ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಭಟ್ಕಳ(Bhatkal): ಮಹಾನ್ ಮಾನವತವಾದಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ಅವರ 134 ನೇ ಜನ್ಮ ದಿನಾಚರಣೆಯನ್ನು ಜೈ ಭೀಮ್ ಯುವ ಸೇನೆ ಕರಿಕಲ್ ವತಿಯಿಂದ ಅತ್ಯಂತ ವಿಜ್ರಂಭಣೆಯಿಂದ ಆಚರಿಸಲಾಯಿತು.
ಸೋಮವಾರ ಭಟ್ಕಳ ತಾಲೂಕಿನ ಕರಿಕಲ್ ಸರ್ಕಲ್ ನಲ್ಲಿ ಸೇರಿದ ಜೈ ಭೀಮ್ ಯುವ ಸೇನೆಯ ಕಾರ್ಯಕರ್ತರು ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು. ಬಳಿಕ ಕರಿಕಲ್ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಂಬೇಡ್ಕರ್ ಅವರಿಗೆ ನಮನ ಸಲ್ಲಿಸಲಾಯಿತು. ತದನಂತರ ಮೊಗೇರ ಸಮಾಜದ ಜಾಗದಲ್ಲಿ ಅಂಬೇಡ್ಕರ್ ಧ್ವಜಾರೋಹಣವನ್ನು ನೆರವೇರಿಸುವ ಮೂಲಕ ಡಾ ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಗೌರವ ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ಗಣೇಶ್ ಮೊಗೇರ, ಆನಂದ್ ಮೊಗೇರ್, ವಸಂತ ಮೊಗೇರ, ಯಶೋಧರ್ ಮೊಗೇರ, ಲಕ್ಷ್ಮೀಶ ಮೊಗೇರ, ಜನಾರ್ದನ್ ಮೊಗೇರ, ತಿಮ್ಮಪ್ಪ ಮೊಗೇರ, ರಮೇಶ್ ಮೊಗೇರ ,ನಟರಾಜ್ ಮೊಗೇರ, ನಾಗರಾಜ ಮೊಗೇರ ಮುಂತಾದವರು ಭಾಗವಹಿಸಿದ್ದರು.
ಪ್ರತಿ ವರ್ಷವೂ ಕೂಡ ಜೈ ಭೀಮ್ ಯುವ ಸೇನೆಯ ಕಾರ್ಯಕರ್ತರು ಅಂಬೇಡ್ಕರ್ ಜಯಂತಿಯನ್ನ ಅದ್ದೂರಿಯಿಂದ ವಿಭಿನ್ನವಾಗಿ ಆಚರಿಸುತ್ತಾ ಬರುತ್ತಿದ್ದಾರೆ.
ಇದನ್ನು ಓದಿ : ಮನೆ ಕಳ್ಳತನ ಆರೋಪ. ಯುವಕನಿಗೆ ಧರ್ಮದೇಟು.
ಕನ್ನಡದ ಪ್ರಖ್ಯಾತ ಹಾಸ್ಯ ನಟ ಸಾವು.
ಬಾಲಕಿ ಕೊಂದ ಪಾತಾಕಿ ಪೊಲೀಸರ ಗುಂಡೇಟಿಗೆ ಬಲಿ.
ಬೈಕ್ ತೆಗೆಯುತ್ತಿದ್ದಾಗ ಬಂದ ಜವರಾಯ.
r