ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ಭಟ್ಕಳ(Bhatkal):  ತಾಲೂಕಿನ ಅಳ್ವೆಕೊಡಿ ಸಮುದ್ರದಲ್ಲಿ ಸಿಕ್ಕ ಅಪರಿಚಿತ ಶವವನ್ನು ಹೆಬಳೆ ಪಂಚಾಯತ(Heble Panchayat) ಹಾಗೂ ಪೊಲೀಸರ ಸಹಾಯದಿಂದ ಸಮಾಜ ಸೇವಕ ಮಂಜು ಮುಟ್ಟಳ್ಳಿ ಹಾಗೂ ಆಂಬ್ಯುಲೆನ್ಸ್ ಚಾಲಕ ವಿನಾಯಕ ನಾಯ್ಕ ಮಣ್ಕುಳಿಯ ರುಧ್ರ ಭೂಮಿಯಲ್ಲಿ ಶವ ಸಂಸ್ಕಾರ ನೆರವೇರಿಸಿದರು.

ಫೆಬ್ರವರಿ  24 ರಂದು ಅಳ್ವೆಕೋಡಿ ಬಂದರನಲ್ಲಿ(Alvekodi Bunder) ಸುಮಾರು 50 ರಿಂದ 55 ವರ್ಷದ ಅಪರಿಚಿತ ಗಂಡಸಿನ ಶವ (ಹೆಸರು ವಿಳಾಸ ತಿಳಿದುಬಂದಿರುವುದಿಲ್ಲ) ಸಿಕ್ಕಿತ್ತು. ಅರಬ್ಬೀ ಸಮುದ್ರದಲ್ಲಿ ತೇಲುತ್ತಿರುವ ಶವವನ್ನು ಭಟ್ಕಳ ಕರಾವಳಿ ಕಾವಲು ಪೊಲೀಸ್ (Coastal Service Police) ಇಂಟರ್‌ಸೆಪ್ಪರ್ ಬೋಟ್ ಮೂಲಕ ಹಗ್ಗ ಕಟ್ಟಿ ಎಳೆದುಕೊಂಡು ತೆಂಗಿನಗುಂಡಿ ಬಂದರಿಗೆ (Tenginagundi Bunder) ತಂದಿದ್ದರು. ಮೃತನ ಕೆಳ ತುಟಿಯು ಮೀನುಗಳು ತಿಂದಿದ್ದು ಗಾಯವಾಗಿದ್ದವು.

ಭಟ್ಕಳ ಸರಕಾರಿ ಆಸ್ಪತ್ರೆಯ(Bhatkal Government Hospital) ಶವಗಾರದಲ್ಲಿ 7 ‌ದಿನ  ಕಾಲ ಮೃತ ದೇಹವನ್ನು ಇಡಲಾಗಿತ್ತು. ಮೃತನ  ಗುರುತು ಪತ್ತೆಯಾಗದೆ. ಮೃತದೇಹವು ಸಂಬಂಧಿಕರು ಪತ್ತೆಯಾಗದ ಕಾರಣ ಭಟ್ಕಳ ಗ್ರಾಮೀಣ ಠಾಣೆಯ(Bhatkal Rural Station) ಪೊಲೀಸರು ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಹೆಬಳೆ ಪಂಚಾಯತ  ಪಿ.ಡಿ.ಓಗೆ ಹಸ್ತಾಂತರ ಮಾಡಿದರು. ಬಳಿಕ ಸಮಾಜ ಸೇವಕ ಮಂಜುನಾಥ ಮುಟ್ಟಳ್ಳಿ ಹಾಗೂ ಲೈಫ್ ಕೇರ್ ಆಂಬುಲೆನ್ಸ್ ಚಾಲಕ ವಿನಾಯಕ ನಾಯ್ಕ ಅವರ ಸಹಯೋಗದೊಂದಿಗೆ ಮಣ್ಕುಳಿಯ ಹಿಂದೂ ರುದ್ರಭೂಮಿಯಲ್ಲಿ ವಿಧಿ ವಿಧಾನಗಳೊಂದಿಗೆ ಅಂತ್ಯಸಂಸ್ಕಾರವನ್ನು ನೆರವೇರಿಸಿದ್ದಾರೆ

ಈ ವೇಳೆ  ಠಾಣೆ  ಎ.ಎಸೈ ವಿನಾಯಕ ನಾಯ್ಕ, ಹೆಬಳೆ ಗ್ರಾಮ ಪಂಚಾಯತ ಪಿ.ಡಿ.ಓ ಮಂಜುನಾಥ ಗೊಂಡ, ಪೊಲೀಸ್ ಸಿಬ್ಬಂದಿಗಳಾದ ಅಂಬರೀಶ ಕುಂಬಾರಿ, ಕಿರಣ ಟಿಲಗಂಜಿ ಇದ್ದರು.

ಇದನ್ನು ಓದಿ : ಅರಬ್ಬೀ ಸಮುದ್ರದಲ್ಲಿ ರಾತ್ರಿ ಎಂಟೆದೆ ಬಂಟ. ಬದುಕಿ ಬಂದದ್ದೇ ಪವಾಡ.

ದೇಹದಲ್ಲಿ ಚಿನ್ನ ಸಾಗಾಟ. ವಿಮಾನ ನಿಲ್ದಾಣದಲ್ಲಿ ನಟಿ ಆರೆಸ್ಟ್.

ಕ್ಯಾಂಪ್ ನಲ್ಲಿದ್ದ ವಿದ್ಯಾರ್ಥಿನಿ ಆಕಸ್ಮಿಕವಾಗಿ ಸಾವು.