ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) : ಪ್ರಯಾಗ್‌ರಾಜ್‌ (Prayagraj) : ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ಒಂದು ಕಾಲದ ಬಾಲಿವುಡ್‌ನ  ಮಾದಕ ನಟಿ (Bollywood Actor) ಸನ್ಯಾಸ ದೀಕ್ಷೆ ಸ್ವೀಕರಿಸಿದ್ದಾರೆ. ಅವರು ಕಿನ್ನರ ಅಖಾಡದ ಮಹಾಮಂಡಲೇಶ್ವರ ಆಗಿ ಪಟ್ಟಾಭಿಷಿಕ್ತರಾಗಿದ್ದಾರೆ.

ನಟಿ ಮಮತಾ ಕುಲಕರ್ಣಿ (Mamata kulakarni)  ಅವರಿಗೆ ಶುಕ್ರವಾರ ಕುಂಭಮೇಳದಲ್ಲಿ(Kumbhamela)  ಸನ್ಯಾಸ ದೀಕ್ಷೆ ನೀಡಿ ಮಾಯಿ ಮಮತಾ ನಂದಗಿರಿ (Mayi Mamata Nandagiri) ಎಂಬ ಹೊಸ ಹೆಸರಿಡಲಾಗಿದೆ.  25 ವರ್ಷಗಳಿಂದ ವಿದೇಶದಲ್ಲಿ ಇದ್ದ ಮಮತಾ ಕುಲಕರ್ಣಿ  ಮಹಾ ಕುಂಭಮೇಳಕ್ಕೆ(Maha Kumbha Mela) ಆಗಮಿಸಿ ಪುಣ್ಯಸ್ನಾನ ಮಾಡಿದರು. ನಂತರ  ಕಿನ್ನರ ಅಖಾಡಕ್ಕೆ ತೆರಳಿ ಸನ್ಯಾಸ ದೀಕ್ಷೆ ಪಡೆದರು. ಕಿನ್ನರ ಅಖಾಡದ ಆಚಾರ್ಯ ಮಹಾಮಂಡಲೇಶ್ವರ ಸ್ವಾಮಿ ಡಾ. ಲಕ್ಷ್ಮಿನಾರಾಯಣ್‌ ತ್ರಿಪಾಠಿ ಮಹಾರಾಜ್ ಮತ್ತು ಜುನಾ ಅಖಾಡದ ಮಹಾಮಂಡಲೇಶ್ವರ ಸ್ವಾಮಿ ಜೈ ಅಂಬಾನಂದ್ ಗಿರಿ ನೇತೃತ್ವದಲ್ಲಿ ನಟಿಗೆ ಸನ್ಯಾಸ ದೀಕ್ಷೆ ನೀಡಿ ಕಿನ್ನರ ಅಖಾಡಕ್ಕೆ ಸೇರಿಸಿಕೊಳ್ಳುವ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಯಿತು. ಆ ಪ್ರಕಾರ ನಟಿ ಸ್ವಪಿಂಡ ದಾನ ಮಾಡಿದ ಬಳಿಕ ಮಾಯಿ ಮಮತಾ ನಂದಗಿರಿ ಎಂಬ ಹೊಸ ಹೆಸರಿನಲ್ಲಿ ಕಿನ್ನರ ಅಖಾಡದ ಮಹಾಮಂಡಲೇಶ್ವರ ಆಗಿ ಪಟ್ಟಾಭಿಷಿಕ್ತರಾದರು.

ಕಳೆದ ಒಂದೂವರೆ ವರ್ಷಗಳಿಂದ ಮಮತಾ ಕುಲಕರ್ಣಿ ಅವರು ಕಿನ್ನರ ಅಖಾಡದೊಂದಿಗೆ ಸಂಪರ್ಕದಲ್ಲಿದ್ದಾರೆ. ಆಕೆ ಬಯಸಿದರೆ ಯಾವುದೇ ಭಕ್ತಿ ಪಾತ್ರದ ಪಾತ್ರವನ್ನು ನಿರ್ವಹಿಸಲು ಅವಳಿಗೆ ಅವಕಾಶವಿದೆ. ಏಕೆಂದರೆ ನಾವು ಯಾರನ್ನೂ ಅವರ ಪಾತ್ರಗಳನ್ನು ನಿರ್ವಹಿಸುವುದನ್ನು ತಡೆಯುವುದಿಲ್ಲ ಎಂದು ಕಿನ್ನರ ಅಖಾಡದ ಆಚಾರ್ಯ ಮಹಾಮಂಡಲೇಶ್ವರ ಸ್ವಾಮಿ ಡಾ. ಲಕ್ಷ್ಮಿನಾರಾಯಣ್‌ ತ್ರಿಪಾಠಿ ಮಹಾರಾಜ್ ಹೇಳಿದ್ದಾರೆ.

