ಕುಮಟಾ: ಕೋಡ್ಕಣಿ ಗ್ರಾಮದಲ್ಲಿ ಒಣಗಿದ ಮರ ವಿದ್ಯುತ್ ಕಂಬದ ಮೇಲೆ ಬಿದ್ದು ಕಂಬಗಳು ನೆಲಕ್ಕುರುಳಿದೆ. ಇನ್ನಷ್ಟು ಕಂಬಗಳು ಒರಗಿವೆ. ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಜನತೆ ಹಿಡಿಶಾಪ ಹಾಕುತ್ತಿದ್ದಾರೆ.
ಮಳೆಗಾಲ ಪ್ರಾರಂಭದಿಂದಲೂ ವಿದ್ಯುತ್ ಸಂಪರ್ಕ ನೀಡುವಲ್ಲಿ ವಿಫಲವಾಗುತ್ತಿರುವ ಕುಮಟಾ ಹೆಸ್ಕಾಂ ಅಧಿಕಾರಿಗಳು ಕುರ್ಚಿಗೆ ಕಾವು ಕೊಡುತ್ತಿದ್ದಾರೆ. ಜನರು ಸಮಸ್ಯೆಗಳ ಬಗ್ಗೆ ಕರೆ ಮಾಡಿದರೆ ಪೋನ್ ಸ್ವೀಕರಿಸಲು ಪುರುಷೋತ್ತಿಲ್ಲ. ನಿಮ್ಮದೊಂದೇ ಸಮಸ್ಯೆ ನೋಡುತ್ತಾ ಕೂತರೆ ಹೇಗೆ ಎಂಬ ಹಾರಿಕೆ ಉತ್ತರವನ್ನು ಸತೀಶ ಗೌಡ ಎಂಬ ಸೆಕ್ಷನ್ ಅಧಿಕಾರಿ ನೀಡುತ್ತಾರಂತೆ .
ಐದು ತಿಂಗಳ ಹಿಂದೆಯೇ ಅಪಾಯದಲ್ಲಿರುವ ಒಣಗಿರುವ ಮರ ತೆರವುಗೊಳಿಸುವಂತೆ ಸ್ಥಳಿಯರೊಬ್ಬರು ಪಂಚಾಯತ ಗಮನಕ್ಕೆ ತಂದಿದ್ದರು. ಪಂಚಾಯತನವರು ಹೆಸ್ಕಾಂ ಅವರ ಗಮನಕ್ಕೆ ತಂದಿದ್ದೇವೆ ಎಂಬ ಉತ್ತರ ನೀಡಿದ್ದರು. ಆದರೆ ಮಳೆಗಾಲ ಸಮಿಪಿಸುವವರೆಗೆ ಜನರ ಸಮಸ್ಯೆಗೆ ಸ್ಪಂದಿಸದ ಹೆಸ್ಕಾಂ ಮರ ತೆಗೆಯುವುದು ನಮ್ಮ ಕೆಲಸವಲ್ಲ. ಕಂಬದ ಮೇಲೆ ಬಿದ್ದರೆ ನಾವೇನು ಮಾಡುವುದು ಎಂಬ ಉತ್ತರ.
ಮೇಲಾಧಿಕಾರಿಗಳು ಈ ಬಗ್ಗೆ ಗಮನಹರಿಸಿ ಜನರ ಸಮಸ್ಯೆ ಪರಿಹರಿಸುವರೋ ಅಥವಾ ಕುರ್ಚಿಗೆ ಕಾವು ಕೊಡುತ್ತಿರುವ ಅಧಿಕಾರಿಗಳಿಗೆ ಬಿಸಿ ಮುಟ್ಟಿಸುತ್ತಾರೆಯೇ ಕಾದು ನೋಡಬೇಕಾಗಿದೆ. ಗ್ರಾಮದ ಜನ ರೊಚ್ಚಿಗೇಳುವ ಮುನ್ನ ಅಧಿಕಾರಿಗಳು ಸ್ಪಂದನೆ ನೀಡುವ ಕೆಲಸ ಮಾಡಬೇಕಾಗಿದೆ.