ಶಿರಸಿ : ಕೆಲ ತಾಸುಗಳ ಮುಂಚೆ ಕಟ್ಟಿದ ಹೊಸ ಮನೆಯ ಒಳ ಹೊಕ್ಕಿದ್ದ ಕುಟುಂಬದ ಮೇಲೆ ಸುಮಾರು ಐವತ್ತು ಜನರ ಗುಂಪು ದಾಳಿ ಮಾಡಿದ ಘಟನೆ ಶಿರಸಿಯಲ್ಲಿ ರಾತ್ರಿ ನಡೆದಿದೆ.

ಶಿರಸಿಯ ಕಾನಗೋಡು ಗ್ರಾಮದಲ್ಲಿ ಈ ದಾಳಿ ನಡೆದಿದೆ. ಯೋಧ ರಂಗನಾಥ್ ಆಚಾರಿ,  ಪಾಲಕರಾದ ಕೃಷ್ಣ ಆಚಾರಿ ಮತ್ತು ರಾಧಾ ಆಚಾರಿ ತೀವ್ರ ಗಾಯಗೊಂಡಿದ್ದಾರೆ. ಗಂಭಿರವಾಗಿ ಗಾಯಗೊಂಡ ಮೂವರು ಶಿರಸಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.

ಐದು ವರ್ಷದ ಹಿಂದೆ ನಾಗೇಶ್ ಶಟ್ಟಿ ಎಂಬುವವರಿಂದ ಯೋಧ ರಂಗನಾಥ್ ಆಚಾರಿ ಜಾಗ ಖರೀದಿಸಿ ಮನೆ ಕಟ್ಟಿದ್ದರು.  ನಿನ್ನೆ ಅಕ್ಷಯ ತೃತೀಯ ದಿನವಾಗಿದ್ದರಿಂದ ಮನೆ ಪ್ರವೇಶ ಮಾಡಿದ್ದರು. ಈ ಜಾಗದಲ್ಲಿ ತಮ್ಮ ಪಾಲು ಇದೆಯೆಂದು ಕೆಲವರು ತಗದೆ ತೆಗೆದಿದ್ದಾರೆ. ರಾತ್ರಿ ಒಮ್ಮೆಲೇ ಮನೆಗೆ ನುಗ್ಗಿ ದಾಳಿ ನಡೆಸಿದ್ದಾರೆ. ಮನೆಯ ಕಂಪೌಂಡ್ ದ್ವಂಸಗೈದು ನಾಶಪಡಿಸಿದ್ದಾರೆ. ಮನೆಯಲ್ಲಿ ಸಿಸಿಟಿವಿ ಕ್ಯಾಮೇರಾ ಹಾಳು ಮಾಡಿದ್ದಾರೆ. ಈ ಬಗ್ಗೆ ಶಿರಸಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.