೇಶಿಸಿ ಬೆಡ್ ರೂಂ ನಲ್ಲಿರುವ ಟ್ರೇಜರಿ ಲಾಕರನ್ನು ತೆಗೆದು ಲಾಕರನಲ್ಲಿದ್ದ 357 ಗ್ರಾಂ ಬಂಗಾರದ ಆಭರಣಗಳ ಮೌಲ್ಯ 18,85,000/- ರೂ ಮತ್ತು 72 ಗ್ರಾಂ ತೂಕದ ಬೆಳ್ಳಿ ಸಾಮಾನುಗಳು ಹಾಗೂ 10,000/- ರೂ ನಗದು ಹಣವನ್ನು ಕಳ್ಳತನ ಮಾಡಿ ಪರಾರಿಯಾಗಿದ್ದಾರೆ.

ಕಾರವಾರ ಶಹರ ಠಾಣೆಯಲ್ಲಿ(Karwar Town Station) ಪ್ರಕರಣ ದಾಖಲಾಗಿದ್ದು ಎಸ್‌ಪಿ ಎಂ.ನಾರಾಯಣ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಸಿಸಿಟಿವಿಯಲ್ಲಿ ದಾಖಲಾದ ಶಂಕಿತರ ಫೋಟೋ ಬಿಡುಗಡೆ ಮಾಡಲಾಗಿದೆ.

ಇದನ್ನು ಓದಿ : ತಂದೆಯ ಅಂತ್ಯಕ್ರಿಯೆಗೆ ಮೃತದೇಹ ಇಬ್ಬಾಗಿಸಿ ಕೊಡಿ. ವಿಚಿತ್ರ ಬೇಡಿಕೆಯಿಟ್ಟ ಪುತ್ರ.

ಪತ್ರಕರ್ತ ಸಂದೀಪ್ ಸಾಗರ್ ಗೆ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪ್ರಧಾನ

ಗೋ ಕಳ್ಳರಿಗೆ ಸರ್ಕಲ್ ನಲ್ಲಿ ನಿಲ್ಲಿಸಿ ಗುಂಡು ಹಾಕಿ. ಸಚಿವ ಮಾಂಕಾಳ್ ವೈದ್ಯ ಗುಡುಗು.

ತಮಗಿಷ್ಟದ ಸ್ಥಳಕ್ಕೆ ಭೇಟಿ ನೀಡುತ್ತಿರುವ ನಟ ಶಿವರಾಜಕುಮಾರ್. ಯಾಣಕ್ಕೆ ಭೇಟಿ