ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) :  ದೆಹಲಿಯ ಶ್ರದ್ಧಾ ವಾಕರ್(ದೆಹಲಿ shraddha waker)  ಕೊಲೆ ಪ್ರಕರಣವನ್ನು ನೆನಪಿಸುವಂತಹ ಘಟನೆಯೊಂದು ಜಾರ್ಖಂಡ್‌ನ (Jarkhand) ಖಂಟಿ ಜಿಲ್ಲೆಯಲ್ಲಿ ನಡೆದಿದೆ.

ತನ್ನ ಜೀವನ ಸಂಗಾತಿಯನ್ನು ಕೊಂದು ದೇಹವನ್ನು 50 ತುಂಡುಗಳನ್ನು ಮಾಡಿದ್ದ ಆರೋಪಿಯೊಬ್ಬನನ್ನ  ಬಂಧಿಸಲಾಗಿದೆ. 25 ವರ್ಷದ ನರೇಶ್ ಭೇಂಗ್ರಾ ಬಂಧಿತ ಆರೋಪಿ.

ಬೇರೆಯೊಬ್ಬ ಮಹಿಳೆಯೊಂದಿಗೆ ಮದುವೆಯ ವಿಚಾರದಲ್ಲಿ ಜಗಳವಾಡಿದ ನಂತರ ತನ್ನ ಜೀವನ ಸಂಗಾತಿಯನ್ನು(ಲೈಫ್ Partner) ಕೊಂದು ಆಕೆಯ ದೇಹವನ್ನು 50 ತುಂಡುಗಳಾಗಿ ಕತ್ತರಿಸಿದ ಆರೋಪದ ಮೇಲೆ ಬಂಧನ ಮಾಡಲಾಗಿದೆ.

ಸುಮಾರು ಎರಡು ವಾರಗಳ ಹಿಂದೆ ಸಂಭವಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ನವೆಂಬರ್ 24 ರಂದು ಅರಣ್ಯ ಪ್ರದೇಶದಲ್ಲಿ (Forest Area) ಮಾನವ ಅವಶೇಷಗಳೊಂದಿಗೆ ಬೀದಿ ನಾಯಿ ಗುರುತಿಸಿದ(Dog Identified) ಬಳಿಕ ಪ್ರಕರಣ ಬೆಳಕಿಗೆ ಬಂದಿದೆ. 24 ವರ್ಷದ ಗಂಗಿ ಕುಮಾರಿ ಹತ್ಯೆಗೀಡಾದ ಯುವತಿ. ಜೋರ್ಡಾಗ್ ಗ್ರಾಮದ ನಿವಾಸಿಗಳಾಗಿದ್ದರೂ  ತಮಿಳುನಾಡಿನಲ್ಲಿ (Tamilunadu) ವಾಸಿಸಿ ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.

ಕಳೆದ ಕೆಲ ವರ್ಷಗಳಿಂದ ಇವರಿಬ್ಬರು ಲಿವ್ ಇನ್ ರಿಲೇಶನ್ ಶಿಪ್ (leave in relationship) ನಲ್ಲಿದ್ದರು, ಆದರೆ ನರೇಶ್ ಸಂತ್ರಸ್ತೆಗೆ ಗೊತ್ತಾಗದಂತೆ ಕುಂತಿಯಲ್ಲಿ ಬೇರೊಬ್ಬ ಮಹಿಳೆಯನ್ನು ಮದುವೆಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಅವರು ತಮಿಳುನಾಡಿಗೆ ಹಿಂದಿರುಗಿ ಗಂಗಿಯೊಂದಿಗೆ ವಾಸಿಸುತ್ತಿದ್ದ. ನವೆಂಬರ್ 8 ರಂದು ಗಂಗಿಯ ಒತ್ತಾಯದ ಮೇರೆಗೆ ದಂಪತಿಗಳು ಖುಂಟಿಗೆ ಮರಳಿದಾಗ ಕ್ರೂರ ಘಟನೆ ನಡೆದಿದೆ. ಆದರೆ, ಆಕೆ ತನ್ನನ್ನು ಗ್ರಾಮಕ್ಕೆ ಕರೆದುಕೊಂಡು ಹೋಗುವಂತೆ ಒತ್ತಾಯಿಸಿದಾಗ ಇಬ್ಬರ ನಡುವೆ ಜಗಳ ನಡೆದಿದ್ದು, ನಿರಾಕರಿಸಿದರೆ ನೀಡಬೇಕಿದ್ದ ಹಣವನ್ನು ವಾಪಸ್ ನೀಡುವಂತೆ ಒತ್ತಾಯಿಸಿದ್ದಾಳೆ.