ಕಿನ್ನರ ಅಖಾಡವನ್ನು 2018ರಲ್ಲಿ ಸ್ಥಾಪಿಸಲಾಗಿದ್ದು, ಇದು ತೃತೀಯ ಲಿಂಗಿಗಳ ಅಖಾಡ. ಜುನಾ ಅಖಾಡದ ಅಧೀನದಲ್ಲಿ ಇದು ಇದೆ.

ತೊಂಬತ್ತರ ದಶಕದಲ್ಲಿ ತನ್ನ ಮಾದಕತೆಯಿಂದಲೇ ಮಮತಾ ಕುಲಕರ್ಣಿ ಬಾಲಿವುಡ್‌ನ ಜನಪ್ರಿಯ ನಟಿಯಾಗಿ ಗುರುತಿಸಿಕೊಂಡಿದ್ದರು. ಸಲ್ಮಾನ್ ಖಾನ್, ಸಂಜಯ್ ದತ್, ಸೇರಿದಂತೆ  ಇತರ ಹೀರೊಗಳ ಸಂಗಡ ಹೀರೋಯಿನ್ ಆಗಿ ಅಭಿನಯಿಸಿದ್ದರು. ಸುಮಾರು ನಾಲ್ವತ್ತು ಚಿತ್ರಗಳಲ್ಲಿ ಅವರು ನಾಯಕಿಯಾಗಿದ್ದರು. ಸಿನೆಮಾದಿಂದ ದೂರವಾದ ಬಳಿಕ ಅಂತಾರಾಷ್ಟ್ರೀಯ ಡ್ರಗ್ ಪೆಡ್ಲ‌ರ್ ಒಬ್ಬನನ್ನು ಅವರು ಮದುವೆಯಾಗಿ ವಿದೇಶದಲ್ಲಿ ನೆಲೆಸಿದ್ದರು. ಅವರ ಮೇಲೆ 2000 ಕೋ. ರೂ. ಡ್ರಗ್ ಕೇಸ್ ಕೂಡ ಇದೆ.

ಆದರೆ ತಾನು 25 ವರ್ಷದ ಹಿಂದೆಯೇ ಅಧ್ಯಾತ್ಮದತ್ತ ಆಕರ್ಷಿತಳಾಗಿದ್ದೆ. ಸನ್ಯಾಸವನ್ನೂ ಸ್ವೀಕರಿಸಿದ್ದೆ. ಈಗ ಕುಂಭಮೇಳದಲ್ಲಿ ಪೂರ್ಣ ಪ್ರಮಾಣದ ಸನ್ಯಾಸಿ ಆಗಿ ಬದಲಾಗಿದ್ದೇನೆ ಮತ್ತು ಸನಾತನ ಧರ್ಮದ ಬಗ್ಗೆ ಮಾತನಾಡುವ ಹಕ್ಕು ಪಡೆದಿದ್ದೇನೆ ಎಂದು ಮಮತಾ ಕುಲಕರ್ಣಿ ಹೇಳಿದ್ದಾರೆ. ಮರಳಿ ಬಾಲಿವುಡ್‌ಗೆ ಹೋಗುವ ಪ್ರಶ್ನೆಯೇ ಇಲ್ಲ ಎಂದು ಅವರು ಹೇಳಿದ್ದಾರೆ.

ಇದನ್ನು ಓದಿ : ಎಲ್ಲರಿಗೂ ನಮಸ್ಕಾರ, ನಾನು ನಿಮ್ಮ ಪ್ರೀತಿಯ ಶಿವರಾಜಕುಮಾರ್

ಹಸುವಿನ ಹತ್ಯೆ ಪ್ರಕರಣದಲ್ಲಿ ಓರ್ವನ ಸೆರೆ. ಪ್ರಮುಖ ಆರೋಪಿಗಳಿಗಾಗಿ ಮುಂದುವರಿದ ತಲಾಶ್.

ಹಿಚ್ಕಡ ಬಯಲು ರಂಗಮಂದಿರದ ಯಕ್ಷಪ್ರದರ್ಶನಕ್ಕೆ 50ರ ಸಂಭ್ರಮ; ಯಕ್ಷಪಟುಗಳಿಗೆ ಸನ್ಮಾನ

ಅಕ್ರಮವಾಗಿ ಸಾಗುವಾನಿ ದಾಸ್ತಾನು ಮಾಡುತ್ತಿದ್ದ ನಾಲ್ವರ ಬಂಧನ.

ಮಹಾಸತಿಗೆ ಕೆಂಡದ ಭಕುತಿ ಪ್ರದರ್ಶಿಸಿದ ಭಕ್ತರು.