ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ಮಾಪ್ಸಾ, ಗೋವಾ(Mapsa,Goa) :  ಶಿರ್ಗಾಂವ್ ಜಾತ್ರೆಯ ಸಂದರ್ಭದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಆರು ಭಕ್ತರು ಸಾವನ್ನಪ್ಪಿದ್ದಾರೆ.

ಸಾವಿರಾರು ಸಂಖ್ಯೆಯ ಭಕ್ತರು ಶಿರ್ಗಾಂವ್ ನ ಲೈರೈ ದೇವಿ ಜಾತ್ರೆಯಲ್ಲಿ ಪಾಲ್ಗೊಂಡಿದ್ದರು. ಸಂಭವಿಸಿದ  ಕಾಲ್ತುಳಿತದಲ್ಲಿ  ಹಲವರು ಗಾಯಗೊಂಡಿದ್ದು, ಇನ್ನೂ ಕೆಲವರ ಸ್ಥಿತಿ ಚಿಂತಾಜನಕವಾಗಿದೆ.

ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್(Goa CM Pramod Savant) ಮಾಪ್ಸಾ ಆಸ್ಪತ್ರೆಗೆ (Mapsa Hospital) ಭೇಟಿ ನೀಡಿದ್ದು ಗಾಯಾಳುಗಳ ಆರೋಗ್ಯ ವಿಚಾರಿಸಿದ್ದಾರೆ. ಘಟನೆಯ ಕಾರಣವನ್ನು ನಿರ್ಧರಿಸಲು ಮತ್ತು ಕಾರಣರಾದವರನ್ನು ಗುರುತಿಸಲು ತನಿಖೆ ಆರಂಭಿಸಲಾಗಿದೆ ಎಂದು ಅವರು ಹೇಳಿದರು.

ಗಾಯಗೊಂಡ ವ್ಯಕ್ತಿಗಳ ನಿಖರವಾದ ಸಂಖ್ಯೆಯನ್ನು ಇನ್ನೂ ದೃಢಪಡಿಸಲಾಗಿಲ್ಲ ಎಂದು ಮುಖ್ಯಮಂತ್ರಿ ಹೇಳಿದರು ಅಧಿಕಾರಿಗಳು ಪರಿಸ್ಥಿತಿಯನ್ನು ನಿರ್ಣಯಿಸಲು ಮತ್ತು ಸಂತ್ರಸ್ತರಿಗೆ ಸಹಾಯ ಮಾಡಲು ಕೆಲಸ ಮಾಡುತ್ತಿದ್ದಾರೆ ಎಂದು ಪ್ರಮೋದ್ ಸಾವಂತ್ ತಿಳಿಸಿದ್ದಾರೆ.

ಇದನ್ನು ಓದಿ : ಕನ್ನಡಿಗರ ಮೇಲೆ ನಾಲಿಗೆ ಹರಿ ಬಿಟ್ಟ ಗಾಯಕ. ಸೋನು ನಿಗಮ್ ಮೇಲೆ ದೂರು ದಾಖಲು.

ಮಕ್ಕಳ ಬಗ್ಗೆ ಪಾಲಕರೇ ಎಚ್ಚರ. ಸಿಮೆಂಟ್ ಚೌಕಟ್ಟು ತೆಗೆಯಿತು ಮಗುವಿನ ಪ್ರಾಣ.

ರಾಜ್ಯದಲ್ಲಿ 22 ವಿದ್ಯಾರ್ಥಿಗಳು ರಾಜ್ಯಕ್ಕೆ ಫಸ್ಟ್. ಶಿರಸಿಯ ಶಾಗುಫ್ತ ಅಂಜುಮ್ ಸಾಧನೆ.