ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ಹೊನ್ನಾವರ (Honnavar): ಬಂದರು ವಿರೋಧಿ ಹೋರಾಟಕ್ಕೆ ಶಕ್ತಿ ತುಂಬುವಂತೆ ಕಾಸರಕೋಡ ಟೊಂಕದ ಮೀನುಗಾರರು ದೈವದ ಮೊರೆ ಹೋದ ಘಟನೆ ನಡೆದಿದೆ.
ನಿಮಗೆ ಅನ್ಯಾಯವಾಗಲು ಬಿಡುವುದಿಲ್ಲ ಎಂದು ನಾವು ನಂಬಿದ ಕೆಲವರು ನಮ್ಮನ್ನು ನಡುನೀರಲ್ಲಿ ಕೈಬಿಟ್ಟರು. ಕೆಲವರು ಒಡೆದಾಳುವ ಕೆಲಸ ಮಾಡಿದರು. ನಿನ್ನ ಆಶೀರ್ವಾದದಿಂದ ಈ ಸಂಕಷ್ಟದ ಸಂದರ್ಭದಲ್ಲೂ ಹಲವರು ನಮ್ಮೊಂದಿಗಿದ್ದಾರೆ. ಯಾವದೇ ತಪ್ಪು ಮಾಡದಿದ್ದರೂ ನಮ್ಮವರನ್ನು ಜೈಲಿಗೆ ಕಳಿಸಿ ನಮ್ಮ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ ನಡೆದಿದೆ. ಈಗ ನಿನ್ನನ್ನೇ ನಂಬಿ ನಿನ್ನ ಪಾದಕ್ಕೆ ಶರಣಾಗಿದ್ದೇವೆ. ನಮ್ಮ ಜನರ ರಕ್ಷಣೆ ಮಾಡು ದೇವಿ . ನಮ್ಮ ಬದುಕಿಗೆ ಕೊಳ್ಳಿ ಇಡಲು ನಮ್ಮೂರಿಗೆ ಹೆಮ್ಮಾರಿಯಾಗಿ ಬಂದಿರುವ ಬಂದರು ಕಂಪೆನಿಯನ್ನು ಇಲ್ಲಿಂದ ಓಡಿಸು ತಾಯಿ ಓಡಿಸು ಎಂದು ದೇವರಲ್ಲಿ ಪ್ರಾರ್ಥನೆ ಮಾಡಿದ್ದಾರೆ.
ಕಾಸರಕೋಡ ಟೊಂಕದ ನೂರಾರು ಸಂಖ್ಯೆಯ ಮೀನುಗಾರರು ಕರಾವಳಿಯ ಶಕ್ತಿ ದೇವತೆ ಕುಂದಾಪುರ ಗಂಗೊಳ್ಳಿಯ ಮಹಂಕಾಳಿ ಅಮ್ಮನವರ ದೇವಸ್ಥಾನದಲ್ಲಿ ಸೋಮವಾರ ದೇವಪಾತ್ರಿಯ ಮುಂದೆ ಪ್ರಾರ್ಥಿಸಿಕೊಂಡಿದ್ದಾರೆ.
ಸತತ ಹತ್ತು ವರ್ಷಗಳ ಸುದೀರ್ಘ ಹೋರಾಟದಿಂದ ಧಣಿದಿರುವ ನಾವು ರಾಜಕಾರಣಿಗಳು ಮತ್ತು ಅಧಿಕಾರಿಗಳಿಂದ ನಮಗೆ ನ್ಯಾಯ ಸಿಗುವ ಭರವಸೆ ಇಲ್ಲ. ದೈವವೇ ಯಾವುದಾದರೂ ರೂಪದಲ್ಲಿ ನಮ್ಮ ನೆರವಿಗೆ ಬರುತ್ತದೆಂಬ ನಂಬಿಕೆಯಿಂದ ಮೀನುಗಾರರದ್ದು. ಟೊಂಕದಲ್ಲೀ ಬಂದರು ನಿರ್ಮಾಣ ಆಗದಂತೆ ಇಲ್ಲಿನ ದೈವಕ್ಕೆ ಹರಕೆ ಹೊತ್ತಿದ್ದು, ಅಭಿವೃದ್ದಿಯ ನೆಪದಲ್ಲಿ,ಸಾವಿರಾರು ಜನರ ಜೀವನೋಪಾಯಕ್ಕೆ ಮತ್ತು ಪರಿಸರಕ್ಕೆ ಕುತ್ತು ತರುವ ಕೆಲಸ ಆಗುತ್ತಿದೆ. ಜವಾಬ್ದಾರಿ ಸ್ಥಾನದಲ್ಲಿರುವ ಕೆಲವರು ಜಾಣಕುರಡುತನ ಪ್ರದರ್ಶಿಸಿ ನಮ್ಮ ಹಕ್ಕುಗಳಿಗೆ ಚ್ಯುತಿ ತರುವ ಕೆಲಸ ಮಾಡುತ್ತಿದ್ದಾರೆ. ನಮ್ಮನ್ನು ಬಲವಂತದಿಂದ ಒಕ್ಕಲೆಬ್ಬಿಸುವ ಪಿತೂರಿ ನಡೆಯುತ್ತಿದೆ ಎಂದು ದೇವಪಾತ್ರಿಯ ದೈವದ ಮುಂದೆ (ಭಾರ) ಮೀನುಗಾರರು ತಮ್ಮ ಅಳಲನ್ನು ತೋಡಿಕೊಂಡಿದ್ದು ತಮ್ಮ ನ್ಯಾಯಯುತ ಹೋರಾಟಕ್ಕೆ ಶಕ್ತಿನೀಡುವಂತೆ ಪ್ರಾರ್ಥಿಸಿಕೊಂಡು ಪ್ರಮುಖ ಪ್ರಶ್ನೆಗಳಿಗೆ ದೈವದ ಮೂಲಕ ಉತ್ತರ ಕಂಡುಕೊಳ್ಳುವ ಪ್ರಯತ್ನ ನಡೆಸಿದ್ದಾರೆ.
ಇದನ್ನು ಓದಿ: ಬಾಹ್ಯಾಕಾಶ ವಾಸ ದಿಂದ ಭೂಮಿಗೆ ಮರಳಿದ ಸುನೀತಾ. ವಾರವಂತ ಹೋದವರು 9 ತಿಂಗಳು ಕಳೆದರು.
ಅಂಗನವಾಡಿ ಮಕ್ಕಳ, ಬಾಣಂತಿ ಮತ್ತು ಗರ್ಭಿಣಿಯರ ಆಹಾರ ಕಳ್ಳತನ. ಇಬ್ಬರ ಬಂಧನ ಕಾಂಗ್ರೆಸ್ ಮುಖಂಡ ಎಸ್ಕೇಪ್