ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ಕಾರವಾರ (Karwar): ಕಾಶ್ಮೀರದ ಪಹಲ್ಗಾಮ್ (Kashmir Phehalgam) ಉಗ್ರರ ದಾಳಿಗೆ ಬಲಿಯಾದ ಪ್ರವಾಸಿಗರ ಆತ್ಮಕ್ಕೆ ಶಾಂತಿ ಕೋರಿ  ನಗರದ ಮಿತ್ರ ಸಮಾಜದ ಆವರಣದಲ್ಲಿ ಪುಟಾಣಿಗಳು ಸ್ಕೇಟಿಂಗ್(Skating) ಮಾಡಿದರು.

ಭಾನುವಾರ  ರಾತ್ರಿ ಹಣಬರ್ ಸ್ಕೇಟಿಂಗ್ ಕ್ಲಬ್ ನ(Hanabar Skating Club) ವತಿಯಿಂದ ಪಹಲ್ಗಾಮ್ ನಲ್ಲಿ ನಡೆದ ಉಗ್ರರ ದಾಳಿಯಲ್ಲಿ(Terror Attack) ಮೃತಪಟ್ಟವರನ್ನ ಸ್ಮರಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕ್ಲಬ್ ನ ಸುಮಾರು 200 ಮಕ್ಕಳು ಮೇಣದ ಬತ್ತಿ  ಹಿಡಿದು ಭಾರತದ ಭೂಪಟ ಮಾಡಿ, ಅದರ ಸುತ್ತ ಸ್ಕೇಟಿಂಗ್ ಮಾಡುವ ಮೂಲಕ ಮೃತರನ್ನ ಸ್ಮರಿಸಿದರು.

ಕಾರ್ಯಕ್ರಮಕ್ಕೆ ಕಾರವಾರ ಅಂಕೋಲಾ ಕ್ಷೇತ್ರದ ಶಾಸಕ ಸತೀಶ್ ಸೈಲ್(Satish Sail) ಮಕ್ಕಳಿಗೆ ಕ್ಯಾಂಡಲ್ ಹಚ್ಚುವ ಮೂಲಕ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಸತೀಶ್ ಸೈಲ್,  ಉಗ್ರರು ಪ್ರವಾಸಿಗರನ್ನ ಸಾಯಿಸುವ ಮೂಲಕ ಹೇಯ ಕೃತ್ಯ ಮಾಡಿರುವುದು ಖಂಡನೀಯ ಎಂದರು.

ದೇಶದ ಸೈನ್ಯದ ಜೊತೆ, ದೇಶದ ಜೊತೆ ನಾವು ಸದಾ ಇದ್ದೇವೆ. ದೇಶದ ಭೂಸೇನೆ(Army), ನೌಕಾಸೇನೆ(Navy), ವಾಯು ಸೇನೆ(Airforce) ಉಗ್ರರಿಗೆ ತಕ್ಕ ಪಾಠ ಕಲಿಸಲಿದೆ. ನಮ್ಮಲ್ಲಿ ಇರುವ ಕದಂಬ ನೌಕಾದಳದ ಸೈನಿಕರು ಹೋರಾಡಲು ಸಿದ್ದರಾಗಿದ್ದು ಇದು ನಮ್ಮ ಹೆಮ್ಮೆ  ಎಂದರು.

ಪ್ರವಾಸಕ್ಕೆಂದು ತೆರಳಿದ ಅಮಾಯಕರನ್ನ ಗುಂಡಿಕ್ಕಿ ಕೊಲ್ಲುವ ಮೂಲಕ ಉಗ್ರರು ತಮ್ಮ ಕ್ರೌರ್ಯ ತೋರಿಸಿದ್ದಾರೆ. ನಾವೆಲ್ಲ ಭಾರತೀಯರು ಈ ಸಂದರ್ಭದಲ್ಲಿ ಒಂದಾಗಿರೋಣ. ಮೃತರ ಕುಟುಂಬದ ಜೊತೆ ಇರಬೇಕು. ಇಂತಹ ಕೃತ್ಯ ಮುಂದೆ ಆಗದಂತೆ ನಮ್ಮ ಸೇನಾಪಡೆ ಕ್ರಮ ಕೈಗೊಳ್ಳುವ ವಿಶ್ವಾಸ ಇದೆ ಎಂದರು.

ಹಣಬರ್ ಸ್ಕೇಟಿಂಗ್ ಅಕಾಡೆಮಿಯ ದಿಲೀಪ್ ಹಣಬರ್ ಮಾತನಾಡಿ,  ಏಪ್ರಿಲ್ 22 ರಂದು ನಡೆದ ಉಗ್ರರ ದಾಳಿಯ ನಂತರ ಅಕಾಡೆಮಿಯ ಮಕ್ಕಳು ಬೇಸರಗೊಂಡಿದ್ದು ಮಕ್ಕಳು ಮತ್ತು ಪಾಲಕರ ಒತ್ತಾಯದ ಮೇರೆಗೆ ಮೃತರನ್ನ ಸ್ಮರಿಸುವ ಕಾರ್ಯ ಮಾಡಲಾಗಿದೆ. ಇದೊಂದು ವಿಭಿನ್ನ ಕಾರ್ಯಕ್ರಮ ಎಂದರು.

ಈ ಸಂದರ್ಭದಲ್ಲಿ ಲಿಯೋ ಲೂಯಿಸ್, ಮಣಿ,  ರಾಜನ್ ಬಾನವಾಳಿಕರ್, ಗುರು ಸಾವಂತ್, ರವಿ, ಪ್ರಶಾಂತ್, ತರಬೇತುದಾರರಾದ ಸಚಿನ್ ದೇಸಾಯಿ, ಸುಜಿತ್ ದೇಸಾಯಿ, ರಾಜು, ವಿಜಯಾನಂದ  ಸೇರಿದಂತೆ ಹಲವರು ಉಪಸ್ಥಿತರಿದ್ದರು. ತ್ರಿವೇಣಿ ಕಾರ್ಯಕ್ರಮ ನಿರೂಪಿಸಿದರು.

ಇದನ್ನು ಓದಿ: ಕಾಳಿ ನದಿಯಲ್ಲಿ ಸ್ನಾನಕ್ಕಿಳಿದ ಯುವಕನ ಸಾವು.

ಭಟ್ಕಳದ ಒಂದೇ ಕುಟುಂಬದ ನಾಲ್ವರ ಕೊ ಪ್ರಕರಣ. ತಂದೆ, ಮಗನ ಅಪರಾಧ ಸಾಬೀತು.

ಗೋವಾದ ಜಾತ್ರೆಯಲ್ಲಿ ಕಾಲ್ತುಳಿತ. ಆರಕ್ಕೂ ಹೆಚ್ಚು ಭಕ್ತರ ಸಾವು