ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ಪ್ರಯಾಗ್ ರಾಜ್(Prayagraj): ಕರ್ನಾಟಕದಲ್ಲಿ ಐಎಎಸ್ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದ ವ್ಯಕ್ತಿಯೊಬ್ಬರು ನಾಗಾಸಾಧುವಾಗಿ ಮಹಾ ಕುಂಭ ಮೇಳದಲ್ಲಿ ಕಾಣಿಸಿಕೊಂಡಿದ್ದಾರೆ.
ರಾಯಚೂರು ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದ ಐ.ಆರ್ ಪೆರುಮಾಳ್ ಈಗ ನಾಗಾಸಾಧು ಬದಲಾಗಿದ್ದಾರೆ. ಇವರನ್ನು ಗುರುತಿಸಿದ ಕೆಲವರು ಅಚ್ಚರಿಪಟ್ಟಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಪೆರುಮಾಳ್ ಅವರ ಫೋಟೋ ವೈರಲ್ ಆಗುತ್ತಿದ್ದು, ಅವರ ನಡೆಗೆ ಅನೇಕರಿಗೆ ಆಶ್ಚರ್ಯವನ್ನುಂಟು ಮಾಡಿದೆ.
ಪೆರುಮಾಳ್ 1993-94 ರವರೆಗೆ ರಾಯಚೂರು ಜಿಲ್ಲಾ ಅಧಿಕಾರಿಯಾಗಿ ನಂತರ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದರು. ರಾಜ್ಯಾದ್ಯಂತ ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸಿದ ನಂತರ ಅವರು 2012 ರಲ್ಲಿ ನಿವೃತ್ತರಾಗಿದ್ದರು.
ತಮಿಳುನಾಡಿನ ಮಧುರೈ ಜಿಲ್ಲೆಯ ಇರುಂಜಮುಡಿ ಶಿವ ದೇವಾಲಯದ ಬಳಿ 2014 ರಲ್ಲಿ ಪೆರುಮಾಳ್ ಆಶ್ರಮವನ್ನು ನಿರ್ಮಿಸಿದರು. ಈಗ ಶಿವಯೋಗಿ ಪೆರುಮಾಳ್ ಸ್ವಾಮೀಜಿ ಎಂದು ಕರೆಯಲ್ಪಡುವ ಮಾಜಿ ಐಎಎಸ್ ಅಧಿಕಾರಿ ಪ್ರಯಾಗರಾಜ್ನಲ್ಲಿ ನಡೆದ ಮಹಾ ಕುಂಭಮೇಳದಲ್ಲಿ ಕಾಣಿಸಿಕೊಂಡಿದ್ದಾರೆ.
ಇದನ್ನು ಓದಿ : ವೈದ್ಯೆಯ ಅತ್ಯಾಚಾರ, ಕೊಲೆ ಪ್ರಕರಣ. ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿದ ನ್ಯಾಯಾಲಯ.
ಹೊನ್ನಾವರ ಸೇತುವೆ ಮೇಲೆ ಭೀಕರ ಅಪಘಾತ. ಯುವತಿ ದುರ್ಮರಣ
ಮುರ್ಡೇಶ್ವರ ಮಹಾ ರಥೋತ್ಸವ ಸಂಪನ್ನ. ಭಕ್ತಿ-ಭಾವದಿಂದ ತೇರು ಎಳೆದ ಭಕ್ತರು
ಮಣಿ ಮಾರುವ ಹುಡುಗಿ ಕುಂಭಮೇಳದಲ್ಲಿ ಫೇಮಸ್. ಕಾಟ ತಾಳಲಾರದೆ ಸಂಕಷ್ಟ.
ಆಪತ್ಕಾಲದಲ್ಲಿ ನೆರವಿಗೆ ಬಾರದ 108 ಆಂಬುಲೆನ್ಸ್, ವ್ಯಕ್ತಿ ಸಾವು. ಮೃತದೇಹವಿಟ್ಟು ಪ್ರತಿಭಟನೆ.