ಕುಮಟಾ(Kumta): ತಾಲೂಕಿನ ಕತಗಾಲ ಅರಣ್ಯ(Katagal Forest) ವ್ಯಾಪ್ತಿಯಲ್ಲಿ ಕಾಡು ಹಂದಿ ಬೇಟೆ(Pig Hunting) ಆಡಿದ ಮೂವರನ್ನ  ಅರಣ್ಯ ಇಲಾಖೆ (Forest Department) ಸಿಬ್ಬಂದಿಗಳು ಬಂಧಿಸಿದ್ದಾರೆ.

ಎಡತಾರೆ ಗ್ರಾಮದ ಗುರುಪ್ರಸಾದ ಗೌಡ, ಜಯಂತ ಶಂಕರ ಗೌಡ ಹಾಗೂ ಅಳಕೋಡ ಗ್ರಾಮದ ಸುಬ್ಬಾ ಗೋವಿಂದ ನಾಯ್ಕ ಬಂಧಿತರಾಗಿದ್ದಾರೆ. ಅರಣ್ಯ ಪ್ರದೇಶದಲ್ಲಿ ಕಾಡು ಹಂದಿ  ಬೇಟೆಯಾಡಿ ಮಾಂಸ ಬೇರ್ಪಡಿಸುತ್ತಿದ್ದಾಗ ದಾಳಿ(Raid) ಮಾಡಿದ್ದಾರೆ.

ಬಂಧಿತರಿಂದ  45 ಕೆಜಿ ಕಾಡು ಹಂದಿ ಮಾಂಸ, ನಾಡ ಬಂದೂಕಿನ ಗುಂಡುಗಳು, ಕಡವೆ ಕೊಂಬುಗಳು, ಮೂರು ಬೈಕ್, ಮೊಬೈಲ್ ಸೇರಿ ಇತರ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.

ಹೊನ್ನಾವರ ಡಿಎಫ್‌ಒ ಯೋಗೀಶ ಸಿ.ಕೆ., ಕುಮಟಾ ಎಸಿಎಫ್ ಕೃಷ್ಣ ಗೌಡ ಮಾರ್ಗದರ್ಶನದಲ್ಲಿ ಕತಗಾಲ ಆರ್‌ಎಫ್‌ಒ ಪ್ರೀತಿ ನಾಯ್ಕ , ಡಿಆರ್‌ಎಫ್‌ಒ ಹೂವಣ್ಣ ಗೌಡ, ಹರಿಶ್ಚಂದ್ರ ಪಟಗಾರ ಹಾಗೂ ಗಸ್ತು ಅರಣ್ಯ ಪಾಲಕರಾದ ಮಹೇಶ ಹವಳೆಮ್ಮನವರ್, ಸದಾಶಿವ ಪುರಾಣಿಕ್, ಭರತ್ ಕುಮಾರ್ ಬಿ, ಮಾಳಪ್ಪ ಮಾಕೊಂಡ, ತಾರಾ ನಾಯ್ಕ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.

ಇದನ್ನು ಓದಿ : ಅಣ್ಣನ ಕಾಲು ಮುರಿದ ತಮ್ಮನ ಕೊಲೆ

ಕುಕ್ಕೆ ಸುಬ್ರಹ್ಮಣ್ಯಕ್ಕೆ ಬರುವ ಭಕ್ತರಿಗೆ ಸೂಚನೆ

ಆರು ಎಸೆತಕ್ಕೆ ಆರು ವಿಕೆಟ್