ಭೇಂಗ್ರಾ ತನ್ನ ಮನೆಯ ಸಮೀಪವಿರುವ ಅರಣ್ಯ ಪ್ರದೇಶಕ್ಕೆ ಅವಳನ್ನು ಕರೆದೊಯ್ದು ಅವಳ ದುಪಟ್ಟಾದಿಂದ ಗಂಗಿಯನ್ನು ಕತ್ತು ಹಿಸುಕಿ ಕೊಂದಿದ್ದಾನೆ. ಬಳಿಕ ದೇಹವನ್ನು ಸುಮಾರು 50 ತುಂಡುಗಳಾಗಿ ಕತ್ತರಿಸಿದರು. ಕಾಡು ಪ್ರಾಣಿಗಳಿಗೆ ದೇಹದ ಅವಶೇಷಗಳನ್ನು ಎಸೆದು ಹೋಗಿದ್ದರು.
ನವೆಂಬರ್ 24 ರಂದು, ನಾಯಿಯೊಂದು ದೇಹದ ಕೆಲವು ಭಾಗಗಳೊಂದಿಗೆ ಕಾಣಿಸಿಕೊಂಡ ನಂತರ ಮೃತಳ ಅವಶೇಷಗಳನ್ನು ಅರಣ್ಯ ಪ್ರದೇಶದಿಂದ ವಶಪಡಿಸಿಕೊಳ್ಳಲಾಯಿತು ಎಂದು ಪೊಲೀಸ್ ಅಧಿಕಾರಿಯನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.

ಪೊಲೀಸರಿಗೆ ಕಾಡಿನಲ್ಲಿ ಒಂದು ಚೀಲ ಸಿಕ್ಕಿತು, ಅದರಲ್ಲಿ ಗಂಗಿ ಅವರ ಆಧಾರ್ ಕಾರ್ಡ್ (Adhar card) ಮತ್ತು ಫೋಟೋ ಸೇರಿದಂತೆ ಆಕೆಯ ಪರಿಕರಗಳಿದ್ದವು. ನಂತರ ಅದನ್ನು ಆಕೆಯ ತಾಯಿ ಗುರುತಿಸಿದ್ದಾರೆ. ವಶಪಡಿಸಿಕೊಂಡ ವಸ್ತುಗಳ ಪೈಕಿ ರಕ್ತದ ಕಲೆ ಇರುವ ಕುಡುಗೋಲು ಮತ್ತು ತೋಟದ ಗುದ್ದಲಿ ಕೂಡ ಇದೆ. ಭೇಂಗ್ರಾಳನ್ನು ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ. ವಿಚಾರಣೆಯ ಸಮಯದಲ್ಲಿ ಸಂತ್ರಸ್ತೆಯನ್ನು ಕೊಲೆ ಮಾಡಿರುವುದಾಗಿ ಮತ್ತು ಆಕೆಯ ದೇಹವನ್ನು ಕತ್ತರಿಸಿರುವುದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ.

2022 ರಲ್ಲಿ ದೆಹಲಿಯಲ್ಲಿ ತನ್ನ ಲೈವ್-ಇನ್ ಪಾಲುದಾರ ಆಫ್ತಾಬ್ ಪೂನಾವಾಲಾನಿಂದ ಕೊಲ್ಲಲ್ಪಟ್ಟ ಶ್ರದ್ಧಾ ವಾಕರ್(Shraddha waker) ಅವರ ಕೊಲೆ ಪ್ರಕರಣವನ್ನು ನೆನಪಿಸುವಂತಿದೆ. ಅಫ್ತಾಬ್ 2022 ರ ಮೇ 18 ರಂದು ಶ್ರದ್ಧಾಳನ್ನು ಕತ್ತು ಹಿಸುಕಿ ಆಕೆಯ ದೇಹವನ್ನು 35 ತುಂಡುಗಳಾಗಿ ಕತ್ತರಿಸಿ ದಕ್ಷಿಣ ದೆಹಲಿಯ(South dehali) ಮೆಹ್ರೌಲಿಯಲ್ಲಿರುವ ತನ್ನ ನಿವಾಸದಲ್ಲಿ ಸುಮಾರು ಮೂರು ವಾರಗಳ ಕಾಲ 300-ಲೀಟರ್ ಫ್ರಿಜ್‌ನಲ್ಲಿ ಇರಿಸಿದ್ದನು ಮತ್ತು ಹಲವಾರು ದಿನಗಳವರೆಗೆ ನಗರದಾದ್ಯಂತ ಒಂದೊಂದೇ ತುಂಡುಗಳನ್ನ ಎಸೆಯುತ್ತಿದ್ದ.

ಇದನ್ನು ಓದಿ : ಗೋಕರ್ಣದಲ್ಲಿ ಜೀವ ಕಳೆದುಕೊಂಡ ಪ್ರವಾಸಿಗರು

ಶಿಕ್ಷಕರ ಬೇಜವಾಬ್ದಾರಿಯಿಂದ ವಿದ್ಯಾರ್ಥಿನಿ ವಿದ್ಯುತ್ ಶಾಕ್ ತಗುಲಿ ಸಾವು

ಜೈಲ್ ಅಧಿಕಾರಿ ಕಾರು ಸ್ಪೋಟಿಸುವ ಬೆದರಿಕೆ